Wednesday, March 27, 2024
Google search engine
Homeತುಮಕೂರ್ ಲೈವ್ಸರ್ವಜನಾಂಗದ ತೋಟವಾಗಲಿ

ಸರ್ವಜನಾಂಗದ ತೋಟವಾಗಲಿ

Publicstory. in


ತುಮಕೂರು: ಸಮಾಜವನ್ನು ವಿಭಜಿಸುವ ಶಕ್ತಿಗಳ ಹಿಂದೆ ಹೋಗದೆ ಜನರನ್ನು ಒಗ್ಗೂಡಿಸುವವವರ ಹಿಂದೆ ಹೋಗಬೇಕಾದ ಅಗತ್ಯವಿದೆ. ಇದರ ಜೊತೆಗೆ ಸರ್ವಜನಾಂಗದ ಶಾಂತಿಯ ತೋಟದಂತೆ ಎಲ್ಲರೂ ಕೂಡಿಬಾಳುವಂತಹ ವಾತಾವರಣವನ್ನು ನಿರ್ಮಿಸಬೇಕಾಗಿದೆ ಎಂದು ಜನಪರ ಚಿಂತಕೆ ಕೆ.ದೊರೈರಾಜ್ ಹೇಳಿದರು.

ತುಮಕೂರಿನ ಎಂ.ಜಿ.ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕುವೆಂಪು ಜನ್ಮದಿನದ ಅಂಗವಾಗಿ ಸಹಸ್ರ ಸಹಭೋಜನ ಸರ್ವಜನಾಂಗದ ಶಾಂತಿಯ ತೋಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂವಿಧಾನವನ್ನು ಪ್ರತಿಯೊಬ್ಬರು ಓದಿ ಅರ್ಥ ಮಾಡಿಕೊಳ್ಳಬೇಕು. ಅದನ್ನು ಸಣ್ಣಸಣ್ಣ ಗುಂಪುಗಳ ನಡುವೆ ಚರ್ಚೆ ಮಾಡಬೇಕು. ಆಗ ಪ್ರತಿಯೊಬ್ಬರಿಗೂ ಸ್ಪಷ್ಟತೆ ಬರುತ್ತದೆ ಎಂದರು.

ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು ಎಲ್ಲರೂ ಓದುವ ಮೂಲಕ ನಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಅಂಬೇಡ್ಕರ್ ಸಂವಿಧಾನವೆಂದು ಓದದಿದ್ದರೂ ಅದು ನಮ್ಮ ಸಿಂವಿಧಾನವೆಂದು ಓದಬೇಕು. ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತೀಯ ಪ್ರಜೆಗಳಾದ ನಾಔಉ ನಮ್ಮ ಸಂವಿಧಾನವನ್ನು ನಾವೇ ಅಂಗೀಕರಿಸಿದ್ದೇವೆ. ಇಂತಹ ಸರ್ವಜನಾಂಗದ ಒಳಿತನ್ನೇ ಬಯಸುವ ಸಂವಿಧಾನ ನಮ್ಮ ದೇಶದ ಜೀವಾಳವಾಗಬೇಕು. ಬುದ್ದ ಬಸವ, ಪೈಗಂಬರ್, ಏಸು, ಜೈನ ಎಲ್ಲ ಧರ್ಮಗಳಿಗೆ ಸಮಾನ ಅವಕಾಶವನ್ನು ನೀಡಿದೆ. ಅದು ಯಾರೊಬ್ಬರ ಸ್ವತ್ತೂ ಅಲ್ಲ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಜಾತಿಜಾತಿಗಳ ನಡುವೆ, ಧರ್ಮಧರ್ಮಗಳ ನಡುವೆ ಕಿಚ್ಚನ್ನು ದ್ವೇಷವನ್ನು ಹರಡುವ ಘಟನೆಗಳು ನಡೆಯುತ್ತಿವೆ. ಜಾತಿಯ, ಧರ್ಮದ ಹೆಸರಲ್ಲಿ ಸಮಾಜವನ್ನು ಛಿದ್ರಗೊಳಿಸುವ ಶಕ್ತಿಗಳನ್ನು ಹತ್ತಿರ ಸೇರಿಸಬೇಡಿ. ಈ ಧರ್ಮದವರು ಇರಬಾರದು, ಈ ಜಾತಿಯವರು ಇಲ್ಲಿರಬಾರದು ಎಂದು ಹೇಳುವವರನ್ನು ನಂಬಬೇಡಿ. ಸಮಾಜ ವಿಭಜಿಸುವ ಶಕ್ತಿಗಳನ್ನು ಕಂಡರೆ ನೇರವಾಗಿ ಹೇಳಿ. ಹೀಗೆ ಹೇಳಲು ನಿಮಗೆ ಹಕ್ಕಿಲ್ಲವೆಂದು. ಹೀಗೆ ಹೇಳುವ ಎದೆಗಾರಿಕೆ ಸಂವಿಧಾನದ ಓದಿನಿಂದ ಬರುತ್ತದೆ ಎಂದು ತಿಳಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮಜೀಬ್ ಮಾತನಾಡಿ, ಕುವೆಂಪು ಆಶಯದಂತೆ ಇಂದು ಸತ್ತಂತೆ ಇರುವವರನ್ನು ಬಡಿದೆಚ್ಚರಿಸಬೇಕು. ಕಚ್ಚಾಡುವವರನ್ನು ಕೂಡಿಸಿ ಒಲಿಸು, ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು ಒಟ್ಟಿಗೆ ಬಾಳುವ ತೆರದಲಿ ಹರಸು ಎಂಬ ಕವನದ ಸಾಲುಗಳನ್ನು ವರಿಸಿದರು.
ಪಾದರ್ ಆದಂ ಮಾತನಾಡಿ ಇಂದಿನ ಪರಿಸ್ಥಿತಿಗೆ ನಮ್ಮ ಕಾಣಿಕೆಯೂ ಇದೆ. ನಾವು ಸೂಕ್ತ ಕಾಲದಲ್ಲಿ ಎಚ್ಚರಗೊಳ್ಳದಿದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ ಎಂದರು.

ಉಪನ್ಯಾಸಕ ಜಯಶೀಲ ಮಾತನಾಡಿ ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ನಾಡು ಇಂದು ಸಮಸ್ಯೆಗಳ ಬೀಡಾಗಿದೆ. ಬಾಬಾಬುಡನ್‍ಗಿರಿ ಸೌಹಾರ್ದತೆಯ ತವರಾಗಿತ್ತು. ಈಗ ಅಲ್ಲಿ ಪ್ರಕ್ಷುಬ್ದತೆ ಉಂಟಾಗಿದೆ ಎಂದರು.

ಕಾರ್ಯಕ್ರಮದ ಆಯೋಜಕ ಡಾ. ಮುರಳೀಧರ್ ಮಾತನಾಡಿ, ಎಲ್ಲರೂ ಶಾಂತಿ, ನೆಮ್ಮದಿಯಿಂದ ಬಾಳಬೇಕು. ಈ ನಿಟ್ಟಿನಲ್ಲಿ ಸರ್ವಜನಾಂಗದವರು ಒಗ್ಗೂಡಿ ಊಟ ಮಾಡುವುದರಿಂದ ಸಮಾಜದಲ್ಲಿ ಸೌರ್ಹಾತೆ ನೆಲೆಸುತ್ತದೆ. ಸಂವಿಧಾನದ ಓದು ಇದನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಹಿಂದೂ, ಮುಸ್ಲೀಂ, ಕ್ರೈಸ್ತ, ಜೈನ, ಪಾರ್ಸಿ, ಬೌದ್ದರು ಹೀಗೆ ಹಲವು ಧರ್ಮಗಳ ಜನರು ಒಂದಾಗಿ ಬಾಳಬೇಕು ಎನ್ನುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು.

ಕೆಇಬಿ ನಾಗರಾಜು ಮಾತನಾಡಿ ಸರ್ವರು ಸೌಹಾರ್ದತೆಯಿಂದ ಬಾಳಬೇಕು. ಹಲವು ಧರ್ಮಗಳು, ಹಲವು ಜಾತಿಗಳು, ಬುಡಕಟ್ಟುಗಳು ಇರುವ ಈ ದೇಶದಲ್ಲಿ ಎಲ್ಲರಿಗೂ ಅವರದೇ ಆದ ಧರ್ಮಗಳಿವೆ. ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವನ ನಡೆಸಬೇಕು ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಶರೀಪ್ ಮಾತನಾಡಿ ಕುವೆಂಪುರವರ ಆಶಯಗಳನ್ನು ಮತ್ತು ಸಂವಿಧಾನದ ಆಶಯಗಳನ್ನು ರಕ್ಷಿಸಲು ನಾವೆಲ್ಲರೂ ಬದ್ದರಾಗಬೇಕು ಎಂದರು.

ನಿವೃತ್ತ ಸೈನಿಕ ಇಂತಿಹಾಜ್ ಮಾತನಾಡಿ, ಈಗಿನ ಪರಿಸ್ಥಿತಿ ತುಂಬ ದುಃಖದಾಯಕವಾಗಿದೆ. ಸೇನೆಯ ಹೆಸರನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದವರು ಮತ್ತೆ ಸೈನಿಕರ ಕಷ್ಟ ಸುಖಗಳನ್ನು ಗಮನಿಸುವುದಿಲ್ಲ. ಸೈನಿಕರು ದೆಹಲಿಯಲ್ಲಿ ಪ್ರತಿಭಟನೆ ಮಾಡಿದರೂ ನಮ್ಮ ದನಿ ಅವರಿಗೆ ಮುಟ್ಟಲಿಲ್ಲ. ಸೂಕ್ತ ಕಾಲದಲ್ಲಿ ಸೂಕ್ತ ಉತ್ತರ ನೀಡಲು ಜನರು ತೀರ್ಮಾನ ಮಾಡಬೇಕು ಎಂದು ತಿಳಿಸಿದರು.

ದಲಿತ ಮುಖಂಡ ನರಸಿಂಹಯ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?