Saturday, July 20, 2024
Google search engine
Homeಪೊಲಿಟಿಕಲ್ಸರ್ಕಾರ ಉಳಿಸಿಕೊಳ್ಳಲು ಮೂವರು ಸಚಿವರಿಗೆ ಕೊಕ್ ನೀಡಲಿದ್ದಾರೆಯೇ ಯಡಿಯೂರಪ್ಪ?

ಸರ್ಕಾರ ಉಳಿಸಿಕೊಳ್ಳಲು ಮೂವರು ಸಚಿವರಿಗೆ ಕೊಕ್ ನೀಡಲಿದ್ದಾರೆಯೇ ಯಡಿಯೂರಪ್ಪ?

ಸಿದ್ದೇಶ ತ್ಯಾಗಟೂರು


ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಶಾಸಕರ ಬಂಡಾಯದಿಂದ ಬಿಜೆಪಿಯಲ್ಲಿ ಭಾರಿ ಸಂಚಲನವೇ ಸೃಷ್ಟಿಯಾಗಿದೆ.

ಈ ಬೆಳವಣಿಗೆಯಿಂದ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಕೊಂಚ ಗೊಂದಲಕ್ಕೆ ಬಿದ್ದಿದ್ದಾರೆ… 2008ರಲ್ಲಿ ಅಧಿಕಾರಕ್ಕೆ ಬಂದಾಗಲೂ ಇದೇ ರೀತಿ ಅವರ ಆಪ್ತರೇ ಬಂಡಾಯದ ಬಾವುಟ ಹಾರಿಸಿದ್ದರು… ಹೀಗಾಗಿ ಈ ಬಾರಿ ಯಡಿಯೂರಪ್ಪ ಎಚ್ಚರಿಕೆಯಿಂದ ಹೆಜ್ಜೆ ಇಡಲು ಮುಂದಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.

ಅವರ ಆಪ್ತರ ಸಲಹೆ ಪಡೆದು ಡ್ಯಾಮೇಜ್ ಕಂಟ್ರೋಲ್ ಫಾರ್ಮುಲಾ ಸಿದ್ಧಪಡಿಸಿದ್ದಾರೆ. ಅತೃಪ್ತರ ಜೊತೆ ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಏನದು ಯಡಿಯೂರಪ್ಪ ಡ್ಯಾಮೇಜ್ ಕಂಟ್ರೋಲ್ ಫಾರ್ಮುಲಾ..!

ಬಂಡಾಯ ಶಾಸಕರ ಅಸಮಾಧಾನ ಬಗೆಹರಿಸಲು ಕೆಲವರಿಗೆ ಮಂತ್ರಿಭಾಗ್ಯ ನೀಡಲು BSY ಸಿದ್ಧತೆ ನಡೆಸಿದ್ದಾರೆ…

ಮಾರ್ಗ ನಂ.1


ಫಾರ್ಮುಲಾ ಪ್ರಕಾರ ಶಶಿಕಲಾ ಜೊಲ್ಲೆಯವರನ್ನ ಸಚಿವ ಸ್ಥಾನದಿಂದ ಕೆಳಗಿಳಿಸಿ ಬಂಡಾಯ ಶಾಸಕ ಉಮೇಶ್ ಕತ್ತಿ ಅವರನ್ನ ಮಂತ್ರಿ ಮಾಡಲು ಚಿಂತನೆ ನಡೆದಿದೆ…

ಮಾರ್ಗ -2


ಎರಡನೆಯದಾಗಿ ಸಿ.ಸಿ. ಪಾಟೀಲ್ ಅವರನ್ನ ಸಂಪುಟದಿಂದ ಕೈಬಿಟ್ಟು ಆ ಸ್ಥಾನದಲ್ಲಿ ಮುರುಗೇಶ್ ನಿರಾಣಿಯವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ..

ಮಾರ್ಗ-3


ಇನ್ನು ಪ್ರಭು ಚೌಹಾಣ್ ಅವರಿಗೂ ಕೂಡ ಸಂಪುಟದಿಂದ ಕೊಕ್ ಕೊಟ್ಟು ಅರವಿಂದ ಲಿಂಬಾವಳಿ ಅವರನ್ನ ಮಂತ್ರಿ ಮಾಡಲು ನಿರ್ಧರಿಸಲಾಗಿದೆ…

ಮಾರ್ಗ-4


ಇನ್ನೊಂದು ಇಂಪಾರ್ಟೆಂಟ್ ಸಂಗತಿ ಏನಂದ್ರೆ ಈಗಾಗಲೇ ಸಿಎಂ ರೇಸ್ ನಲ್ಲಿರುವ ಹಾಗೂ ಹೈಕಮಾಂಡ್ ಜೊತೆ ಉತ್ತಮ ಸಂಬಂಧ ಹೊಂದಿರುವ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರಿಗೂ ಪ್ರಬಲ ಮಂತ್ರಿ ಸ್ಥಾನ ನೀಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪನವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸದ್ಯಕ್ಕೆ ಸುಲಭದ ಕೆಲಸವಲ್ಲ… ಯಾಕಂದ್ರೆ ಯಡಿಯೂರಪ್ಪ ಲಿಂಗಾಯತ ಸಮುದಾಯದ ಅನಭಿಷಿಕ್ತ ದೊರೆ. ಅವರಷ್ಟು ಎತ್ತರಕ್ಕೆ ಬೆಳೆದಿರುವ ಮತ್ತೋರ್ವ ನಾಯಕ ಸಮುದಾಯದಲ್ಲಿ ಇಲ್ಲ… ಅಕಸ್ಮಾತ್ BSY ಅವರನ್ನ ಅಧಿಕಾರದಿಂದ ಕೆಳಗಿಳಿಸಿದರೆ ಲಿಂಗಾಯತ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ.

ಒತ್ತಾಯದಿಂದ ಕೆಳಗಿಳಿಸಿದರೆ ಸರ್ಕಾರ ಬಿದ್ದರೂ ಅಚ್ಚರಿ ಇಲ್ಲ. ಇನ್ನೊಂದೆಡೆ ಇರುವ ಅಧಿಕಾರವನ್ನು ಕಳೆದುಕೊಳ್ಳುವ ಯಾವುದೇ ಯೋಚನೆ ಹೈ ಕಮಾಂಡ್ ಗೂ ಇಲ್ಲ… ಹೀಗಾಗಿ ಸದ್ಯದ ಬಂಡಾಯವನ್ನ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಂತೆ ಹೈ ಕಮಾಂಡ್ ಯಡಿಯೂರಪ್ಪನವರಿಗೆ ಸೂಚನೆ ಕೊಟ್ಟಿದೆ.

ಹೀಗಾಗಿ ಬಿಎಸ್ ವೈ ಕೂಡ ಹೊಸ ಫಾರ್ಮುಲಾ ರೆಡಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಸೂಪರ್ ಸಿಎಂ ಹಾಗೂ ಪುತ್ರ ವಿಜಯೇಂದ್ರ ಅವರನ್ನ ಸರ್ಕಾರದಿಂದ ಕೊಂಚ ದೂರ ಇರುವಂತೆ ಸ್ವತಃ ಯಡಿಯೂರಪ್ಪನವರೇ ಸೂಚನೆ ಕೊಡಲಿದ್ದಾರೆ. ಇಷ್ಟೆಲ್ಲಾ ಆದರೂ, ಸದ್ಯದ ಬಂಡಾಯ ಜಸ್ಟ್ ಟ್ರೈಲರ್ ಮಾತ್ರ… ಪಿಕ್ಚರ್ ಅಬಿ ಬಾಕಿ ಹೈ….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?