Tuesday, April 16, 2024
Google search engine
Homeತುಮಕೂರು ಲೈವ್ಶಿಕ್ಷಣ ಸಂಪತ್ತಿಗೆ ಒತ್ತು ನೀಡಿ : ಶಾಸಕ ವೆಂಕಟರಮಣಪ್ಪ

ಶಿಕ್ಷಣ ಸಂಪತ್ತಿಗೆ ಒತ್ತು ನೀಡಿ : ಶಾಸಕ ವೆಂಕಟರಮಣಪ್ಪ

Publicstory. in


ವೈಎನ್ ಹೊಸಕೋಟೆ : ಪೋಷಕರು ತಾತ್ಕಾಲಿಕವಾದ ಹಣ ಆಸ್ತಿ ಸಂಪತ್ತಿಗೆ ಬದಲಾಗಿ ಶಾಶ್ವತವಾಗದ ಶಿಕ್ಷಣ ಸಂಪತ್ತನ್ನು ಮಕ್ಕಳಿಗೆ ನೀಡಲು ಒತ್ತು ನೀಡಬೇಕು ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.

ಗ್ರಾಮದ ವಾಸವಿ ವಿದ್ಯಾನಿಕೇತನ ಸಂಸ್ಥೆಯ ಪ್ರಾಥಮಿಕ ತರಗತಿಗಳ ನೂತನ ಕಟ್ಟಡ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಹಾಗೂ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂಗ್ಲೀಷ್ ಜೊತೆಗೆ ಮಕ್ಕಳಲ್ಲಿ ಮಾತೃಭಾಷೆ ಕನ್ನಡಕ್ಕೂ ಹೆಚ್ಚಿನ ಒತ್ತು ನೀಡಬೇಕು, ಪಠ್ಯ ಶಿಕ್ಷಣದ ಜೊತೆಯಲ್ಲಿ ಸಂಸ್ಕಾರವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಾಗಿದೆ ಎಂದರು.

ತಾಲ್ಲೂಕಿನ ಅಭಿವೃದ್ಧಿಯೇ ನನ್ನ ಗುರಿ. ತುಂಗಭದ್ರಾ ಕುಡಿಯುವ ನೀರು ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ, ರೈಲ್ವೆ ಯೋಜನೆಗಳು ಎರಡು ವರ್ಷದ ಒಳಗಾಗಿ ಪೂರ್ಣಗೊಳ್ಳಲಿವೆ. ಇದರಿಂದ ತಾಲ್ಲೂಕಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು ಹಾಗೂ ಶಾಸಕರ ಅಭಿವೃದ್ಧಿ ಅನುದಾನದಿಂದ ೫ ಲಕ್ಷ ರೂಗಳನ್ನು ಶಾಲಾ ಕಟ್ಟಡಕ್ಕೆ ದೇಣಿಗೆ ನೀಡುವ ಭರವಸೆ ನೀಡಿದರು.

ಮಧುಗಿರಿ ತಾಲ್ಲೂಕಿನ ತಗ್ಗೀಹಳ್ಳಿ ರಾಮಕೃಷ್ಣ ಮಠದ ಶ್ರೀ ರಾಮಾನಂದ ಸ್ವಾಮೀಜಿ ಆಶೀರ್ವಚನ ನೀಡುತ್ತಾ ಮಕ್ಕಳು ಉತ್ತಮ ಪ್ರಜೆಗಳಾಗಬೇಕಾದರೆ ಶಾಲೆ ಮತ್ತು ಮನೆಗಳಲ್ಲು ಉತ್ತಮ ವಾತಾವರಣವಿರಬೇಕು ಎಂದರು.

ಪೋಷಕರಲ್ಲಿ ಉತ್ತಮ ಹವ್ಯಾಸಗಳು ಮತ್ತು ನಡತೆ ಇದ್ದರೆ ಅದನ್ನೇ ಮಕ್ಕಳು ಅನುಸರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂದರು.

ಶಾಲಾ ವಾರ್ಷಿಕೋತ್ಸವಗಳಲ್ಲಿ ಭರತ ನಾಟ್ಯಗಳಂತಹ ದೇಶಿಯ ಸಂಸ್ಕೃತಿಗೆ ಪೂರಕವಾದ ನೃತ್ಯಗಳ ಪ್ರದರ್ಶನವಾಗಬೇಕಾಗಿದೆ. ಜೊತೆಗೆ ವಿದ್ಯಾರ್ಥಿಗಳು ಕಬಡ್ಡಿ, ಖೋಖೋ ದಂತಹ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವೃದ್ಧಿಸುವ ಆಟಗಳ ಕಡೆ ಗಮನ ನೀಡಬೇಕಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಇಂದು ಪ್ಲೇಸ್ಕೂಲ್ ಮಾದರಿಯಲ್ಲಿ ಆಧುನಿಕ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ನಗರದ ವಿದ್ಯಾರ್ಥಿಗಳಿಗೆ ಸರಿಸಮನಾಗಿ ನಮ್ಮ ವಿದ್ಯಾರ್ಥಿಗಳು ಬೆಳೆಯಲು ಸಾಧ್ಯ ಎಂದು ಟ್ರಸ್ಟಿನ ಅಧ್ಯಕ್ಷ ಡಾ.ಎಂ.ಪ್ರೇಮಯೋಗಿ ತಿಳಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಾನಿಗಳ ಕೊಡುಗೆಯ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಾರ್ಯಕ್ರಮದ ಭಾಗವಾಗಿ ವಿಜ್ಞಾನ ವಸ್ತುಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯದರ್ಶಿ ಎನ್.ಜಿ.ರಾಮು, ಅಡಳಿತಾಧಿಕಾರಿ ಎನ್.ಜಿ.ಶ್ರೀನಿವಾಸ, ಟ್ರಸ್ಟಿಗಳಾದ ಕೆ.ಎಸ್.ವೆಂಕಟರಮಣಪ್ಪ, ಪಿ.ಎಂ.ಮಂಜುನಾಥ, ಟಿ.ವಿ.ಜಗನ್ನಾಥ, ಶಿವಾನಂದಗುಪ್ತ, ಟಿ.ಅರ್.ವಿ ಪ್ರಸಾದ್, ಟಿ.ವಿ ವೆಂಕಟೇಶ್, ಎನ್.ಅರ್.ಅಶ್ವಥ್, ಎ.ನಾಗರಾಜು, ಇ.ವಿ.ಸತ್ಯನಾರಾಯಣ, ಟಿ.ಆರ್.ನಾಗರಾಜು, ಇ.ಎನ್.ಶ್ರೀನಿವಾಸ, ಎನ್.ಎಸ್.ಮಂಜುನಾಥ, ಮಲ್ಲಿಕಾರ್ಜುನಶೆಟ್ಟಿ, ಪ್ರಾಂಶುಪಾಲ ಸುರೇಶ್, ಮುಖ್ಯಶಿಕ್ಷಕರಾದ ಸತ್ಯನಾರಾಯಣರೆಡ್ಡಿ,ಉಮಾದೇವಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?