Friday, March 29, 2024
Google search engine
Homeತುಮಕೂರು ಲೈವ್ತುಮಕೂರು ಫಲಪುಷ್ಪ ಪ್ರದರ್ಶನ ಚಿತ್ರಗಳ ಝಲಕ್

ತುಮಕೂರು ಫಲಪುಷ್ಪ ಪ್ರದರ್ಶನ ಚಿತ್ರಗಳ ಝಲಕ್

Tumkur: ಜನವರಿ 31 ರಿಂದ ಫೆಬ್ರುವರಿ 2ರವರೆಗೆ ತುಮಕೂರಿನ ತೋಟಗಾರಿಕೆ ಕಛೇರಿ ಆವರಣದಲ್ಲಿ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಜನವರಿ 31 ರಂದು ಸಂಜೆ 7.30 ಗಂಟೆಗೆ ಉದ್ಘಾಟಿಸುವರು.

ತೋಟಗಾರಿಕೆ ಸಚಿವ ವಿ.ಸೋಮಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸುವರು. ವಿಶೇಷವಾಗಿ ಮಕ್ಕಳನ್ನು ಆಕರ್ಷಿಸುವ ಸಲುವಾಗಿ ವಿವಿಧ ಅಲಂಕಾರಿಕ ಪುಷ್ಪಗಳ ಜೋಡಣೆಯಿಂದ ಡಿಸ್ನಿ ಮಾದರಿಯಲ್ಲಿ ವಿನ್ಯಾಸ ನಡೆಯಲಿದೆ ಹಾಗೂ ವೈಲ್ಡ್‍ಲೈಫ್ ಪ್ರಾಣಿಗಳ ಮಾದರಿಗಳು ಪುಷ್ಪಾಲಂಕಾರದಲ್ಲಿ ಇರಲಿವೆ.

ವಿವೇಕಾನಂದರ ಮರಳು ಶಿಲೆಯ ಕಲಾಕೃತಿಯಲ್ಲಿ ವಿಶೇಷ ಅಲಂಕಾರಿಕ ಹೂಗಳಿಂದ ಜನಾಕರ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ತೋಟಗಾರಿಕೆ ರೈತರಿಗೆ ತಾಂತ್ರಿಕ ಮಾಹಿತಿ ಮತ್ತು ವಾಟರ್‍ಶೆಡ್ ಪ್ರಾತ್ಯಕ್ಷಿಕೆ ಮೂಲಕ ಎಲ್ಲಾ ತರಹದ ಹಣ್ಣು, ಹೂ ಮತ್ತು ತರಕಾರಿಗಳನ್ನು ಬೆಳೆಸುವ ಇಂಟಿಗ್ರೇಟೆಡ್ ತೋಟಗಾರಿಕೆ ಮಾದರಿಯನ್ನೂ ಪರಿಚಯಿಸಲಾಗುವುದು.

ಜಿಲ್ಲೆಯಲ್ಲಿ 1.76ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಬೆಳೆಯಿದ್ದು, ಫೆಬ್ರುವರಿ 1, 2 ಮತ್ತು 3ನೇ ತಾರೀಖಿನವರೆಗೂ ಜಿಲ್ಲೆಯ ತೆಂಗಿನ ಬೆಳೆಗಳಿಗೆ ತಗಲಿರುವ ರೋಗೋಸ್ ಕೀಟ ನಿಯಂತ್ರಣಕ್ಕೆ ತೋಟಗಾರಿಕೆ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳಿಂದ ಬೆಳೆಗಳ ಸಂರಕ್ಷಣೆಗಾಗಿ ತೋಟಗಾರಿಕೆ ಪದ್ಧತಿ, ಸಂಸ್ಕರಣೆ ಹಾಗೂ ರೈತರ ಸಂತೆ, ಮಾರುಕಟ್ಟೆ, ಖುಷ್ಕಿ ತೋಟಗಾರಿಕೆ ತರಬೇತಿ ನೀಡಲಾಗುವುದು.

ಇದರಿಂದ ರೈತರಿಗೆ ಸಮಗ್ರ ಕೀಟ ಮತ್ತು ರೋಗ ನಿಯಂತ್ರಣಕ್ಕೆ ಅನುಕೂಲವಾಗಲಿದೆ. ಜೇನುಕೃಷಿಯ ಮಹತ್ವದ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯ ಪ್ರದರ್ಶನದಲ್ಲಿ ಆಗಲಿದೆ.
ರೈತರಿಗೆ ಉಪಯೋಗವಾಗುವಂತೆ ಜೇನುಕೃಷಿ, ಹನಿನೀರಾವರಿ ಘಟಕದ ತಾಂತ್ರಿಕ ಅಳವಡಿಕೆ ಮತ್ತು ನಿರ್ವಹಣೆ, ಹಸಿರು ಮನೆಯಲ್ಲಿ ಸುಧಾರಿತ ಬೇಸಾಯದಿಂದ ಅತಿ ಕಡಿಮೆ ಜಾಗದಲ್ಲಿ ಹೆಚ್ಚು ತರಕಾರಿಗಳನ್ನು ಮತ್ತು ಹೂಗಳನ್ನು ಬೆಳೆಸುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತರಬೇತಿ ನೀಡಲಾಗುವುದು.

ಕಾರ್ಯಕ್ರಮದ ಮೊದಲನೇ ದಿನ ಸಾಂಸ್ಕೃತಿ ಕಲಾವಿದರಿಂದ ಭರತನಾಟ್ಯ, ಎರಡನೇ ದಿನ ಶಾಲಾ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ಜರುಗಲಿದೆ. ಫೆಬ್ರುವರಿ 2ರಂದು ಸಂಜೆ 4 ಗಂಟೆಗೆ ಜರುಗುವ ಸಮಾರೋಪ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಸುಗಮಸಂಗೀತ ಕಾರ್ಯಕ್ರಮ ಏರ್ಪಡಿಸಲಾಗುವುದು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಲತಾ ರವಿಕುಮಾರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಬಹುಮಾನ ವಿತರಿಸುವರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಗೌರವಾಧ್ಯಕ್ಷರಾದ ಡಾ: ಕೆ.ರಾಕೇಶ ಕುಮಾರ್, ಜಿ.ಪಂ. ಸಿಇಓ ಶುಭಾಕಲ್ಯಾಣ್ ಮತ್ತಿತರ ಗಣ್ಯರು ಭಾಗವಹಿಸುವರು.

ಫಲ-ಪುಷ್ಪ ಪ್ರದರ್ಶನದಲ್ಲಿ 16 ಸಾವಿರಕ್ಕೂ ಹೆಚ್ಚು ಹೂವಿನ ಕುಂಡಗಳನ್ನು ಅಲಂಕೃತವಾಗಿ ಜೋಡಿಸಲಾಗುವುದು. ಜಿಲ್ಲೆಯಲ್ಲಿ ಉತ್ತಮವಾಗಿ ಬೆಳೆದಿರುವ ತೋಟಗಾರಿಕಾ ಬೆಳೆಗಳ ಪ್ರದರ್ಶನ ಏರ್ಪಡಿಸಿ ಆಯ್ಕೆಯಾದ ಬೆಳೆಗಾರರಿಗೆ ಬಹುಮಾನ ವಿತರಿಸಲಾಗುವುದು.

ಸಮಾರಂಭದಲ್ಲಿ ಜಿಲ್ಲೆಯ 10 ಪ್ರಗತಿಪರ ತೋಟಗಾರಿಕಾ ಬೆಳೆಗಳ ರೈತರನ್ನು ಗುರುತಿಸಿ ಸನ್ಮಾನಿಸಲಾಗುವುದು
ಪ್ರದರ್ಶನದ ಅಂಗವಾಗಿ ಕೃಷಿ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ, ಖಾದಿ ಮತ್ತು ಗ್ರಾಮೋದ್ಯೋಗ ಸೇರಿದಂತೆ ವಿವಿಧ ಇಲಾಖೆಗಳ 40 ಸ್ಟಾಲ್‍ಗಳನ್ನು ಸ್ಥಾಪಿಸಲಾಗುವುದು ಮತ್ತು ಖಾಸಗಿಯವರೂ ಸೇರಿ ಒಟ್ಟು 120 ಸ್ಟಾಲ್‍ಗಳು ಪ್ರದರ್ಶನದಲ್ಲಿ ಸ್ಥಾಪಿಸಲಾಗುತ್ತದೆ ಎಂದು ಈ ಬಾರಿಯ ಫಲ-ಪುಷ್ಪ ಪ್ರದರ್ಶನದಲ್ಲಿ ವಿಶೇಷತೆಗಳೇ ಹೆಚ್ಚಾಗಿರಲಿವೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?