Thursday, April 18, 2024
Google search engine
Homeತುಮಕೂರು ಲೈವ್ಕೊನೇಹಳ್ಳಿಯಲ್ಲಿ ಯಕ್ಷಗಾನದ ಸಂಭ್ರಮ

ಕೊನೇಹಳ್ಳಿಯಲ್ಲಿ ಯಕ್ಷಗಾನದ ಸಂಭ್ರಮ

Tipturu: ತಿಪಟೂರಿನ ಕೊನೆಹಳ್ಳಿ ಮೂಡಲಪಾಯ ಯಕ್ಷಗಾನ ಟ್ರಸ್ಟ್ ವತಿಯಿಂದ ಮೂಡಲಪಾಯ ಸುವರ್ಣ ವಸಂತೋತ್ಸವ ಕಾರ್ಯಕ್ರಮವನ್ನು ಫೆಬ್ರವರಿ 22 ಮತ್ತು 23 ರಂದು ಕೊನೆಹಳ್ಳಿಯ ಯಕ್ಷಗಾನ ಬಯಲು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ಇಂದು ಸಂಜೆ 6.30ಕ್ಕೆ ಭಾಗವತ ಪೂರ್ವಾಚಾರ್ ಮತ್ತು ಸಂಗಡಿಗರಿಂದ ಕರಪಾಲ ಮೇಳ ಕಾರ್ಯಕ್ರಮವಿದೆ. ಸಂಜೆ 7.30ಕ್ಕೆ ಎಡೆಯೂರು ರಾಮಯ್ಯ ಮತ್ತು ಜಯಮ್ಮ ತಂಡದವರಿಂದ ಬಭ್ರುವಾಹನ ಕಾಳಕ ತೊಗಲುಬೊಂಬೆ ಮೇಳವಿದೆ. ರಾತ್ರಿ 8.30ಕ್ಕೆ ಮೂಡಲಪಾಯ ಮಕ್ಕಳ ಮೇಳ ಅಭಿನಯಿಸಿರುವ ಲವಕುಶ ಯಕ್ಷಗಾನ ಪ್ರದರ್ಶನ ಇದೆ.

ಫೆ.23ರಂದು ಭಾನುವಾರ ಸಂಜೆ 6.30ಕ್ಕೆ ತುಮಕೂರಿನ ನಾಟಕ ಮನೆ ವತಿಯಿಂದ ಕೃಷ್ಣ ಸಂಧಾನ ಹಾಸ್ಯ ನಾಟಕ ಪ್ರದರ್ಶನವಿದೆ. 8.30ಕ್ಕೆ ಮೂಡಲಪಾಯ ಯಕ್ಷಗಾನ ಕೇಂದ್ರದಿಂದ ಕರಿಭಂಟನ ಕಾಳಗ ಯಕ್ಷಗಾನ ಪ್ರದರ್ಶನ ಎರ್ಪಡಿಸಿದೆ.

ಇಂದು ಸಂಜೆ 6.30ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು ಕೆರೆಗೋಡಿ ರಂಗಾಪುರ ಕ್ಷೇತ್ರದ ಶ್ರೀಗುರು ಪರದೇಶೀಕೇಂದ್ರ ಸ್ವಾಮಿ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಮಾಜಿ ಶಾಸಕ ಕೆ. ಷಡಕ್ಷರಿ ಅಧ್ಯಕ್ಷತೆ ವಹಿಸುವರು. ಮಾಜಿ ಲೋಕಸಭಾ ಸದಸ್ಯ ಎಸ್.ಪಿ.ಮುದ್ದಹನುಮೇಗೌಡ ಕಾರ್ಯಕ್ರಮ ಉದ್ಘಾಟಿಸುವರು.

ಕಾರ್ಯಕ್ರಮದಲ್ಲಿ ಭಾಗವತರಾದ ಗೌಡನಕಟ್ಟೆ ಬಸವರಾಜು ಮತ್ತು ಪೂರ್ವಾಚಾರ್ ಅವರನ್ನು ಸನ್ಮಾಲಿಸಲಾಗುವುದು.

ಮುಖ್ಯ ಅತಿಥಿಗಳಾಗಿ ಕರಾವಳಿ ರಕ್ಷಣಾ ಪಡೆ ಪೊಲೀಸ್ ವರಿಷ್ಟಾಧಿಕಾರಿ ಆರ್ ಚೇತನ್, ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಬಿ.ಶಶಿಧರ್, ಕ.ಸಂ.ಇ ಸಹಾಯಕ ನಿರ್ದೇಶಕ ಬಸವರಾಜು ಅಪಿನಕಟ್ಟಿ, ಪಿಡಿಒ ಗೋಪಿನಾಥ್ ಭಾಗವಹಿಸುವರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?