Friday, April 26, 2024
Google search engine
Homeಜನಮನಕಾರ್ಡಿಯಲ್ ಶಾಲೆಯಲ್ಲಿ  ಮಹಾಭಾರತ ಪಕ್ಷಿ ನೋಟ

ಕಾರ್ಡಿಯಲ್ ಶಾಲೆಯಲ್ಲಿ  ಮಹಾಭಾರತ ಪಕ್ಷಿ ನೋಟ

ಮಧುಗಿರಿ : ಮಹಾಭಾರತ ಹಾಗೂ ರಾಮಾಯಣ ಗ್ರಂಥಗಳನ್ನು ಪ್ರತಿಯೊಂದು ಮನೆಯಲ್ಲಿ ಇಡಬೇಕು ಹಾಗೂ ಗ್ರಂಥಗಳನ್ನು ಓದುವ ಮೂಲಕ ಒಳ್ಳೆಯ ವಿಚಾರಗಳನ್ನು ಮೈ ಗೂಡಿಸಿಕೊಳ್ಳಬೇಕೆಂದು ಬಿಇಒ ರಂಗಪ್ಪ ತಿಳಿಸಿದರು.

ಪಟ್ಟಣದ ಕಾರ್ಡಿಯಲ್ ಶಾಲೆಯಲ್ಲಿ ಮಹಾಭಾರತ ಪಕ್ಷಿ ನೋಟ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಾಭಾರತದ ಶ್ರೇಷ್ಠ ಗ್ರಂಥವನ್ನು ಮಕ್ಕಳಿಗೆ ತಿಳಿಸಿಕೊಟ್ಟಿದ್ದಾರೆ. ಸಂಸ್ಕೃತಿ ಹಾಳಾಗುವ ಸಂದರ್ಭದಲ್ಲಿ ಉಳಿಸುವ ಪ್ರಯತ್ನವನ್ನು ಕಾರ್ಡಿಯಲ್ ಶಾಲೆ ಮಾಡಿರುವುದು ಶ್ಲಾಘನೀಯ ಎಂದರು.

ಕಾರ್ಡಿಯಲ್ ಶಾಲೆಯ 650 ಕ್ಕೂ ಹೆಚ್ಚು ಮಕ್ಕಳು ಮಹಾಭಾರತದ ದ್ರೋಣ ಹತ್ಯೆ , ಕರ್ಣ ಹತ್ಯೆ ,ವೈಶಂಪಾಯನ ಸರೋವರ, ಕುರುಕ್ಷೇತ್ರ ಯುದ್ದ ,ಗದಾಯುದ್ಧ, ಧರ್ಮರಾಯರ ಪಟ್ಟಾಭಿಷೇಕ,ಕರ್ಣನ ಜನನ , ಪಾಂಡವರ ಜನನ, ಗುರುಕುಲ ಶಿಕ್ಷಣ , ಇಂದ್ರ ಪ್ರಸ್ಥ ಹಾಗೂ ಹಸ್ತಿ ನಾಪುರದ ಅರಮನೆ ವೈಭವ,ಪುರಜನ, ಹಿಡಿಂಬ ವನ, ಏಕಚಕ್ರ ನಗರದ ಬಕಾಸುರನ ವಧೆ , ದ್ರೌಪದಿ ಸ್ವಯಂ ವರ, ರಾಜಸೂಯ ಯಾಗ, ದ್ರೌಪದಿ ವಸ್ತ್ರಾಪ ಹರಣ, ಸೌಗಂಧಿಕಾ ಪುಷ್ಪ, ಪಾಂಡವರ ವನವಾಸ, ಪಾಂಡವರ ಅಜ್ಞಾತವಾಸ , ಶ್ರೀ ಕೃಷ್ಣ ಸಂಧಾನ, ಕುಂತಿ ಸಂಧಾನ, ಶರಶಯ್ಯನದ ಭೀಷ್ಮ , ಗೀತಾ ಬೋಧನೆ ಸೇರಿದಂತೆ ಅನೇಕ ಘಟನಾವಳಿಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು.

ಪಟ್ಟಣದ ವಿವಿಧ ಶಾಲೆಯ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ಮಹಾಭಾರತ ಪಕ್ಷಿ ನೋಟವನ್ನು ಕುತೂಹಲದಿಂದ ವೀಕ್ಷಿಸಿದರು.

ಟ್ರಸ್ಟ್ ಅಧ್ಯಕ್ಷ ರಮೇಶ್ , ಕಾರ್ಯದರ್ಶಿ ಎಂ.ಕೆ.ನಂಜುಂಡಯ್ಯ, ಖಜಾಂಚಿ ಡಿ.ಎನ್.ನಾಗರಾಜು, ಎಜುಶೈನ್ ಸಂಸ್ಥೆ ಸಿಇಒ ಕಿರಣ್ ಕುಮಾರ್ ಸಿದ್ದೆ , ಮುಖ್ಯಶಿಕ್ಷಕಿ ಮಂಜುಳಾ ನಾಗಭೂಷಣ್, ಶಿಕ್ಷಕರಾದ ಚಂದ್ರಕಲಾ, ದಾಕ್ಷಾಯಿಣಿ, ಜೈರಾಮ್ , ರಾಜೇಶ್ ,ಕೃಪಾ, ಅನುಸೂಯ, ವೀಣಾಕುಮಾರಿ, ಆಶಾ, ರಂಜಿತಾ, ಅರೆಲಿಂಗಪ್ಪ, ಎಚ್.ಎಂ.ಕೃಷ್ಣಮೂರ್ತಿ, ನಟರಾಜು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?