Saturday, July 27, 2024
Google search engine
Homeತುಮಕೂರು ಲೈವ್ಸುರೇಶಗೌಡರ ಬಗ್ಗೆ ಸಚಿವ ಆಶೋಕ್ ಹೇಳಿದ್ದೇನು ಗೊತ್ತಾ?

ಸುರೇಶಗೌಡರ ಬಗ್ಗೆ ಸಚಿವ ಆಶೋಕ್ ಹೇಳಿದ್ದೇನು ಗೊತ್ತಾ?

Publicstory. in


ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕರೊನಾ ಹಾಗೂ ಲಾಕ್ ಡೌನ್ ನಿಂದ ಸಂಕಷಕ್ಕೀಡಾಗಿರುವ ಜನರಗೆ ನೆರವು ನೀಡುವಲ್ಲಿ ಮಾದರಿಯಾಗಿ ಗಮನ ಸೆಳೆದಿರುವ ಮಾಜಿ ಶಾಸಕ ಸುರೇಶ ಗೌಡ ಅವರ ಕೆಲಸ ನೋಡಲು ಬೆಂಗಳೂರಿನಿಂದ ಬಂದಿದ್ದ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದೇನು ಗೊತ್ತಾ?

( ಏ.19ರಂದು) ತುಮಕೂರು ತಾಲ್ಲೂಕಿನ ಊರ್ಡಿಗೆರೆ ಬಂದಿದ್ದ ಸಚಿವ ಆಶೋಕ್ ಕ್ಷೇತ್ರದಲ್ಲಿ ನಡೆಯುತ್ತಿರುವ ನೆರವಿ‌ನ ಕೆಲಸ ನೋಡಿ‌ ಸಂಭ್ರಮಿಸಿದರು.

ಇದನ್ನು ಓದಿ:https://publicstory.in/ತುಮಕೂರು-ಗ್ರಾಮಾಂತರದಲ್ಲಿ-ಸ/

ಕಾರ್ಯಕ್ರಮದ ಬಳಿಕ ಊಟದ ವೇಳೆ ಕ್ಷೇತ್ರದಲ್ಲಿ ನೀಡಿರುವ ನೆರವಿನ ಲೆಕ್ಕದ ಮಾಹಿತಿ ಪಡೆದರು. ಇಷ್ಟು ಕೆಲಸ ಶಾಸಕರಾದವರೂ ಸಹ ಮಾಡಿಲ್ಲ ಎಂದರು.

ಇದಕ್ಕು ಮುನ್ನ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರು ಕುಳಿತುಕೊಳ್ಳಲು ಮೂರು ಅಡಿ ಅಂತರದಲ್ಲಿ ಕುರ್ಚಿಗಳನ್ನು ಹಾಕಿ ವ್ಯವಸ್ಥೆ ಮಾಡಿದ್ದನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ಇಡೀ ಕರ್ನಾಟಕದಲ್ಲಿ ಇದೇ ಮೊದಲ ಸಲ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗಿದೆ. ಇದನ್ನು ನೋಡಿ ನಾನು ಮಾತನಾಡಬೇಕು ಎನ್ನಿಸುತ್ತಿದೆ. ಇಲ್ಲದಿದ್ದರೆ ಇಲ್ಲಿಂದ ಓಡಿ ಹೋಗುತ್ತಿದ್ದೆ ಎಂದರು.


ಇದಕ್ಕೂ ಮುನ್ನ ಪಬ್ಲಿಕ್ ಸ್ಟೋರಿ.ಇನ್ ಜತೆ ಮಾತನಾಡಿದ ಮಾಜಿ ಶಾಸಕ ಬಿ.ಸುರೇಶ ಗೌಡರು. ಕ್ಷೇತ್ರದ ಜನರು ಕಷ್ಟದಲ್ಲಿದ್ದಾರೆ. ಅವರಿಗೆ ನೆರವಾಗಬೇಕೆಂಬ ಕಾರಣದಿಂದ ಈ ಕೆಲಸ ಮಾಡುತ್ತಿದ್ದೇನೆ. ಇದರ ಹಿಂದೆ ಯಾವುದೇ ಉದ್ದೇಶ ಇಲ್ಲ ಎಂದರು. ಕ್ಷೇತ್ರದ ಎಲ್ಲ ಜನರಿಗೂ ಮಾಸ್ಕ್ ವಿತರಿಸುತ್ತಿದ್ದೇನೆ. ಈಗಾಗಲೇ 55 _ ಸಾವಿರ ಮಾಸ್ಕ್ ವಿತರಿಸಲಾಗಿದೆ. ಲಾಕ್ ಡೌನ್ ಆದಾಗಿನಿಂದಲೂ ಕ್ಷೇತ್ರದೆಲ್ಲಡೇ ಸುತ್ತಾಡುತ್ತಿದ್ದೇನೆ. ಸಹಾಯ ಅಷ್ಟೇ ಮಾಡುತ್ತಿಲ್ಲ, ಜತೆಗೆ ಜನರಿಗೆ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು.

ತರಕಾರಿ. ಹಣ್ಣು ಬೆಳೆದಿರುವ ರೈತರಿಂದ ಕೊಂಡು ಅದನ್ನು ಬಡವರಿಗೆ ಹಂಚುವ ಕೆಲಸ ಮಾಡುತ್ತಿದ್ದೇನೆ ಎಂದು ಅವರು ವಿವರಿಸಿದರು.


ಸುರೇಶ ಗೌಡರು ಇದನ್ನೆಲ್ಲ ರಾಜಕೀಯಕ್ಕಾಗಿ ಮಾಡುತ್ತಿಲ್ಲ. ಕ್ಷೇತ್ರದ ಜನರು ಕಷ್ಟದಲ್ಲಿರುವುದನ್ನು ಕಂಡು ತಮ್ಮ ಸ್ವಂತ ಹಣದಲ್ಲಿ ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಸಂಭ್ರಮಪಟ್ಟರು.

ಸುಮಾರು 20 ಸಾವಿರ ಮಾಸ್ಕ್ ಹಂಚಿಕೆಗೆ ಚಾಲನೆ ನೀಡಿದರು. ಪಡಿತರ ಕಾರ್ಡ್ ಇಲ್ಲದವರ ಮನೆ ಬಾಗಿಲಿಗೆ ಆಹಾರ ಸಾಮಾಗ್ರಿಗಳು, ತರಕಾರಿ ಕಿಟ್ ವಿತರಣೆಗೂ ಚಾಲನೆ ನೀಡಿದರು.

ಜನರು ಯಾರೂ ಸಹ ಹೆದರಬಾರದು. ಜ್ವರ,ಕೆಮ್ಮು, ಗಂಟಲು ನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ತೋರಿಸಿಕೊಳ್ಳಬೇಕು. ಕೋವಿಡ್ ಮುಚ್ಚಿಟ್ಟುಕೊಂಡಂತೆ ಇಡೀ ಕುಟುಂಬದ ಸಾವಿಗೆ ನೀವೆ ಕಾರಣರಾಗುತ್ತೀರಿ ಎಂಬುದನ್ನು ಯಾರೂ ಮರೆಯಬಾರದು ಎಂದು ಸಚಿವರು ಎಚ್ಚರಿಸಿದರು.

ಕೊರೊನಾ ರೋಗಿಗಳ ಖರ್ಚನ್ನು ಸಂಪೂರ್ಣವಾಗಿ ಸರ್ಕಾರವೇ ವಹಿಸಿಕೊಳ್ಳುತ್ತದೆ. ಅವರನ್ನು ನೋಡಿಕೊಳ್ಳಲೆಂದೇ ಮೂವರು ನರ್ಸ್ ಗಳನ್ನು ನೇಮಕ ಮಾಡಲಾಗುವುದು. ಆಹಾರ, ಔಷಧವನ್ನು ಉಚಿತವಾಗಿ ಸರ್ಕಾರವೇ ನೀಡುತ್ತದೆ. ಹೀಗಾಗಿ ಯಾರೂ ಹೆದರಬಾರದು. ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ. ಆರೈಕೆ ಮಾಡುವ ಜವಾಬ್ದಾರಿ ಸರ್ಕಾರ ವಹಿಸಿಕೊಳ್ಳುತ್ತದೆ ಎಂದರು.

ಮಾಜಿ ಸಚಿವ ಸುರೇಶ ಗೌಡ, ಜಿಲ್ಲಾಧಿಕಾರಿ ರಾಖೇಶ್ ಕುಮಾರ್ ಇತರರು ಇದ್ದರು.

ಇದಾದ ಬಳಿಕ ಸುರೇಶ ಗೌಡರ ನೇತೃತ್ವದಲ್ಲಿ ದುರ್ಗದಹಳ್ಳಿ, ಬ್ಯಾತ ಗ್ರಾಮದ ಮನೆಮನೆಗೂ ಮಾಸ್ಕ್, ಆಹಾರ ಕಿಟ್ ವಿತರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?