Saturday, July 27, 2024
Google search engine
Homeತುಮಕೂರು ಲೈವ್ಶಾಸಕ ಗೌರಿಶಂಕರ್ ವಿರುದ್ಧ ತನಿಖೆಗೆ ಪ್ರಧಾನಿ ಸೂಚನೆ: ಇಕ್ಕಟ್ಟಿಗೆ ಸಿಕ್ಕ ಜೆಡಿಎಸ್

ಶಾಸಕ ಗೌರಿಶಂಕರ್ ವಿರುದ್ಧ ತನಿಖೆಗೆ ಪ್ರಧಾನಿ ಸೂಚನೆ: ಇಕ್ಕಟ್ಟಿಗೆ ಸಿಕ್ಕ ಜೆಡಿಎಸ್

ತುಮಕೂರು; ವಿಧಾನಸಭಾ ಚುನಾವಣೆ ವೇಳೆ ತೀವ್ರ ಆರೋಪಕ್ಕೆ ಕಾರಣವಾಗಿದ್ದ ನಕಲಿ ಆರೋಗ್ಯ ವಿಮೆ ಪಾಲಿಸಿ ವಿಷಯ ಈಗ ಶಾಸಕ ಬಿ.ಸಿ.ಗೌರಿಶಂಕರ್ ಕೊರಳಿಗೆ ಉರುಳಾಗಿದೆ.
ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ತನಿಖೆಗೆ ಸೂಚನೆ ಬಂದಿದ್ದು, ಜೆಡಿಎಸ್ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.

ಇದರ ಹಿಂದೆ ಮಾಜಿ ಶಾಸಕ ಸುರೇಶಗೌಡ ಅವರ ಸಹೋದರ ಇರುವುದು ವಿಶೇಷ.

ಚುನಾವಣೆ ಸಮಯದಲ್ಲಿ ನಕಲಿ ಗುಂಪು ಆರೋಗ್ಯ ವಿಮೆ ಬಾಂಡ್ ಗಳನ್ನು ಹಂಚಲಾಗಿದೆ. ಇದರ ಹಿಂದೆ ಶಾಸಕ ಗೌರಿಶಂಕರ್ ಅವರ ಚುನಾವಣಾ ಆಮಿಷದ ಭಾಗವಾಗಿತ್ತು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಮಾಜಿ ಶಾಸಕ ಬಿ.ಸುರೇಶಗೌಡರ ತಮ್ಮ ರಮೇಶ್ ಬೆಟ್ಟಯ್ಯ ದೂರು ನೀಡಿದ್ದರು.
ಈ ದೂರಿನ ತನಿಖೆ ನಡೆಸುವಂತೆ ಪ್ರಧಾನಿಮಂತ್ರಿ ಕಾರ್ಯಾಲಯದಿಂದ ಮುಖ್ಯಮಂತ್ರಿ ಕಚೇರಿಗೆ ಸೂಚನೆ ಬರುತ್ತಿದ್ದಂತೆ ಹಳೆಯ ಆರೋಪಕ್ಕೆ ಜೀವ ಬಂದಂತಾಗಿದೆ.

ಈಗ ತು‌ಮಕೂರು ಗ್ರಾಮಾಂತರ ಠಾಣೆಯಲ್ಲಿ ಗೌರಿಶಂಕರ್ ವಿರುದ್ದ ವಂಚನೆ ಸೇರಿದಂತೆ ವಿವಿಧ ಅರೋಪಗಳಡಿ ದೂರು ದಾಖಲಿಸಿಕೊಳ್ಳಲಾಗಿದೆ. ತನಿಖೆ ಇನ್ನೂ ನಡೆಯಬೇಕಷ್ಟೆ..

ಪ್ರಕರಣದಲ್ಲಿ ಶಾಸಕರೇ A1 ಆರೋಪಿಯಾಗಿದ್ದಾರೆ. ಒಟ್ಟು ಐವರನ್ನು ಎಫ್ ಐಆರ್ ನಲ್ಲಿ ಉಲ್ಲೇಖಿಸಿದ್ದು, ಇನ್ನೂ ಇತರರು ಎಂದು ಸೇರಿಸಲಾಗಿದೆ. ಹೀಗಾಗಿ ತನಿಖೆಯ ಬಳಿಕ ಎಷ್ಟೆಲ್ಲ ಆರೋಪಿಗಳು ಇದ್ದಾರೆ ಎಂದು ತಿಳಿದು ಬರಲಿದೆ.

ಪಾಲಿಸಿ ನೀಡುವಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು irda ಈಗಾಗಲೇ ಪಾಲಿಸಿಗಳನ್ನು ರದ್ದುಪಡಿಸಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರದ 16 ಸಾವಿರ ಮಕ್ಕಳಿಗೆ ವಿಮೆ ಬಾಂಡ್ ವಿತರಿಸಲಾಗಿದೆ ಎಂಬ ಅಂಕಿ ಅಂಶ ದೂರಿನಲ್ಲಿದೆ.
ಕ್ಷೇತ್ರದಲ್ಲಿ ನಲವತ್ತು ಸಾವಿರ ನಕಲಿ ಬಾಂಡ್ ಗಳನ್ನು ಹಂಚಲಾಗಿದೆ ಎಂದು ರಮೇಶ್ ಬೆಟ್ಟಯ್ಯ ದೂರಿನಲ್ಲಿ ಹೇಳಿದ್ದಾರೆ.

ಶಾಸಕರು ಅಷ್ಟೇ ಅಲ್ಲದೇ ಕಿಶೋರ್, ದಿ ನ್ಯೂ ಇಂಡಿಯಾ ಅಷ್ಯೂರೆನ್ಸ್ ಕಂಪೆನಿಯ ಡಿಎಂ ದೇವೇಂದ್ರ ಪ್ರಸಾದ್, ಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿ, ಒನ್ ರೂಪಿ ಚಾರಿಟಬಲ್ ಟ್ರಸ್ಟ್, ಮೆಡಿ ಅಸಿಸ್ಟೆಂಟ್ ಕಂಪನಿಯ ಅಧಿಕಾರಿಗಳ ವಿರುದ್ಧವೂ ಎಫ್ ಐಆರ್ ದಾಖಲಿಸಲಾಗಿದೆ.

ಚುನಾವಣಾ ಅಕ್ರಮದ ಕುರಿತು ಶಾಸಕರ ವಿರುದ್ದ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಈ ವಿಷಯ ಇಡೀ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗುತ್ತಿದೆ.

ರಮೇಶ್ ಬೆಟ್ಟಯ್ಯ ಅವರು ಮೂಲತಃ ಸಾಪ್ಟ್ ವೇರ್ ಎಂಜಿನಿಯರಾಗಿದ್ದು, ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಕೆಲಸ ಮಾಡುತ್ತಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇವರು ಅಷ್ಟೇನು ಪರಿಚಿತರಲ್ಲ. ಆದರೆ ರಾಜ್ಯದ ಶಿಕ್ಷಣ ರಂಗದಲ್ಲಿ ಇವರ ಹೆಸರು ಚಿರಪರಿಚಿತ.

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳು, ಗುಣಮಟ್ಟದ ಪಾಠದ ವಿಚಾರದಲ್ಲಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ.
ಮಾಹಿತಿ ಹಕ್ಕು ಕಾರ್ಯಕರ್ತರು ಆಗಿರುವ ಅವರು ಶಿಕ್ಷಣದ ಬಗ್ಗೆ ವಿಶೇಷ ಅಸ್ಥೆ ವಹಿಸಿದ್ದಾರೆ. ಎಲೆ‌ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದ ಅವರು ಈ ದೂರಿನ ಮೂಲಕ ಒಮ್ಮೆಲೆ ಮುಂಚೂಣಿಗೆ ಬಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?