Friday, March 29, 2024
Google search engine
Homeಜಸ್ಟ್ ನ್ಯೂಸ್ಕೊರೊನಾ: ನೀವು ಓದಲೇ ಬೇಕಾದ ಒಂದಿಷ್ಟು ಸುದ್ದಿಗಳು

ಕೊರೊನಾ: ನೀವು ಓದಲೇ ಬೇಕಾದ ಒಂದಿಷ್ಟು ಸುದ್ದಿಗಳು

Publicstory. in


ಮಂಗಳೂರು ನಗರದಲ್ಲಿ ಜನರಿಂದ ದಿನವಸ್ತುಗಳ ಖರೀದಿ.
ಮಂಗಳೂರಲ್ಲಿ ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ಖರೀದಿಗೆ ಅವಕಾಶ.
12 ಗಂಟೆಯವರೆಗೆ ಅವಕಾಶ ಇದೆ ಎಂದಿದ್ದ ಕಮಿಷನರ್
ಲಾಠಿ ಹಿಡಿದು ಅಂಗಡಿ ಬಂದ್ ಮಾಡಿ ಎನ್ನುತ್ತಿರುವ ಅಧಿಕಾರಿಗಳು.
ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಸುತ್ತಮುತ್ತ ಘಟನೆ.
ಮಂಗಳೂರು ಪಾಲಿಕೆ ಸಿಬ್ಬಂದಿ& ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ
ಅಂಗಡಿಗಳಲ್ಲಿ ಜನರ ರಶ್ ಕಂಡು ಬಂದ್ ಮಾಡಿಸಿದ ಅಧಿಕಾರಿಗಳು
ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
12 ಗಂಟೆಯವರೆಗೆ ಅವಕಾಶ ಇದ್ದರೂ ಈಗಲೇ ಬಂದ್ ಮಾಡಿಸ್ತಿದ್ದಾರೆ
ನಾವು ತಿನ್ನಲು ಏನು ಮಾಡಬೇಕು..?
ಖರೀದಿಗೆ ಬಂದು ಗೊಂದಲಕ್ಕೀಡಾದ ಸಾರ್ವಜನಿಕರು.
ಮನೆಯಲ್ಲಿರುವವರು ಏನು ತಿನ್ನಬೇಕು..?
ಅಳಲು ತೋಡಿಕೊಂಡ ಸಾರ್ವಜನಿಕರು.

ಲಾಕ್ ಡೌನ್

ರಾಜ್ಯ ಲಾಕ್ ಡೌನ್ ಎರಡನೇ ದಿನ
ಎರಡನೇ ದಿನವೂ ಕುಂದಾಪುರ ಬಂದ್
ಮೆಡಿಕಲ್‍ಗಳಲ್ಲಿ ಸಾಲುನಿಂತ ಜನರು
ಅಗತ್ಯ ವಸ್ತುಗಳನ್ನು ಖರೀದಿಸಲು ವಿನಾಯಿತಿ.
——————–

ಕೊರೊನಾ ರೋಗಕ್ಕೆ ಚಹಾ ಮದ್ದು ವೀಡಿಯೋ ವೈರಲ್ ವಿಚಾರ

ಇದೀಗ ವೈರಲ್ ಮಾಡಿದ ಯುವಕನಿಂದ ಕ್ಷಮೆ ಯಾಚನೆ.
ಕಾಪು ಮಾರಿಗುಡಿಗೆ ತೆರಳಿ ಕ್ಷಮಾಪಣೆ ಕೇಳಿದ ಯುವಕ.
ಯುವಕ ಕ್ಷಮಾಪಣೆ ಕೇಳಿದ ವೀಡಿಯೋ ಕೂಡ ವೈರಲ್.
ಕಟೀಲು ಕಿನ್ನಿಗೋಳಿ ಮೂಲದ ಯುವಕನಿಂದ ಕೃತ್ಯ
ತನ್ನ ಕೃತ್ಯಕ್ಕೆ ವೀಡಿಯೋ ಮೂಲಕ ಕ್ಷಮಾಯಾಚನೆ ಮಾಡಿದ ಯುವಕ.
————————

ಹೆಜಮಾಡಿಯಲ್ಲಿ ತೀವ್ರ ತಪಾಸಣೆ

ಉಡುಪಿ ಮಂಗಳೂರು ಗಡಿಭಾಗ ಹೆಜಮಾಡಿ
ಸಣ್ಣ ಪುಟ್ಟ ಕಾರಣ ಹೇಳಿ ಜನ ತಿರುಗಾಟ ನಡೆಸುತ್ತಿದ್ದಾರೆ.
ಬಿಸಿಲಲ್ಲಿ ನೀರಿನ ವ್ಯವಸ್ಥೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ.
ಜನಗಳ ಮನಸ್ಥಿತಿ ಬದಲಾಗದ ಹೊರತು ಸಮಸ್ಯೆ ನೀಗಿಸಲು ಅಸಾಧ್ಯ.
ಕರ್ತವ್ಯ ನಿರತ ವೈದ್ಯಕೀಯ ಅಧಿಕಾರಿಗಳ ಅಳಲು.
——————————

ಲಾಠಿ ರುಚಿ

ಸುಮ್ಮನೆ ರಸ್ತೆಗಿಳಿದವರಿಗೆ ಖಾಕಿ ಲಾಠಿ ರುಚಿ
ಕುಂದಾಪುರದಲ್ಲಿ ಸ್ವತಃ ಫೀಲ್ಡಿಗಿಳಿದ್ರು ಎಎಸ್ಪಿ
ಮೊದಲ ದಿನ ಎಚ್ಚರಿಕೆ, ಎರಡನೇ ದಿನ ಲಾಠಿ ಪ್ರಯೋಗ.
ಮಾತು ಕೇಳದವರಿಗೆ ಲಾಠಿ ಹಿಡಿದು ನಿಂತ ಪೆÇಲೀಸರ ತಂಡ
ಇನ್ನು ಮುಂದೆ ಸುಖಾಸುಮ್ಮನೆ ರಸ್ತೆಗಿಳಿದರೆ ದಂಡಂ ದಶಗುಣಂ.
———————————–

ಕೊರೊನಾ ಆತಂಕಕ್ಕೆ ಕರಾವಳಿಯಲ್ಲಿ ವ್ಯಕ್ತಿ ಬಲಿ

ಕೊರೋನಾ ಇದೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ.
ಗೋಪಾಲಕೃಷ್ಣ ಮಡಿವಾಳ (56) ನೇಣಿಗೆ ಶರಣು
ಮನೆಯ ಹಿಂಭಾಗ ನೇಣು ಹಾಕಿಕೊಂಡ ವ್ಯಕ್ತಿ
ಬ್ರಹ್ಮಾವರ ತಾಲೂಕು ಉಪ್ಪೂರಿನಲ್ಲಿ ಘಟನೆ.
ನರ್ನಾಡು ನಿವಾಸಿಯಾಗಿರುವ ಗೋಪಾಲಕೃಷ್ಣ
ಮೃತದೇಹ ಮಣಿಪಾಲ ಕೆಎಂಸಿಗೆ ರವಾನೆ.
ಕೆಎಸ್‍ಆರ್‍ಟಿಸಿ ಬಸ್‍ನ ಟ್ರೈನರ್ ಆಗಿರುವ ಗೋಪಾಲಕೃಷ್ಣ.
ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದ ವ್ಯಕ್ತಿ.
ಪೋಲಿಸರಿಗೆ ಕುಟುಂಬಸ್ಥರು ಮಾಹಿತಿ
ಜ್ವರ, ಶೀತದ ಲಕ್ಷಣ ಇರಲಿಲ್ಲ ಎಂದು ಹೇಳಿರುವ ಕುಟುಂಬ.
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು.
—————————-

ನಾಳೆಯಿಂದ ಮಂಗಳೂರಿನಲ್ಲಿ ಎಲ್ಲವೂ ಸಂಪೂರ್ಣ ಬಂದ್

ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ
ಇವತ್ತು ಅಗತ್ಯ ವಸ್ತು ಖರೀದಿಗೆ ಸಮಯ ಕೊಟ್ಟಿದ್ದಾರೆ,
ಆದ್ರೆ ನಾಳೆಯಿಂದ ಅದೂ ಇಲ್ಲ
ಈ ಬಗ್ಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳ ಜೊತೆ ಮಾತುಕತೆ ಮಾಡುತ್ತಿದ್ದೇವೆ.
ಜನರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನಾವೇ ಮನೆಗೆ ತಲುಪಿಸುತ್ತೇವೆ.
ಸರ್ಕಾರದ ಕಡೆಯಿಂದ ಹೇಗೆ ತಲುಪಿಸೋದು,
ಅಪಾರ್ಟ್‍ಮೆಂಟ್‍ಗಳಿಗೆ ಹೇಗೆ ತಲುಪಿಸೋದು ಅಂತ ಮಾತುಕತೆ ನಡೆಯುತ್ತಿದೆ
ಕೇರಳ ಭಾಗದಿಂದ ಮಂಗಳೂರಿಗೆ ಅಂಬ್ಯುಲೆನ್ಸ್ ಬರೋ ವಿಚಾರ.
ನಿನ್ನೆ ಅತೀ ಹೆಚ್ಚು ರೋಗಿಗಳು ಕೇರಳದಿಂದ ಮಂಗಳೂರಿಗೆ ಬಂದಿದ್ದಾರೆ.
ಆದ್ರೆ ಜಿಲ್ಲಾಡಳಿತ ಒಂದು ನಿರ್ಧಾರ ತೆಗೆದುಕೊಂಡಿದೆ.
ಸದ್ಯದ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗಳು ನಮಗೆ ಸಾಕಾಗಲ್ಲ.
ಹೀಗಾಗಿ ಹೊರಗಿನ ಯಾವುದೇ ವಾಹನ,
ಅಂಬ್ಯುಲೆನ್ಸ್ ಸೇರಿ ಯಾವುದನ್ನೂ ಬಿಡಬಾರದು ಅಂತ ನಿರ್ಧರಿಸಲಾಗಿದೆ.
ಎಲ್ಲಾ ಅಂಬ್ಯುಲೆನ್ಸ್ ಗಳನ್ನ ತಲಪಾಡಿ ಗಡಿಯಲ್ಲಿ ನಿರ್ಭಂಧಿಸಲಾಗುತ್ತಿದೆ.
ಎಲ್ಲಾ ವಾಹನಗಳನ್ನು ಗಡಿಯಲ್ಲಿ ಬಂದ್ ಮಾಡಲಾಗಿದೆ.
—————————-

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟೀವ್ ಪತ್ತೆ

ಮಾ.18ರಂದು ದುಬೈನಿಂದ ಬಂದಿದ್ದ ವ್ಯಕ್ತಿ
34 ವರ್ಷದ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿತ್ತು
ಮಾ.23ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು
ಪ್ರಾಥಮಿಕ ವರದಿಯಲ್ಲಿ ಕೊರೊನಾ ಪಾಸಿಟೀವ್ ಪತ್ತೆ.
ಉಡುಪಿ ಆರೋಗ್ಯಾಧಿಕಾರಿ ಡಾ. ಸುಧೀರ್ ಚಂದ್ರ ಮಾಹಿತಿ.
—————-

ಅಗತ್ಯ ಬಿದ್ದರೆ ಎಸಿಯೂ ಲಾಠಿ ಹಿಡಿತಾರೆ

ಮಾತು ಕೇಳದ ವಾಹನ ಸವಾರರಿಗೆ ಎಸಿ ಖಡಕ್ ಎಚ್ಚರಿಕೆ.
ಕುಂದಾಪುರ ಸಹಾಯಕ ಆಯುಕ್ತ ರಾಜು ಕೆ
ಗೊಂದಲ ಬೇಡ, ಸರ್ಕಾರದ ಆದೇಶ ಪಾಲಿಸಿ
ಮೋಜಿಗಾಗಿ ಸಾವನ್ನು ಮೈಮೇಲೆ ಎಳೆದುಕೊಳ್ಳಬೇಡಿ.
ಹಳೆಯ ಮೆಡಿಕಲ್ ಚೀಟಿಗಳನ್ನು ತೋರಿಸಿದರೆ ಸುಮ್ಮನಿರಲ್ಲ.
ಸರ್ಕಾರ ನೀಡಿರುವ ವಿನಾಯಿತಿ ದುರುಪಯೋಗಪಡಿಸಿಕೊಳ್ಳಬೇಡಿ
ಪ್ರಧಾನಿ ಮೋದಿಯವರು ಕೈಮುಗಿದು ಬೇಡಿಕೊಂಡಿದ್ದಾರೆ.
ಜಿಲ್ಲೆಯ ಜನರು ಸುಶಿಕ್ಷಿತರು, ಅಪಾಯವನ್ನು ಆಹ್ವಾನಿಸಬೇಡಿ.
——–

ಸಚಿವ ಅಸಮಾಧಾನ

ಕೊರೊನಾ ನಿರ್ವಹಣೆ ಜವಾಬ್ದಾರಿ ವಿಚಾರ
ಸಚಿವ ಡಾ. ಕೆ. ಸುಧಾಕರ್ ಅಸಮಾಧಾನ.
ಯಾರಿಗಾದರೂ ಒಬ್ಬರಿಗೆ ಜವಾಬ್ದಾರಿ ನೀಡಿ
ಒಬ್ಬ ಮಾನಿಟರ್ ಮಾಡುವ ಹಾಗಿರಬೇಕು.
ನನಗೆ ಬೆಂಗಳೂರು ಹೊಣೆ ನೀಡಿದ್ದಾರೆ.
ಜಿಲ್ಲೆಗಳ ಹೊಣೆ ಶ್ರೀರಾಮುಲುಗೆ ನೀಡಿದ್ದಾರೆ
ಇದು ಸರಿಯಾಗಲ್ಲ ಎಂದ ಡಾ.ಕೆ. ಸುಧಾಕರ್
———————–

ಭಾರತೀಯರಿಗೆ ಪಡಿತರ ಯೋಜನೆ

80 ಕೋಟಿ ಜನತೆಗೆ ಪಡಿತರ ಯೋಜನೆ
ಕಟ್ಟಡ ಕಾರ್ಮಿಕರಿಗೆ ಉಚಿತ ಊಟ.
2 ರೂಪಾಯಿಗೆ ಕೆಜಿ ಗೋಧಿ, 3 ರೂ.ಗೆ ಕೆಜಿ ಅಕ್ಕಿ
ಕೇಂದ್ರದಿಂದ 80 ಕೋಟಿ ಭಾರತೀಯರಿಗೆ ಹೊಸ ಯೋಜನೆ.
ಜಿಲ್ಲಾವಾರು ಹೆಲ್ಪ್‍ಲೈನ್ ತೆರೆಯಲಾಗುವುದು
ಗುತ್ತಿಗೆ ಕಾರ್ಮಿಕರಿಗೆ ಕಡ್ಡಾಯ ಸಂಬಳ
ಯಾರ ವೇತನವನ್ನು ಕಡಿತಗೊಳಿಸುವಂತಿಲ್ಲ
ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ.
ಕೇಂದ್ರದಿಂದ ಕೊರೊನಾ ಹೆಲ್ಪ್ ಲೈನ್.
ಶೀಘ್ರವೇ ಕೊರೊನಾ ಬಗ್ಗೆ ಹೆಲ್ಪ್‍ಲೈನ್
ಜಿಲ್ಲಾವಾರು ಹೆಲ್ಪ್ ಲೈನ್‍ಗೆ ತೀರ್ಮಾನ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?