Thursday, April 25, 2024
Google search engine
Homeತುಮಕೂರು ಲೈವ್ಮಾರ್ಚ್.15ರಿಂದ ಚಿಕ್ಕಬೀರನಕೆರೆ ಮಾಯಮ್ಮ ದೇವಿ ಜಾತ್ರೆ ಹಾಗೂ ಸ್ವರ್ಣ ಕಿರೀಟ ಸಮರ್ಪಣಾ ಮಹೋತ್ಸವ

ಮಾರ್ಚ್.15ರಿಂದ ಚಿಕ್ಕಬೀರನಕೆರೆ ಮಾಯಮ್ಮ ದೇವಿ ಜಾತ್ರೆ ಹಾಗೂ ಸ್ವರ್ಣ ಕಿರೀಟ ಸಮರ್ಪಣಾ ಮಹೋತ್ಸವ

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕಬೀರನಕೆರೆ ಗ್ರಾಮದೇವತೆ ಮಾಯಮ್ಮದೇವಿಯ ಜಾತ್ರೆ ಹಾಗೂ ದೇವಿಯವರಿಗೆ ಸ್ವರ್ಣ ಕಿರೀಟ ಧಾರಣೆ ಮಹೋತ್ಸವವು ಮಾ. 15 ರಿಂದ 17 ರವರೆಗೆ ನಡೆಯಲಿದೆಂದು ಮಾಯಮ್ಮದೇವಿ ಆಚರಣ ಸಮಿತಿಯ ಕುರಿಬಾಂಡ್ ಖ್ಯಾತಿ ರಂಗಸ್ವಾಮಿ ತಿಳಿಸಿದರು. ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಚಿಕ್ಕಬೀರನಕೆರೆ ಗ್ರಾಮ ದೇವತೆ ಒಕ್ಕಲಿನ 24 ಗ್ರಾಮಗಳು ಆಚರಿಸುವ ವಿಶೇಷ ಹಬ್ಬ ಇದಾಗಿದ್ದು ಮಾಯಮ್ಮದೇವಿಯವರ ಹಬ್ಬ ಮೂರು ದಿನಗಳ ಕಾಲ ಜರುಗಲಿದೆ. ಹಬ್ಬದ ಅಂಗವಾಗಿ ಆರತಿ ಉತ್ಸವ, ಉಯ್ಯಾಲೋತ್ಸವ, ಹೂವಿನ ಪಲ್ಲಕ್ಕಿ ಉತ್ಸವ, ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ಜರುಗಲಿವೆ. ಇದೇ ವೇಳೆ ಚಿಕ್ಕಬೀರನಕೆರೆ ಗ್ರಾಮಸ್ಥರು, ಮಾಯಮ್ಮ ದೇವಿ ಗೆಳೆಯರ ಬಳಗ ಹಾಗೂ ಬುಡಕಟ್ಟಿನ ಭಕ್ತರುಗಳು ಹಬ್ಬದ ಅಂಗವಾಗಿ ಮಾಯಮ್ಮದೇವಿಯವರಿಗೆ ಸ್ವರ್ಣಕಿರೀಟ ಧಾರಣೆಯನ್ನು ಸಹ ನೆರವೇರಿಸಲಿದ್ದಾರೆ. ಹಬ್ಬ ಆಚರಣೆ ವೇಳೆ ವೀರಭದ್ರನ ಕುಣಿತ, ಚಿಟ್ಟಿಮೇಳ, ಮದ್ದುಗುಂಡಿನ ಪ್ರದರ್ಶನಗಳಂತಹ ವಿಭಿನ್ನ ಜಾನಪದ ಕಲೆಗಳ ವೈಭವ ಅನಾವರಣಗೊಳ್ಳಲಿದೆ. ಮಾಯಮ್ಮ ದೇವಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ‘ಕೃಷ್ಣ ಸಂಧಾನ’ ಎಂಬ ಪೌರಾಣಿಕ ನಾಟಕವೂ ಸಹ ಪ್ರದರ್ಶನಗೊಳ್ಳಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?