Saturday, July 27, 2024
Google search engine
HomeUncategorizedಶಿರಾದಲ್ಲಿ ಆ್ಯಪ್ ಸದಸ್ಯತ್ವ ಅಭಿಯಾನ‌ಕ್ಕೆ ಸಿಕ್ಕಿತು ಬೆಂಬಲ

ಶಿರಾದಲ್ಲಿ ಆ್ಯಪ್ ಸದಸ್ಯತ್ವ ಅಭಿಯಾನ‌ಕ್ಕೆ ಸಿಕ್ಕಿತು ಬೆಂಬಲ

Publicstory


ಶಿರಾ: ಆಮ್ ಆದ್ಮಿ ಪಾರ್ಟಿಯ ಸದಸ್ಯತ್ವ ಅಭಿಯಾನಕ್ಕೆಶಿರಾ ನಗರದ ಮಂಗಳವಾರ ಸಂತೆಯಲ್ಲಿ ಆಪ್ತ ಸ್ಪಂದನೆ ಸಿಕ್ಕಿದೆ ಎಂದು ತಾಲ್ಲೂಕು ಆಮ್ ಆದ್ಮಿ ಪಾರ್ಟಿ ಹರ್ಷ ವ್ಯಕ್ತಪಡಿಸಿದೆ.

ನಗರದ ಎಪಿಎಂಸಿ ಮಾರುಕಟ್ಟೆ, ಐಬಿ ಸರ್ಕಲ್, ರಂಗನಾಥ ಕಾಲೇಜು ಸರ್ಕಲ್, ಬಸ್ ಸ್ಟಾಂಡ್ ಹಾಗೂ ಮಲ್ಲಿಕಾ ರಹಾನ್ ದರ್ಗಾ ಗೇಟ್ ನಲ್ಲಿ ಎಎಪಿ ಸದಸ್ಯತ್ವ ಅಭಿಯಾನ ನಡೆಸಿದ ನಂತರ ತಾಲ್ಲೂಕು ಆಮ್ ಆದ್ಮಿ ಪಕ್ಷ ಪತ್ರಿಕಾ ಹೇಳಿಕೆ ನೀಡಿದೆ.
ಸ್ವಯಂ ಆಸಕ್ತಿಯಿಂದ ನೂರಾರು ಜನರು ಸದಸ್ಯತ್ವ ನೋಂದಣಿ ಮಾಡಿಕೊಂಡಿದ್ದಲ್ಲದೆ, ಜೆಡಿಎಸ್ ಕಾಂಗ್ರೆಸ್ ಬಿಜೆಪಿಯೆಂಬ ಜೆಸಿಬಿ ಪಕ್ಷಗಳಿಗೆ ಆಮ್ ಆದ್ಮಿ ಪಕ್ಷವೇ ಪರ್ಯಾಯ ಎಂದು ಘೋಷಿಸಿದರು.

ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತಾಲ್ಲೂಕಿನಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ತಳಮಟ್ಟದಲ್ಲಿ ಕಟ್ಟಲು ಸಂಕಲ್ಪ ತೊಡುವುದಾಗಿ ನೂತನ ಆಮ್ ಆದ್ಮಿ ಪಾರ್ಟಿ ಸದಸ್ಯರು ಭರವಸೆ ನೀಡಿದರು.

ಎಎಪಿಯ ಸದಸ್ಯತ್ವ ಅಭಿಯಾನದಲ್ಲಿ ಶಿರಾ ವಿಧಾನಸಭಾ ಕ್ಷೇತ್ರದ ವೀಕ್ಷಕ ಅಂಕಸಂದ್ರ ಪ್ರೇಮ ಕುಮಾರ್, ಜಿಲ್ಲಾ ಮಾಧ್ಯಮ ಸಂಯೋಜಕ ನಾಗೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಶಶಿಕುಮಾರ್ ಆರ್, ಕಾರ್ಯದರ್ಶಿ ಸಜೀರ್, ತಾಲ್ಲೂಕು ಮಾಧ್ಯಮ ಸಂಯೋಜಕ ಗೋಮಾರದಹಳ್ಳಿ ಪಿ ಮಂಜುನಾಥ್, ಸಾಧಿಕ್, ಉತ್ಪುಲ್ಲಾ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?