Friday, July 26, 2024
Google search engine
Homeತುಮಕೂರು ಲೈವ್ಸಮಯ ಸಾಧಕ ರಾಜಕಾರಣಿ ಎಂ.ಟಿ.ಕೃಷ್ಣಪ್ಪ : ವಿ.ಬಿ.ಸುರೇಶ್ ಲೇವಡಿ

ಸಮಯ ಸಾಧಕ ರಾಜಕಾರಣಿ ಎಂ.ಟಿ.ಕೃಷ್ಣಪ್ಪ : ವಿ.ಬಿ.ಸುರೇಶ್ ಲೇವಡಿ

Publicstory.in


ತುರುವೇಕೆರೆ:ತಾಲ್ಲೂಕಿನ ಮುನಿಯೂರಿನ ಹಲ್ಲೆ ಪ್ರಕರಣದಲ್ಲಿ ವಿನಾಕಾರಣ ಬಿಜೆಪಿ ಪಕ್ಷವನ್ನು ಹಾಗು ಶಾಸಕರನ್ನು ಮುನ್ನೆಲೆಗೆ ತರುವ ಮೂಲಕ ದುರುದ್ದೇಶದ ರಾಜಕಾರಣದ ಹುಚ್ಚಾಟವನ್ನು ಇಲ್ಲಿಗೆ ಕೈಬಿಡದ ಬೇಕೆಂದು ಬಿಜೆಪಿ ರಾಜ್ಯ ರೇಷ್ಮೆ ಪ್ರಕೋಷ್ಠಕದ ಸಂಚಾಲಕ ವಿ.ಬಿ.ಸುರೇಶ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ, ಮುನಿಯೂರಿನ ಹಲ್ಲೆ ಪ್ರಕರಣದ ವ್ಯಕ್ತಿಗೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸುತ್ತಾ
ನೂರಾರು ಜನರನ್ನು ಸೇರಿಸಿ ಧರಣಿ ಮಾಡಿಸಿ ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಹರಡಲು ಪರೋಕ್ಷವಾಗಿ ಕಾರಣರಾಗಿದ್ದಾರೆಂದು ದೂರಿದರು.

ನೀವು ಬಿಜೆಪಿ ಕಚೇರಿ ನುಗ್ಗಿ ಒಡೆಯುವುದಾಗಿ ನಿನ್ನೆ ಹೇಳಿದ್ದೀರಿ. ಹಾಗಾದರೆ ನಾವೇನು ಕೈಗೆ ಬಳತೊಟ್ಟು ಕುಳಿತಿದ್ದೀವಾ? ಬನ್ನಿ ಕಚೇರಿಗೆ ನೋಡೋಣವೆಂದು ಸವಾಲು ಹಾಕಿದರು.

ನಿಮ್ಮ ಸಮಯ ಸಾಧಕ ರಾಜಕಾರಣದ ಕುತಂತ್ರ ಕ್ಷೇತ್ರದ ಜನತೆಗೆ ಗೊತ್ತಿದೆ ಎಂದು ಹೇಳಿದರು.

ನಿಮಗೆ ರಾಜಕೀಯ ಶಕ್ತಿ ಕೊಟ್ಟ ದಬ್ಬೇಘಟ್ಟ ಹೋಬಳಿಗೆ ನೀವು ಕೊಟ್ಟ ಕೊಡುಗೆ ಏನು? ತಾಲ್ಲೂಕಿನಲ್ಲಿ ಜನತದಳ ಸಾಧನೆ ಶೂನ್ಯವೆಂದು ಲೇವಡಿ ಗೈದರು.

ಶಾಸಕ ಮಸಾಲಜಯರಾಂ ಅಣ್ಣನ ಮಗ ಕುಮಾರ್ ಮಾತನಾಡಿ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನಮ್ಮ ಕುಟುಂಬದ ಸದಸ್ಯರೊಬ್ಬರನ್ನು ದುರ್ಬಳಕೆ ಮಾಡಿಕೊಂಡಿ ಸ್ವಂತ ಸಹೋದರರ ವಿರುದ್ದ ಎತ್ತಿ ಕಟ್ಟಿ ಸಂಸಾರದಲ್ಲಿ ಹುಳಿ ಹಿಂಡುವ ಕೆಲಸಕ್ಕೆ ಮುಂದಾಗಿದ್ದಾರೆ. ರಾಜಕಾರಣ ಅವರು ಮಾಡಿಕೊಳ್ಳಲಿ, ಆದರೆ ನಮ್ಮ ಕುಟುಂಬವನ್ನು ರಾಜಕಾರಣಕ್ಕೆ ಎಳೆದು ತಂದರೆ ಕೃಷ್ಣಪ್ಪನಿಗೆ ತಕ್ಕ ಪಾಠ ಕಲಿಸಬೇಕಾದೀತು ಎಂದು ಕಿಡಿಕಾರಿದರು.

ಸುದ್ದಿ ಗೋಷ್ಠಿಯಲ್ಲಿ ವಿ.ಟಿ.ವೆಂಕಟರಾಮು, ಚಿದಾನಂದ್, ಸೋಮಣ್ಣ, ಶಾಸಕರ ಸಹೋದರರಾದ, ತಿಮ್ಮಪ್ಪ, ಶ್ರೀನಿವಾಸ್, ರುದ್ರೇಶ್, ಸುರೇಶ್, ಎ.ಬಿ.ಗೌಡ ಮತ್ತು ಗೋವಿಂದೇಗೌಡ ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?