Friday, March 29, 2024
Google search engine
Homeತುಮಕೂರು ಲೈವ್ನೆನಪು ಬಿಚ್ಚಿಟ್ಟ ಹಿರೇಮಠರು... ಹೋರಾಟ ನಿಲ್ಲದಿರಲಿ

ನೆನಪು ಬಿಚ್ಚಿಟ್ಟ ಹಿರೇಮಠರು… ಹೋರಾಟ ನಿಲ್ಲದಿರಲಿ

ತುಮಕೂರು: ತುರ್ತು ಪರಿಸ್ಥಿತಿ ವಿರೋಧಿಸಿ ಅಮೆರಿಕದಲ್ಲಿ ಇಂದಿರಾಗಾಂಧಿ ವಿರುದ್ಧ ಅಮೆರಿಕದಲ್ಲಿ ಪಾದಯಾತ್ರೆ ನಡೆಸಿದ್ದು, ಭೂ ಅವ್ಯವಹಾರಗಳ ವಿರುದ್ಧ ಹೋರಾಟ …. ಹೀಗೆ ಹತ್ತು ಹಲವು ಹೋರಾಟಗಳನ್ನು ನೆನಪಿಸಿಕೊಂಡರು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ.

ಸಿದ್ಧರಬೆಟ್ಟದಲ್ಲಿ ಆಯೋಜಿಸಿದ್ದ ನಾಯಕತ್ವ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತೀ ವ್ಶಕ್ತಿಯಲ್ಲಿರುವ ನಿಸ್ವಾರ್ಥ ದೃಢ ಸಂಕಲ್ಪದ ವ್ಶಕ್ತಿತ್ವವೇ ನಾಯಕ. ಎಂತಹ ಪರಿಸ್ಥಿತಿ ಬಂದರೂ ಎದೆಗುಂದದೇ ಸಮಾಜದ ಒಳಿತಿಗಾಗಿ ನಿಂತಾಗ ಸಿಗುವ ಆತ್ಮ ಸಂತೃಪ್ತಿಗೆ ಬೆಲೆಕಟ್ಟಲು ಸಾಧ್ಶವಿಲ್ಲ ಎಂದರು.

ಭಾರತ ಸರ್ಕಾರ ತಮ್ಮ ಪಾಸ್ ಪೋರ್ಟ್ ಅನ್ನು ಅಮಾನತ್ತು ಮಾಡಿದ್ದ ಸಂಧರ್ಭ ಹಾಗೂ ಪ್ರೆಸ್ಟೀಜ್ ಕಂಪೆನಿಯ ಭೂಅವ್ಶವಹಾರದ ಸಂಧರ್ಭದಲ್ಲಿ ತಾವು ಎದುರಿಸಿದ ಪರಿಸ್ಥಿತಿ ವಿವರಿಸಿದರು.

ಪ್ರತೀ ವ್ಶಕ್ತಿಯ ನಾಯಕನನ್ನು ಎಚ್ಚರಿಸಿ ಜಾಗೃತಗೊಳಿಸಿ ಸಂಚಲನ ಮೂಡಿಸಿ 75ರ ಹರೆಯಲ್ಲೂ ಇಡೀ ದಿನ ಶಿಬಿರಾರ್ಥಿಗಳೊಂದಿಗೆ ಕಳೆದರು.

ಉಡುಪಿಯ ಜಯಶ್ರೀ ಭಟ್, ಹಲವಾರು ಚಟುವಟಿಕೆಗಳ ಮೂಲಕ ಶಿಬಿರಾರ್ಥಿಗಳಲ್ಲಿ ಚೈತನ್ಶ ಮೂಡಿಸುತ್ತಾ ಅವರಲ್ಲಿರುವ ನಾಯಕತ್ವದ ಗುಣಗಳನ್ನು ಹೊರಗೆಳೆಯುವ ಪ್ರಯತ್ನ ಮುಂದುವರೆಸಿದರು.ಸಂಜೆ 6ಗಂಟೆಯಾದರೂ ತರಬೇತಿಯ ಚಟುವಟಿಕೆಗಳು ಮುಂದುವರೆದಿದ್ದು ನಾಳೆಯೂ ಸಹ ಜರುಗಲಿದೆ.

ಬೆಳಗಾಂˌ ಚಿತ್ರದುರ್ಗˌ ಮೈಸೂರುˌ ಬೆಂಗಳೂರು ಸೇರಿದಂತೆ ರಾಜ್ಶದ ವಿವಿಧ ಭಾಗಗಳ ವಕೀಲರುˌಸಾಫ್ಟವೇರ್ ತಂತ್ರಜ್ನರುˌ ರೈತ ಮಹಿಳೆಯರು ಸೇರಿದಂತೆ ವಿವಿಧ ಕ್ಷೇತ್ರದ 30ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದು ನಾಳೆ ಸಾಮಾಜಿಕ ಹೋರಾಟಗಾರರಾದ ರವಿಕೃಷ್ಣಾರೆಡ್ಡಿಯವರು ಸೇರಿದಂತೆ ಸಂಪನ್ಮೂಲ ವ್ಶಕ್ತಿಗಳಾಗಿ ಪಂಚಾಯತ್ ಪರಿಷತ್ ನ ಕಾಡಶೆಟ್ಟೀ ಹಳ್ಳಿಸತೀಶ್ ಸೇರಿದಂತೆ ಹಲವಾರು ಗಣ್ಶರು ಮತ್ತು ಇನ್ನಷ್ಟು ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ.

ನಾಳೆ ಬೆಳೆಗ್ಗೆ 6ಗಂಟೆಗೆ ಚಾರಣದೊಂದಿಗೆ ಆರಂಭವಾಗಿ ಸಂಜೆ 4.30ಗೆ ಸಮಾರೋಪಗೊಳ್ಳಲಿದೆ.

ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಫರ್ದಿಸುವ ಆಸಕ್ತರು ಬದಲಾವಣೆಗಾಗಿ ತುಮಕೂರು ಜಿಲ್ಲೆಯ ನಾಗರೀಕರು ಈ ಶಿಬಿರದ ಪ್ರಯೋಜನ ವನ್ನು ಪಡೆದು ಕೊಳ್ಳಬೇಕೆಂದು ಆಯೋಜಿಸಿರುವ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ತಿಳಿಸಿದರು. ವೇದಿಕೆಯ ಸದಸ್ಶರಾದ ಪ್ರಸನ್ನ ˌಜನನಿ ವತ್ಸಲˌ ಹಂದ್ರಾಳುನಾಗಭೂಷಣ್ ˌಮನೋಜ್ ಮುಂತಾದವರು ಭಾಗವಹಿಸಿದ್ದಾರೆ.
9066133377

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?