Friday, March 29, 2024
Google search engine
Homeತುಮಕೂರ್ ಲೈವ್ಪುರವರದಲ್ಲಿ ಬಲಿಜ‌ ಸಂಘ ಅಸ್ತಿತ್ವಕ್ಕೆ

ಪುರವರದಲ್ಲಿ ಬಲಿಜ‌ ಸಂಘ ಅಸ್ತಿತ್ವಕ್ಕೆ

  • Publicstory.in
  • ಮಧುಗಿರಿ ತಾಲ್ಲೂಕು ಬ್ಯಾಲ್ಯ ಗ್ರಾಮದಲ್ಲಿ ಶ್ರೀಯೋಗಿನಾರಾಯಣ ಯತೀಂದ್ರರ ಜಯಂತೋತ್ಸವದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು

ಮಧುಗಿರಿ ;- ಹಿಂದುಳಿದ ವರ್ಗಗಳ ಸಣ್ಣ ಸಮುದಾಯಗಳು ಒಗ್ಗೂಡಿದರೆ ನಿರ್ಣಾಯಕವಾದ ಪಲಿತಾಂಶ ಹೊರತರಬಹುದು ಎಂದು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಆರ್.ಅಂಜಿನಪ್ಪ ತಿಳಿಸಿದರು.

ತಾಲ್ಲೂಕಿನ ಬ್ಯಾಲ್ಯ ಗ್ರಾಮದಲ್ಲಿ ಪುರವರ ಹೋಬಳಿ ಯೋಗಿ ನಾರಾಯಣ ಬಲಿಜ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಯೋಗಿನಾರಾಯಣ ಯತೀಂದ್ರರ ಜಯಂತೋತ್ಸವ ಮತ್ತು ಪುರವರ ಹೋಬಳಿ ಬಲಿಜ ಸಂಘದ ಉದ್ಘಾಟನೆಯನ್ನು ನೆರವೇರಸಿ ಮಾತನಾಡಿದ ಅವರು, ಸಣ್ಣ ಸಮುದಾಯಗಳು ಒಗ್ಗಟ್ಟಾದಾಗ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುನ್ನಡೆ ಸಾಧಿಸಬಹುದು. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು ಎಂದರು.

ಉಳಿತಾಯ ಮಾಡುವ ಮೂಲಕ ಸಹಕಾರ ಸಂಘಗಳನ್ನು ರಚಿಸಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ರೂಪಿಸಿ ಎಂದ ಅವರು ಹೇಳಿದರು.

ಸಮುದಾಯದ ನಾಯಕರುಗಳಾದ ಎಂ.ಆರ್.ಸೀತಾರಾಂ ಹಾಗೂ ಎಂ.ಆರ್.ಜಯರಾಂ ತಮ್ಮ ಸ್ಥಾನಮಾನಗಳನ್ನು ಮರೆತು ಹಳ್ಳಿಗಳಿಗೆ ಸಾಮಾನ್ಯರಂತೆ ಭೇಟಿ ನೀಡಿ ತಾತಯ್ಯನವರ ತತ್ವ ಆದರ್ಶಗಳ ಪ್ರಚಾರ ಮಾಡುತ್ತಿದ್ದಾರೆ.

ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷ ಎಂ.ಎಸ್.ಶಂಕರನಾರಾಯಣ ಮಾತನಾಡಿ, ತಾಲ್ಲೂಕಿನಲ್ಲಿ ನಮ್ಮ ಸಮಾಜವನ್ನು ಒಗ್ಗೂಡಿಸಲು ಹಾಗೂ ಸಂಘಟಿಸಲು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾಜದ ಮುಖಂಡರುಗಳು ಒಗ್ಗಟ್ಟಾಗಿ ಜನಾಂಗದ ಏಳಿಗೆಗೆ ಶ್ರಮಿಸಬೇಕು ಎಂದರು.

ಜಿಲ್ಲಾ ಬಲಿಜ ಸಂಘದ ಕಾರ್ಯದರ್ಶಿ ಟಿ.ಆರ್.ಹೆಚ್.ಪ್ರಕಾಶ್ ಮಾತನಾಡಿ, ಪ್ರತಿಯೊಬ್ಬ ಬಲಿಜನು ಕೈವಾರ ಕ್ಷೇತ್ರ ಯಾತ್ರೆ ಕೈಗೊಂಡು ತಾತಯ್ಯನವರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯ ಎಂ.ಆರ್.ಜಗನ್ನಾಥ್, ತೆಂಗು ನಾರು ಅಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ವೆಂಕಟಾಚಲಯ್ಯ, ಸಾಹಿತಿಗಳಾದ ಎಂ.ಡಿ.ಶ್ರೀನಿವಾಸ್, ಕೇಶವರೆಡ್ಡಿ ಹಂದ್ರಾಳು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ತುಮಕೂರಿನಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕಟ್ಟಲಾಗುವುದು.

ಆಂಜಿನಪ್ಪ, ಅಧ್ಯಕ್ಷರು

ಕೊರಟಗೆರೆ ಬಲಿಜ ಸಂಘದ ಅಧ್ಯಕ್ಷ ಎನ್.ಪದ್ಮನಾಭ, ಕಾರ್ಯದರ್ಶಿ ಮಯೂರ ಗೋವಿಂದರಾಜು, ಸಮುದಾಯದ ಮುಖಂಡರುಗಳಾದ ಆರ್.ಎಲ್.ಎಸ್.ರಮೇಶ್, ಹೆಚ್.ಎಂ.ಟಿ.ಜಯರಾಂ, ಎಸ್.ಬಿ.ಟಿ.ರಾಮು, ಶಿವಕುಮಾರ್, ಟಿ.ಎನ್.ಶ್ರೀರಾಮಯ್ಯ, ಆಡಿಟರ್ ಗುರುಲಿಂಗಯ್ಯ, ಡಾ.ಎ.ರವಿ, ಆಶ್ವಥನಾರಾಯಣ್, ಹೆಬ್ಬೂರು ರಂಗಯ್ಯ, ಬಿ.ಎನ್.ಮೂರ್ತಿ, ನರಸಿಂಹಮೂರ್ತಿ , ಕೋಟೆ ಕೂಗು ಬಾಬು ಇದ್ದರು.

  • Publicstory.in
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?