Friday, March 29, 2024
Google search engine
Homeತುಮಕೂರು ಲೈವ್ರಾಜ್ಯದ ಎರಡನೇ ದೊಡ್ಡ ಜಿಲ್ಲೆಯ ಅದ್ವಾನ!

ರಾಜ್ಯದ ಎರಡನೇ ದೊಡ್ಡ ಜಿಲ್ಲೆಯ ಅದ್ವಾನ!

ಲಕ್ಷ್ಮೀಕಾಂತರಾಜು ಎಂಜಿ


Gubbi: ಸರ್ಕಾರಿ‌ ಪ್ರಕಟಣೆ ಹಾಗೂ ಮಾಹಿತಿ ಸತ್ಯಕ್ಕೆ ಹತ್ತಿರವಲ್ಲ ,ಸತ್ಯವಾಗಿಯೇ ಇರುತ್ತವೆ. ಆದರೆ,ಸರ್ಕಾರಿ ಇಲಾಖೆಯ ಕಚೇರಿಯೊಂದು ತನ್ನ ತನ್ನ ವೆಬ್ ಸೈಟಿನಲ್ಲಿ ತಪ್ಪು ಮಾಹಿತಿ ಪ್ರಕಟಿಸಿಕೊಂಡಿದೆ.

ಹೌದು. ರಾಜ್ಯದ ಎರಡನೇಯ ದೊಡ್ಡ ಜಿಲ್ಲೆಯಾದ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕೃತ ಸರ್ಕಾರಿ ವೆಬ್ ಸೈಟಿನಲ್ಲಿ ಮಾಹಿತಿಗಳನ್ನ ತಪ್ಪಾಗಿ ಪ್ರಕಟಿಸಿದೆ.

ಜಿಲ್ಲೆಯ ಜಿಲ್ಲಾಡಳಿತದ ವಿಷಯಗಳು,ಜಿಲ್ಲೆಯ ಕುರಿತು ಹಾಗೂ ಆಡಳಿತ ಅಧಿಕಾರಿಗಳ ಮಾಹಿತಿಗಳನ್ನ ಈ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿರುತ್ತದೆ‌. ಈ ವೆಬ್ ಸೈಟಿನಲ್ಲಿ ಜಿಲ್ಲೆಯ ಪ್ರಮುಖ ಅಧಿಕಾರಿಗಳಾದ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಯ ಎಸ್ ಪಿ ಹಾಗೂ ಜಿಪಂ ಕಾರ್ಯನಿರ್ವಹಣಾಧಿಕಾರಿಗಳ ಮಾಹಿತಿಯನ್ನ ಪ್ರಕಟಿಸಲಾಗಿರುತ್ತದೆ.

 

ಈ ವೆಬ್ ಸೈಟಿಗೆ ಬೇಟಿಕೊಟ್ಟ ನೆಟ್ಟಿಗರು ಜಿಲ್ಲೆಯ ಅಧಿಕಾರಿಗಳು ಆಡಳಿತ ಸಮಗ್ರ ಮಾಹಿತಿ ಪಡೆಯಬಹುದು. ಇಂಥಹ ಮಹತ್ತರವುಳ್ಳ ವೆಬ್ ಸೈಟಿನಲ್ಲಿ ಪ್ರಸಕ್ತ ಇರುವ ಅಧಿಕಾರಿಗಳ ಹೆಸರು ನಮೂದಿಸದೇ ಹಿಂದೆ ಕಾರ್ಯನಿರ್ವಹಿಸಿದ ಅಧಿಕಾರಿಗಳ ಹೆಸರೇ ಇದ್ದು ಜಿಲ್ಲಾಧಿಕಾರಿಗಳ ಕಚೇರಿಯ ಬೇಜವ್ದಾರಿ ಎದ್ದು ಕಾಣುತ್ತಿದೆ.

ತುಮಕೂರು ಜಿಲ್ಲಾಧಿಕಾರಿಗಳ ವೆಬ್ ಸೈಟಿನ ಪ್ರಕಾರ ಇಂದಿಗೂ ಜಿಲ್ಲೆಯ ಎಡಿಸಿ ಅನಿತಾ , ಜಿಪಂ ಸಿಇಓ ಅನೀಸ್ ಹಾಗೂ ಎಸ್ ಪಿ ದಿವ್ಯಾಗೋಪಿನಾಥ್ ಅವರೇ ಇದ್ದಾರೆ. ವಿಪರ್ಯಾಸ ಅಂದ್ರೆ,ಈ ಅಧಿಕಾರಿಗಳು ಇಲ್ಲಿಂದ ವರ್ಗಾವಣೆಗೊಂಡು ಒಂದೂವರೆ ವರ್ಷಗಳೇ ಕಳೆದು ಎಸ್ ಪಿ ಯಾಗಿ ವಂಶಿಕೃಷ್ಣ ಹಾಗೂ ಜಿಪಂ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಜಿಲ್ಲೆಯ ವೆಬ್ ಸೈಟ್ ನ ನಿರ್ವಹಣೆ ಹೊತ್ತಿರುವ ಎನ್ ಐ ಸಿ ಯು ಬೇವಜಬ್ದಾರಿಯಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯ ವೆಬ್ ಸೈಟ್ ತಪ್ಪು ಮಾಹಿತಿಗಳಿಂದ ಕೂಡಿರುವುದಂತು ಸತ್ಯ.

ಜಿಲ್ಲೆಯ ವೆಬ್ ಸೈಟಿಗೆ ಬೇಟಿಕೊಡುವ ನೆಟ್ಟಿಗರಿಗೆ ಇಲ್ಲಿ ಪ್ರಸ್ತುತವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳ ವಿವರ ತಿಳಿಯದೇ ತಪ್ಪು ಮಾಹಿತಿ‌ ಪಡೆಯುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?