Friday, April 19, 2024
Google search engine
Homeತುಮಕೂರು ಲೈವ್ತುಮಕೂರಿನಲ್ಲಿ ಎರಡು ದಿನ ನಾಟಕೋತ್ಸವ

ತುಮಕೂರಿನಲ್ಲಿ ಎರಡು ದಿನ ನಾಟಕೋತ್ಸವ

ತುಮಕೂರು: ನಾಟಕಮನೆ ತುಮಕೂರು ವತಿಯಿಂದ ಜನವರಿ 9 ಮತ್ತು 10ರಂದು ಎರಡು ದಿನಗಳ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಮೊದಲ ದಿನ ಕೃಷ್ಣ ಸಂಧಾನ ಮತ್ತು ಎರಡನೇ ದಿನ ಗರ್ಗಂಟಪ್ಪನ ಮಗ ಪರ್ಗಂಟಪ್ಪ ನಾಟಕ ಪ್ರದರ್ಶನ ನಡೆಯಲಿದೆ.

ಜನವರಿ 9ರಂದು ಸಂಜೆ 6.30ಕ್ಕೆ ನಾಟಕ ಪ್ರದರ್ಶನದ ವೇದಿಕೆ ಸಮಾರಂಭ ನಡೆಯಲಿದ್ದು, ಅಪರ ಜಿಲ್ಲಾಧಿಕಾರಿ ಚನ್ನವಸಪ್ಪ ಉದ್ಘಾಟಿಸುವರು. ಶಾಸಕ ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸುವರು.

ಮುಖ್ಯಅತಿಥಿಗಳಾಗಿ ಹಿರಿಯ ರಂಗಕರ್ಮಿ ಡಾ.ಲಕ್ಷ್ಮಣ್ ದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಅಪ್ಪಿನಕಟ್ಟಿ, ಡಾ. ದಿನೇಶ್ ಕುಮಾರ್ ಭಾಗವಹಿಸುವರು.

ಕಾರ್ಯಕ್ರಮದ ನಂತರ ಕೃಷ್ಣಸಂಧಾನ ನಾಟಕ ಪ್ರದರ್ಶನಗೊಳ್ಳಲಿದೆ.

ಜನವರಿ 10ರಂದು ಸಂಜೆ 6.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಹಿರಿಯ ರಂಗಕರ್ಮಿ ಗೋಪಾಲಕೃಷ್ಣ ನಾಯರಿ ಉದ್ಘಾಟಿಸುವರು, ಲೇಖಕಿ ಬಿ.ಸಿ.ಶೈಲಾ ನಾಗರಾಜ್, ನಾಗರತ್ನ ಚಂದ್ರಪ್ಪ, ಜಿ.ಕೃಷ್ಣಪ್ಪ, ಪರಶುರಾಮ್ ಭಾಗವಹಿಸುವರು ಎಂದು ನಾಟಕಮನೆ ಮಹಾಲಿಂಗು ತಿಳಿಸಿದರು.

ಕೃಷ್ಣಸಂಧಾನ ನಾಟಕವನ್ನು ವಿ.ಎನ್.ಅಶ್ವತ್ಥ್ ರಚಿಸಿದ್ದು ಎಸ್.ಆರ್. ಪ್ರಕಾಶ್ ನಾಟಕ ನಿರ್ದೇಶಿಸಿದ್ದಾರೆ. ಬಸವೇಗೌಡ ರಂಗವಿನ್ಯಾಸ ಮಾಡಿದ್ದಾರೆ.

ಗರ್ಗಂಟಪ್ಪನ ಮಗ ಪರ್ಗಂಟಪ್ಪ ನಾಟಕವನ್ನು ಸಂಗೀತ ರಚಿಸಿದ್ದು, ಸುರೇಶ್ ಅನಗಳ್ಳಿ ನಿರ್ದೇಶಿಸಿದ್ದಾರೆ. ಅನೇಕಾರಂಗ ಕಲಾವಿದರು ಪ್ರಸ್ತುತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?