Friday, March 29, 2024
Google search engine
Homeಜನಮನಪ್ಲೇಗ್ ತಡೆದ ದೇವಿ ಕೊರೊನಾ ನಿಯಂತ್ರಿಸುವರೇ?

ಪ್ಲೇಗ್ ತಡೆದ ದೇವಿ ಕೊರೊನಾ ನಿಯಂತ್ರಿಸುವರೇ?

ರಾಘವೇಂದ್ರ, ಪಾವಗಡ

1600 ರಿಂದ ಈ ಪ್ರದೇಶದ ಜನತೆಯನ್ನು ಕಾಪಾಡಿಕೊಂಡು ಬಂದಿರುವ ಮಾತೆ ಇದೀಗ ಕೊರೊನಾ ಬಾರದಂತೆ ತಡೆಯುವಳೆ?

ಅದು 1920 ನೇ ಇಸವಿ ಗ್ರಾಮಗಳನ್ನು ತೊರೆದು ಜನತೆ ತೋಟ, ಹೊಲ, ಗದ್ದೆ ಸೇರಿದ್ದರು. ಇಡೀ ಗ್ರಾಮಗಳು, ಪಟ್ಟಣ ಅಕ್ಷರಷಃ ನಿರ್ಜನ ಪ್ರದೇಶಗಳಾಗಿದ್ದವು. ಅಂತಹ ಸಂದಿಗ್ಧ ಸ್ಥಿತಿಯಲ್ಲಿ ಪಂಡಿತರೋರ್ವರು ಶೀತಲಾಂಭ ದೇವಿಗೆ ವಿಶೇಷ ಪೂಜೆ ಸಲ್ಲಿಸುವಂತೆ ಸೂಚಿಸಿದ್ದರು. ಅವರು ಹೇಳಿದ ವಿಧಿ ವಿಧಾನಗಳನ್ನು ಅನುಸರಿಸಿ ಮಾತೆಗೆ ನಿಷ್ಠೆಯಿಂದ ಪೂಜೆ ಸಲ್ಲಿಸಲಾಗಿತ್ತು. ಪಂಡಿತರು ಹೇಳಿದಂತೆ ಫ್ಲೇಗ್ ಸಹ ನಿಯಂತ್ರಣಕ್ಕೆ ಬಂದು ಜನತೆ ಮತ್ತೆ ಮನೆ ಸೇರಿದ್ದರು.

ಇದ್ಯಾವುದೊ ಕಟ್ಟು ಕಥೆಯಲ್ಲಿ ತುಮಕೂರು ಜಿಲ್ಲೆ ಪಾವಗಡದ ಶನೈಶ್ಚರ ದೇಗುಲಕ್ಕೆ ಕಾಲಿಟ್ಟ ಕೂಡಲೆ ಶೀತಲಾಂಭಾ ದೇವಿ ವಿಗ್ರಹ ಕಾಣುತ್ತದೆ. ವಿಗ್ರಹದ ಒಂದು ಬದಿಯಲ್ಲಿ ಗಣಪತಿ, ಮತ್ತೊಂದು ಬದಿಯಲ್ಲಿ ಸತ್ಯನಾರಾಯಣ ಸ್ವಾಮಿ ವಿಗ್ರಹವಿದೆ. ಮಧ್ಯದಲ್ಲಿ ಬೀಜಾಕ್ಷರಗಳ ಕೆತ್ತನೆಯುಳ್ಳ ಶೀತಲ ಯಂತ್ರವಿದೆ. ಈ ಶೀತಲ ಯಂತ್ರಕ್ಕೆ ಪೂಜೆ ಸಲ್ಲಿಸಿದರೆ ವಿವಾಹ, ಸಂತಾನ, ಉದ್ಯೋಗ, ಮನೆ, ಜಮೀನು, ನಿವೇಶನ ಸೇರಿದಂತೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಭಕ್ತಾದಿಗಳಲ್ಲಿದೆ.

1600 ರಲ್ಲಿ ವ್ಯಾಸ ಮಹರ್ಷಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಶೀತಲಾಂಭ ಫ್ಲೇಗ್ ನಿಯಂತ್ರಿಸುವುದರ ಜೊತೆಗೆ ಬರಗಾಲದಲ್ಲಿ ಈ ಪ್ರದೇಶವನ್ನು ಕಾಪಾಡಿದ್ದಾರೆ. ಆರಂಭದಲ್ಲಿ ಪಾವಗಡ ಗ್ರಾಮ ಕೋಟೆ ಒಳಭಾಗದಲ್ಲಿತ್ತು, ಈಗಿನ ದೇಗುಲ ಇರುವ ಪ್ರದೇಶ ಪಾವಗಡದ ಹೊರ ಪ್ರದೇಶವಾಗಿತ್ತು. 1950 ರ ಸುಮಾರಿಗೆ ಶೀತಲಾಂಭ ಪಕ್ಕದಲ್ಲಿ ನವಗ್ರಹಗಳನ್ನು ಪ್ರತಿಷ್ಠಾಪಿಸಿ ಶೀತಲಾಂಭ ವಿಗ್ರಹವನ್ನು ಪುನರ್ ಪ್ರತಿಷ್ಠಾಪಿಸಲಾಯಿತು.

ಕೊರೊನಾ ಮಹಾಮಾರಿಯಿಂದ ಈ ಪ್ರದೇಶವನ್ನು ಕಾಪಾಡಲು 1920 ರಲ್ಲಿ ಪ್ಲೇಗ್ ನಿಯಂತ್ರಿಸಲು ಪಂಡಿತರು ಸೂಚಿಸಿದ ವಿಧಿವಿಧಾನವನ್ನು ಅನುಸರಿಸಿ, ಆ ಪೂಜಾ ಪದ್ದತಿಯನ್ನು ದಾಖಲಿಸಲಾಗಿತ್ತು.

ಅದೇ ಪದ್ದತಿಯ ಪ್ರಕಾರ  ಕಳೆದ 7 ದಿನಗಳಿಂದ ಶೀತಲಾ ಮೂಲ ಯಂತ್ರಕ್ಕೆ ವೀಳ್ಯದೆಲೆ, ನಿಂಬೆಹಣ್ಣು, ಎಳನೀರಿನಿಂದ ಅಭಿಷೇಕ ಮಾಡಲಾಗಿದೆ. ದುರ್ಗಾಶಾಂತಿ ಹೋಮ, ಮೃತ್ಯುಂಜಯ ಹೋಮ, ಗಣಹೋಮ, ಲಲಿತಾ ಸಹಸ್ರನಾಮ ಹೋಮ ಮಾಡಿ ಶುಕ್ರವಾರ ಪೂರ್ಣಾಹುತಿ ಸಲ್ಲಿಸಲಾಯಿತು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?