Friday, March 29, 2024
Google search engine
Homeಸಾಹಿತ್ಯ ಸಂವಾದವಾರದ ಪುಸ್ತಕಪುಸ್ತಕ ಪರಿಚಯ: ಮಾಧವಿ

ಪುಸ್ತಕ ಪರಿಚಯ: ಮಾಧವಿ

ಡಾ. ಶ್ವೇತಾರಾಣಿ ಹೆಚ್

1973ರಲ್ಲಿ ಡಾ. ಅನುಪಮಾ ನಿರಂಜನ ರಚಿಸಿರುವ ಕಾದಂಬರಿಗೆ ಪುರಾಣದ ವಸ್ತುವನ್ನು ಆಯ್ಕೆಮಾಡಿಕೊಳಡಿದ್ದಾರೆ.‌ ಮಹಾಭಾರತದ 114,117,118,119,120ನೇ ಶ್ಲೋಕಗಳಲ್ಲಿ ಮಾಧವಿಯ ಉಲ್ಲೇಖವಿದೆ ಎಂಬುದನ್ನು ಲೇಖಕಿ ಮೊದಲಮಾತಿನಲ್ಲಿ ಕಾದಂಬರಿಗೆ ವಸ್ತುವನ್ನು ಆಯ್ಕೆಮಾಡಿಕೊಂಡ ಬಗೆಯನ್ನು ಇಲ್ಲಿ ತಿಳಿಸಿದ್ದಾರೆ.

ಅನಾದಿಕಾಲದಿಂದಲೂ ಸ್ತ್ರೀ ಅಬಲೆ. ಅವಳು ವಸ್ತುವಿನಂತೆ ವಿಕ್ರಯಕ್ಕೆ ಒಳಗಾಗುತ್ತಿದ್ದಳು. ಅಲ್ಲಿ ಪುರುಷನ ಕಾಮ ಪೂರೈಕೆಗೆ ಸ್ತ್ರೀ ಒಂದು ವಸ್ತುವಾಗಿದ್ದಳು. ಅವಳ ಮನೋಇಂಗಿತಕ್ಕೆ ಇಲ್ಲಿ ಬೆಲೆಯಿಲ್ಲ. ಅವಳ ಅಲಂಕಾರ ಗಂಡಿನ ಕಣ್ಣಿಗೆ ಕಾಮೋತ್ತೇಜಕವಾಗಿ ಕಾಣಬೇಕು ಎಂಬ ಉದ್ದೇಶದಿಂದಲೇ ಇರುತ್ತಿತ್ತು. ಗಂಡ ಹೆಂಡತಿಯನ್ನು ವಸ್ತುವಿನಂತೆ ಮಾರಬಹುದಿತ್ತು. ದಾನ ಕೊಡಬಹುದಾಗಿತ್ತು. ಅದು ಮಗಳಿಗೂ ಅನ್ವಯವಾಗುತ್ತಿದ್ದ ನೀತಿ. ಆದುದರಿಂದಲೇ ಯಯಾತಿ ಗಾಲವ ಮುನಿ ಕೇಳಿದಾಗ ತನ್ನ ಮಗಳನ್ನು ಅಷ್ಟು ಸುಲಭವಾಗಿ ದಾನ ಕೊಡುತ್ತಾನೆ. ಇಲ್ಲಿ ದಾನವಾಗಿ ಹೋಗುವ ವ್ಯಕ್ತಿಯ ಭಾವನೆಗಳನ್ನು ಕೇಳುವುದೂ ಇಲ್ಲ.
ಮಹಾಭಾರತದ ಕಾಲದಲ್ಲಿ ಜಾರಿಯಲ್ಲಿದ್ದ ಮತ್ತೊಂದು ಪದ್ದತಿ ‘ನಿಯೋಗ’. ಬೇರೊಬ್ಬ ಪುರುಷನಿಂದ ಮಕ್ಕಳನ್ನು ಪಡೆಯುವ ಪದ್ದತಿ ಇದಾಗಿತ್ತು. ಕುಂತಿಗೆ ಮಕ್ಕಳಾಗುವುದು ಇದೇ ಪದ್ದತಿಯಿಂದ. ಹೆಣ್ಣಿನ ಕರ್ತವ್ಯ ಏನಿದ್ದರೂ ಮಕ್ಕಳನ್ನು ಹಡೆಯುವುದಾಗಿತ್ತು. ಹಾಗೇ ಅವಳು ಹೆತ್ತಮಕ್ಕಳನ್ನು ತನ್ನೊಂದಿಗೆ ಇಟ್ಟುಕೊಳ್ಳುವ ಹಕ್ಕು ಅವಳಿಗೆ ಇರಲಿಲ್ಲ.

ವಿಶ್ವಾಮಿತ್ರ ಮಹರ್ಷಿಯ ಅಹಂಗೆ ಬಲಿಯಾಗುವುದು ಮಾತ್ರ ಅದಕ್ಕೆ ಏನು ಸಂಬಂಧವಿಲ್ಲದ ಮಾಧವಿ.
ವಿಶ್ವಾಮಿತ್ರನ ವಿಚಿತ್ರ ಗುರುಕಾಣಿಕೆ ನೀಡಲು ಗಾಲವ ಯಯಾತಿಯ ಬಳಿಗೆ ಹೋಗಿ ಬೇಡುತ್ತಾನೆ. ಬೇಡಿ ಬಂದಿರುವ ಮುನಿಗೆ ಇಲ್ಲವೆನ್ನಲಾಗದೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮದುವೆಮಾಡಬೇಕಿದ್ದ ಮಗಳನ್ನೆ ದಾನವಾಗಿ ಕೊಡುತ್ತಾನೆ.

ತುಂಬು ಯೌವನದಲ್ಲೊ ಸಾಕಷ್ಟು ಕನಸು ಹೊತ್ತಿದ್ದ ಅಪ್ರತಿಮ ಸುಂದರಿ ಮಾಧವಿ ಪಶುವಂತೆ ಗಾಲವನನ್ನು ಹಿಂಬಾಲಿಸುತ್ತಾಳೆ.

ತಾನು ಋಷಿಯಾದರೂ ಗಾಲವ ಅವಳನ್ನು ಸಂಭೋಗಿಸಲು ಬಯಸುತ್ತಾನೆ ” ಆದರೆ ಇದೊಂದು ರಾತ್ರಿ ಮಾಧವಿ ತನ್ನವಳಾದರೆ ಯಾರಿಗೆ ಗೊತ್ತಾಗುತ್ತದೆ ? ಅವಳು ಪ್ರತಿಭಟಿಸಿದರೂ ಈ ನಿರ್ಜನ ಪ್ರದೇಶದಲ್ಲಿ ಅವಳ ನೆರವಿಗೆ ಬರುವವರು ಯಾರು ? ”
ಎಂದು ಯೋಚಿಸುತ್ತಾನೆ.

ತಾನು ಬಯಸಿದ ಕನ್ಯಾ ಶುಲ್ಕ ಒಬ್ಬರಾಜನಲ್ಲಿ ಸಿಗದ ಕಾರಣ ಮಾಧವಿಯನ್ನು ಮೂರು ಜನ ರಾಜರಿಗೆ ಒಂದು ವರ್ಷಕ್ಕೆ ಒಂದು ಮಗುವನ್ನು ಹೆತ್ತುಕೊಡಲು ಬಾಡಿಗೆಗೆ ನೀಡುತ್ತಾನೆ. ಕೊನೆಗೆ ವಿಶ್ವಾಮಿತ್ರನ ಬಳಿಗೆ ಬಂದಾಗ ಮೂರು ಮಕ್ಕಳನ್ನು ಹೆತ್ತ ಮಾಧವಿಯನ್ನು ಅವನು ಕೂಡ ಬಯಸುತ್ತಾನೆ. ಆಗ ವಿಶ್ವಾಮಿತ್ರ‌ಈ ರೀತಿಯಾಗಿ ಯೋಚಿಸುತ್ತಾನೆ.

“ಎಂಟು ನೂರು ಅಶ್ವ ಗಳಿಗೆ ಬದಲಾಗಿ ಈ ಮಾಧವಿಯನ್ನೆ ಸ್ವೀಕರಿಸಿ ಅಂತ ಹೇಳಿ ಇವಳನ್ನು ನನ್ನಲ್ಲಿ ತಂದು ಬಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು! ನಾನೇ ಇವಳನ್ನು ಜೀವಮಾನ ಪರ್ಯಂತ ಭೋಗಿಸಿ ಜಗತ್ತಿಗೆ ಶ್ರೇಷ್ಠವಾದ ನಾಲ್ವರು ಪುತ್ರರನ್ನಿ ಪಡೀತಿದ್ದೆ. ಇರಲಿ ಆದದ್ದಾಗಿ ಹೋಯ್ತು. ಇವಳಲ್ಲಿ ಒಬ್ಬನೇ ಮಗನನ್ನು ಪಡೆದು ಅನಂತರ ಮಾಧವಿಯನ್ನು ನಿನಗೆ ಇಪ್ಪಿಸಿಬಿಡ್ತೀನಿ. ಎನ್ನುತ್ತಾನೆ.

ಮಾಧವಿ ಬಾಳಲ್ಲಿ ಬಂದ ಹರ್ಯಶ್ವ, ದಿವೋದಾಸ,ಉಶೀನರ, ವಿಶ್ವಾಮಿತ್ರರು. ಅವಳನ್ನು ವಸ್ತುವಿನಂತೆ ಅವಳನ್ನು ಭೋಗಿಸಿ ಮಕ್ಕಳನ್ನು ಪಡೆದು ಕೊಳ್ಳುತ್ತಾರೆ. ಆದರೆ ಮಕ್ಕಳೊಂದಿಗೆ ತಾಯಿಯಾಗಿ ಇರುವ ಹಕ್ಕು ಅವಳಿಗೆ ಇಲ್ಲ.
ಕೊನೆಯದಾಗಿ ತಂದೆಯ ಮನೆ ಸೇರಿದ ಮಾಧವಿಯನ್ನು ಸ್ವಯಂವರದ ಮೂಲಕ ಸಾಗಿ ಹಾಕುವ ಯತ್ನ ನಡೆಯುತ್ತದೆ. ಇಲ್ಲಿ ಮಾಧವಿ ತನ್ನ ಇಚ್ಚೆಯಂತೆ ಆ ಸ್ವಯಂವರವನ್ನು ತಿರಸ್ಕರಿಸಿ ಕಾಡಿಗೆ ಹೋಗುತ್ತಾಳೆ. ಅವಳ ಈ ನಡೆ ಆ ಸಮುದಾಯವನ್ನು ತಿರಸ್ಕರಿಸುದೇ ಆಗಿರುತ್ತದೆ.

ಇಲ್ಲಿ ಅವಳ ಸೌಂದರ್ಯವೇ ಅವಳಿಗೆ ಮುಳುವಾಗುತ್ತದೆ. ಯೌವನದಲ್ಲಿ ಅನೇಕ ಬಯಕೆಗಳನ್ನೊತ್ತ ಅವಳು ತಂದೆಯ ವಯಸ್ಸಿನವರನ್ನು ಕೂಡಬೇಕಾಗುತ್ತದೆ. ಅವಳ ಮನಸ್ಸು ತನಗೆ ಅನುರೂಪರಾದವರನ್ನು ಬಯಸುತ್ತದೆ. ಇಚ್ಚೆಯಂತೆ ಪತಿಯನ್ನು ಪಡೆಯಲಾಗದಿದ್ದರೂ. ಮಗುವಿನ ತಾಯಿಯಾಗಲೂ ಸಾಧ್ಯವಾಗದೆ ನರಳುತ್ತಾಳೆ.

ಇಲ್ಲಿ ಮಾಧವಿ ಪಾತ್ರ ಬದುಕಿನ ದುರಂತ ಮಾದರಿಯಾಗಿ ನಿಲ್ಲುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?