Saturday, July 27, 2024
Google search engine
Homeತುಮಕೂರು ಲೈವ್ಲಾಕ್ ಡೌನ್ ನಡುವೆ ಹುಟ್ಟು ಹಬ್ಬ ಆಚರಿಸಿಕೊಂಡು ಬಿರಿಯಾನಿ‌ ಹಂಚಿದ ಶಾಸಕ: ಮೂವರ ಮೇಲೆ ಪ್ರಕರಣ...

ಲಾಕ್ ಡೌನ್ ನಡುವೆ ಹುಟ್ಟು ಹಬ್ಬ ಆಚರಿಸಿಕೊಂಡು ಬಿರಿಯಾನಿ‌ ಹಂಚಿದ ಶಾಸಕ: ಮೂವರ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು

Public story.in


ಗುಬ್ಬಿ: ಲಾಕ್ ಡೌನ್ ನಡುವೆ ಜನರಿಗೆ‌ ಬಿರಿಯಾನಿ ಹಂಚಿದ ತುರುವೇಕೆರೆ ಶಾಸಕ ಮಸಾಲ ಜಯರಾಮ್ ಜನರಿಗೆ ಲಾಕ್ ಡೋನ್ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

ಗುಬ್ಬಿ ತಾಲೂಕಿನ ಸಿ.ಎಸ್.ಹೋಬಳಿಯ ಇಡಗೂರು ಗ್ರಾಮದಲ್ಲಿ ತುರುವೇಕೆರೆ ಶಾಸಕ ಮಸಾಲೆ ಜಯರಾಂ ಶನಿವಾರ ಹುಟ್ಟು ಹಬ್ಬ ಆಚರಣೆ ಮಾಡಿದರು. ಈ ವೇಳೆ ಸಾಮಾಜಿಕ ಅಂತರಕ್ಕೆ ತಿಲಾಂಜಲಿ ನೀಡಿದರು.


ಕಾರ್ಟೂನ್ ಕಾರ್ನರ್: ಕೆ.ಎಂ.ಮುಸ್ತಾಫ, ರಿಪ್ಪನ್ ಪೇಟೆ


ನೂರಾರು ಜನರು ಸೇರಿದ್ದರು. ಲಾಕ್ ಡೌನ್ ಉಲ್ಲಂಘನೆ ಮಾಡಿದ ಶಾಸಕರು ಕೇಕ್ ಕತ್ತರಿಸಿದರು.‌ ಶಾಸಕರು ಕೈಗವಸು ಧರಿಸಿದ್ದರು. ಅಲ್ಲಿದ್ದ ಜನರು ಕನಿಷ್ಟ ಮಾಸ್ಕ್ ಸಹ ಧರಿಸಿರಲಿಲ್ಲ.

ಸಿ.ಎಸ್.ಪುರ ಪೊಲೀಸರ ನಿರ್ಲಕ್ಷ್ಯ‌ ಎದ್ದು ಕಾಣುತ್ತಿತ್ತು. ಹುಟ್ಟು ಹಬ್ಬದ ಸಮಾರಂಭವನ್ನು ಕೆಲವು ಕಾರ್ಯಕರ್ತರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಮೇಲೆ ಘಟನೆ ವೈರಲ್ ಆಯಿತು.

ಮೂವರ ಮೇಲೆ ಎಫ್ಐಆರ್


ಘಟನೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಕೊಂಡ‌ ಜಿಲ್ಲಾಡಳಿತ ತಹಶೀಲ್ದಾರ್ ಮೂಲಕ ಪೊಲೀಸರಿಗೆ ನೋಟಿಸ್ ನೀಡಲಾಗಿದೆ.

ಬಗ್ಗೆ ಉತ್ತರಿಸುವಂತೆ ಸರ್ಕಲ್ ಇನ್‌ಸ್ಪೆಕ್ಟರ್‌ ರಾಮಕೃಷ್ಣಯ್ಯ ಅವರಿಗೆ ನೋಟಿಸ್ ನೀಡಲಾಗಿದೆ’ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

‘ಸಬ್‌ಇನ್‌ಸ್ಪೆಕ್ಟರ್ ನಾಗರಾಜು ನಮಗೆ ಈ ಕಾರ್ಯಕ್ರಮ ವಿಚಾರವನ್ನು ಗಮನಕ್ಕೆ ತಂದಿರಲಿಲ್ಲ. ಈ ಬಗ್ಗೆ ಪಿಎಸ್‌ಐ ಅವರಿಂದ ಕಾರಣ ಕೇಳಿದ್ದೇನೆ’ ಎಂದು ರಾಮಕೃಷ್ಣಯ್ಯ ತಿಳಿಸಿದ್ದಾರೆ.

ಇದಾದ ಬಳಿಕ ಸಿ.ಎಸ್.ಪುರ ಪೊಲೀಸರು ಶಾಸಕರ ಮೂವರು ಹಿಂಬಾಲಕರ ಮೇಲೆ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ಹುಟ್ಟುಹಬ್ಬ ಆಚರಣೆ ಆಯೋಜನೆ ಮಾಡಿದ್ದ ಇಡಗೂರು ರವಿ, ರಾಜೇನಹಳ್ಳಿ ವಸಂತಕುಮಾರ ಹಾಗೂ ಹೊನ್ನೇಗೌಡ ಮತ್ತು ಇನ್ನಿತರರ ಮೇಲೆ ಸುಮೊಟೊ ಪ್ರಕರಣ ದಾಖಲಾಗಿದೆ.

ಸಿಎಸ್ ಪುರ ಠಾಣೆಯ ಕಾನ್ ಸ್ಟೆಬಲ್ ನವೀನ್ ಅವರ ದೂರಿನನ್ವಯ ಸಿ.ಎಸ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?