Friday, April 26, 2024
Google search engine
Homeಜನಮನಬೀಜ ಮಸೂದೆ: ರೈತನಿಗೂ ಜೈಲು!?

ಬೀಜ ಮಸೂದೆ: ರೈತನಿಗೂ ಜೈಲು!?

ಮನೋಹರ್ ಪಟೇಲ್


ತುಮಕೂರು; ಹಿಂದಿನ ಕರಡಿನಲ್ಲಿ ಮಸೂದೆಯಲ್ಲಿ ರೈತರ ಅವಶ್ಯಕತೆಗಳಾದ ತಳಿ/ಪ್ರಭೇದಗಳ ಬೀಜ/ಕಸಿಗಳನ್ನು ಉಳಿಸಿಕೊಳ್ಳುವ, ಬಳಕೆಮಾಡುವ, ವಿನಿಮಯಮಾಡಿಕೊಳ್ಳುವ, ಹಂಚಿಕೊಳ್ಳುವ ಅಥವ ತನ್ನ ತೋಟ/ಜಮೀನಿನಲ್ಲಿ ಬೆಳೆದ ಬೀಜಗಳು ಮತ್ತು ಸಸ್ಯಗಳನ್ನು ಬ್ರಾಂಡಿಂಗ್ ಮಾಡದೆ ಮಾರುವ, ನಿಭಂಧನೆಗಳಿಂದ ವಿನಾಯಿತಿ ನೀಡುವ ಷರತ್ತು ಇತ್ತು.

ಆದರೆ ಪ್ರಸ್ತುತ ಕರಡಿನಲ್ಲಿ ಆ ನಿಯಮಗಳನ್ನು ಕರಡಿನಿಂದ ಅಳಿಸಿಲಾಗಿದ್ದು, ಬದಲಿಗೆ ಸರ್ಕಾರದ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಂಶೋದನೆ ಮತ್ತು ವಿಸ್ತರಣೆ ಸಂಸ್ಥೆಗಳಿಗೆ ಮಾತ್ರ ಈ ಕಾಯಿದೆಯಿಂದ ವಿನಾಯಿತಿಯನ್ನು ನೀಡಿದೆ.

ಕಳೆದ ಎರೆಡುವರೆ ದಶಕಗಳಲ್ಲಿ ವಿವಿಧ ಸರ್ಕಾರಗಳ ಬೀಜ ವ್ಯವಸ್ಥೆಯ ನವ ಉದಾರತೆಯ ಖಾಸಗಿಕರಣ ಕಾರಣದಿಂದ ನಮ್ಮ ದೇಶದ ಸಾರ್ವಜನಿಕವಾಗಿ ಬಿತ್ತನೆ ಬೀಜಗಳ ಸಂತಾನೋತ್ಪತ್ತಿ ಕಾರ್ಯಕ್ರಮಗಳು ಕುಸಿದಿ ಹೋಗಿವೆ, ನಮ್ಮ ಸಾರ್ವಜನಿಕ ಬೀಜ ನಿಗಮಗಳು ಸಂಪನ್ಮೂಲಗಳಿಲ್ಲದೆ ನರಳುತ್ತಿದ್ದು, ಬಹುರಾಷ್ಠ್ರೀಯ ಕಂಪನಿಗಳ ಬಲಾಡ್ಯ ಸಂಶೋಧನೆ ಮತ್ತು ವಿಸ್ತರಣೆ ಕೇಂದ್ರಗಳು ನಮ್ಮ ಸಾರ್ವಜನಿಕ ಸಂಶೋಧನೆ ಮತ್ತು ವಿಸ್ತರಣಾ ವ್ಯವಸ್ಥೆಗಳನ್ನು ಬೀಜ ಮಾರುಕಟ್ಟೆಯಿಂದ ಒಕ್ಕಲೆಬ್ಬಿಸುತ್ತಿವೆ.

2019 ರ ಬೀಜ ಕಾಯ್ದೆಯ ಆವೃತ್ತಿಯು ಖಾಸಗಿ ಕಂಪನಿಗಳಿಗೆ ಮುಕ್ತ ಹಸ್ತದಿಂದ ಸ್ವಾಗತ ಮಾಡುತ್ತ ಆ ಮೂಲಕ ಭಾರತದ ರೈತರ ಹಕ್ಕುಗಳು ಮತ್ತು ಬೀಜ ಸಾರ್ವಭೌಮತ್ವವನ್ನು ನಾಶಪಡಿಸಿದೆ.
ಈ ಕಾಯಿದೆಯ ಷರತ್ತು 11 ರಡಿಯಲ್ಲಿ ಯಾರೇ ಕೃಷಿ ಜಮೀನು ಹೊಂದಿರಿವವ ಈಗ “ರೈತ” ಎಂಬ ಹೊಸ ವ್ಯಾಖ್ಯಾಯನದಡಿಯಲ್ಲಿ , ಬೇಯರ್ ಕಂಪನಿಯು “ ರೈತ ” ಎಂದು ಅರ್ಹತೆ ಪಡೆಯಬಹುದು !! .

ಹಾಗೇ, 47 ನೇ ಷರತ್ತಿನಂತೆ ವಿಶ್ವದ ದೈತ್ಯ ಕಂಪನಿಗಳಾದ ಬೇಯರ್/ಮಾನ್ಸಾಂಟೋ ಮತ್ತು ಇತರೆ ಬಹುರಾಷ್ಠ್ರೀಯ ಕಂಪನಿಗಳು ಪ್ರಸ್ಥುತ ಹೊಸ ಕಾಯಿದೆಯಿಂದ ನಿಯಂತ್ರಣ ಮುಕ್ತಗೊಳಿಸಬಹುದಾಗಿರುತ್ತದೆ !!.

ಇದಕ್ಕಾಗಿಯೇ, ಈ ಕಾಯಿದೆ ಬಹುರಾಷ್ಠ್ರೀಯ ನಿಗಮಗಳ ಪಾಲಿಗೆ ಅನಿಯಂತ್ರಣ ಮಸೂದೆ, ಮತ್ತು ಭಾರತದ ಶ್ರೀಮಂತ ಕೃಷಿ ಜೀವವೈವಿಧ್ಯತೆ ಪರಂಪರೆಯನ್ನು ಉಳಿಸಿ, ಸಂರಕ್ಷಿಸಿ ಮತ್ತು ಬೆಳಸಿಕೊಂಡು ಬಂದ ನಿಜ ರೈತರ ಪಾಲಿಗೆ ಪೋಲಿಸ್ ರಾಜ್ ಮಸೂದೆ ಎಂದು ಹೇಳಬಹುದು.

ಈ ಕಾಯಿದೆಯನ್ನು ರೈತ ಉಲ್ಲಂಘನೆ ಮಾಡಿದ ಪಕ್ಷದಲ್ಲಿ ಕನಿಷ್ಠ ಒಂದು ವರ್ಷ ಜೈಲು ಮತ್ತು ಐದು ಲಕ್ಷ ರೂಪಾಯಿಗಳವರೆಗೆ ಜುಲ್ಲ್ಮಾನ ಹಾಕಲಾಗುತ್ತದೆ !! ಇದು ಕೇವಲ ಭಾರತದ“ರೈತ” ನ ಭೂಮಿ, ಬಿತ್ತನೆ ಬೀಜಗಳ ಹಕ್ಕು ಮತ್ತು ಸಾರ್ವಭೌಮತ್ವವನ್ನು ಕಿತ್ತಿಕೊಳ್ಳುವ ಕುತಂತ್ರವಾಗಿದೆ.

(ಮುಂದುವರೆಯುವುದು: ಲೇಖನದ ಅಭಿಪ್ರಾಯ, ವಿಶ್ಲೇಷಣೆ ಲೇಖಕರದೇ ಹೊರತು ಪತ್ರಿಕೆಯದ್ದಲ್ಲ)

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?