Thursday, April 25, 2024
Google search engine
Homeತುಮಕೂರು ಲೈವ್ಅಭಿವೃದ್ಧಿ ಗ್ರೂಪಿನ ಹುಡುಗರ ಸದ್ದಿಲ್ಲದ ಕೆಲಸ...

ಅಭಿವೃದ್ಧಿ ಗ್ರೂಪಿನ ಹುಡುಗರ ಸದ್ದಿಲ್ಲದ ಕೆಲಸ…

Publicstory. in


ಚಿಕ್ಕನಾಯಕನಹಳ್ಳಿ: ಒಳ್ಳೆಯದನ್ನು ಒಳ ಉದ್ದೇಶವನ್ನಿಟ್ಟುಕೊಂಡೇ ಮಾಡುತ್ತಿರುವುದು, ಪ್ರಚಾರಕ್ಕಾಗಿ ಸಹಾಯ ಹಸ್ತ ದ ಫೋಸ್ ಕೊಡುತ್ತಿರುವುದು ಈ ಕೋರೋ ನ ಕಾಲದ ಫ್ಯಾಶನ್ ಆಗಿದೆ.


ನಿಮ್ಮೂರಿನ ಸುದ್ದಿಗಳನ್ನು ನೀವೂ ಬರೆಯಿರಿ;: ವಾಟ್ಸಾಪ್ : 98448177


ಇದರ ಮಧ್ಯೆ ಚಿಕ್ಕನಾಯಕನಹಳ್ಳಿ ಅಭಿವೃದ್ಧಿ ಗ್ರೂಪಿನ ಹುಡುಗರು ಸದ್ದಿಲ್ಲದ ಹೊರರಾಜ್ಯಗಳ ಕಟ್ಟಡ ಕಾರ್ಮಿಕರು ಅಲೆಮಾರಿಗಳು ನಿರ್ಗತಿಕರು,ಚಾಲಕರು ಹಾಗೂ ಲಾಕ್ಡೌನ್ ಅನುಷ್ಠಾನಕ್ಕೆ ಕಟಿಬದ್ಧರಾಗಿರುವ ಪೊಲೀಸ್ ಮತ್ತು ವೈದುಕೀಯ ಸಿಬ್ಬಂದಿಗಳಿಗೆ ನೆರವಾಗುತ್ತಿದ್ದಾರೆ.ಇವರ ಸೇವೆ ಯುವಕರಿಗೆ ಮಾದರಿಯಾಗಿದೆ.

ಗುಂಪಿನ ಸದಸ್ಯರಾದ ಮಂಜುನಾಥ್ ಆಟೊ ರಾಘವೇಂದ್ರ ,ವಸಂತ್ ,ಜಬಿ ಖಾನ್, ತಿಲಕ್ ರಾಜ್,ಕೆ.ಪಿ. ಮಂಜುನಾಥ್ ,ಮೊಹಮದ್ ಹುಸೇನ್(ಗುಂಡ) ಹಾಗೂ ಬಾಬು ಪ್ರತಿದಿನ ಬೆಳಿಗ್ಗೆ ತಾತಯ್ಯನ ದರ್ಗಾದಲ್ಲಿ ಸೇರಿಕೊಂಡು ಆಹಾರ ತಯಾರಿಸುತ್ತಾರೆ.

ಸಿದ್ಧಗೊಂಡ ಆಹಾರ ಪೊಟ್ಟಣಗಳನ್ನು ಹಿಡಿದು ಪಟ್ಟಣದ ಮೂಲಕ ಹಾದುಹೋಗಿರುವ ಚಾಮರಾಜನಗರ ಜೇವರ್ಗಿ ಅಂತರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲುತ್ತಾರೆ. ಸರಕು ಸಾಗಾಣಿಕೆ ವಾಹನಗಳ ಚಾಲಕರು ಹಾಗೂ ನಿರ್ವಾಹಕರಿಗೆ ಆಹಾರ ಪಟ್ಟಣಗಳನ್ನು ಮಧ್ಯಾಹ್ನ 2 ಗಂಟೆಯವರೆಗೂ ವಿತರಿಸುತ್ತಾರೆ.ಪ್ರತಿದಿನ ನೂರರಿಂದ 125 ಪಟ್ಟಣಗಳನ್ನು ವಿತರಿಸಲಾಗುತ್ತದೆ.

ಆಹಾರ ತಯಾರಿಸುವಾಗ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಸಾಮಾಜಿಕ ಅಂತರದ ಬಗ್ಗೆ ಎಚ್ಚರ ವಹಿಸುತ್ತೇವೆ. ಪೊಲೀಸ್ ಸಿಬ್ಬಂದಿಯ ನೆರವಿನಿಂದ ಆಹಾರ ಪಟ್ಟಣಗಳನ್ನು ನೀಡುತ್ತೇವೆ. ದಾನಿಗಳು ಹಾಗೂ ಸ್ನೇಹಿತರ ಸಹಕಾರದಿಂದ ಈ ಕಾಯಕ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಲಾಕ್ ಡೌನ್ ಮುಗಿಯುವವರೆಗೂ ಈ ಕೆಲಸವನ್ನು ಮುಂದುವರೆಸುತ್ತೇವೆ ಎಂದು ಗುಂಪಿನ ಸದಸ್ಯರಲ್ಲಿ ಒಬ್ಬರಾದ ಮಹಮ್ಮದ್ ಹುಸೇನ್ ಗುಂಡ ಹೇಳುತ್ತಾರೆ.

ನಾವೇನು ಮಹಾ ಕೆಲಸ ಮಾಡುತ್ತಿಲ್ಲ. ನಾನು ಪ್ರತಿನಿತ್ಯ ಅಡುಗೆ ಕೆಲಸವನ್ನೇ ಮಾಡುತ್ತೇನೆ. ಕರೊನಾ ಕಾರಣದಿಂದ ನನಗೆ ವಿರಾಮ ಸಿಕ್ಕಿದೆ. ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ಉದ್ದೇಶದಿಂದ ಪ್ರತಿದಿನ ಬಂದು ಉಚಿತವಾಗಿ ಅಡುಗೆ ಮಾಡಿಕೊಳ್ಳುತ್ತಿದ್ದೇನೆ. ಊರಿನ ಗಾಂಧಿ ಎಂದೇ ಹೆಸರಾಗಿರುವ ಮಲ್ಲಿಕಾರ್ಜುನಯ್ಯ ಅವರು ಸಾಯಿಮಂದಿರದ ಪರವಾಗಿ ಅಡುಗೆ ಪಾತ್ರೆಗಳನ್ನು ನೀಡಿದ್ದಾರೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?