Thursday, March 28, 2024
Google search engine
Homeತುಮಕೂರ್ ಲೈವ್ಸಿದ್ದರಾಮಯ್ಯನವರು ಯಾವ ಪಕ್ಷದಲ್ಲಿರುತ್ತಾರೋ ನಾನು ಅಲ್ಲಿಯೇ  ಇರುತ್ತೇನೆ: ...

ಸಿದ್ದರಾಮಯ್ಯನವರು ಯಾವ ಪಕ್ಷದಲ್ಲಿರುತ್ತಾರೋ ನಾನು ಅಲ್ಲಿಯೇ  ಇರುತ್ತೇನೆ: ಕೆ. ಎನ್.ರಾಜಣ್ಣ

ತಾಲ್ಲೂಕಿನ ಐ ಡಿ ಹಳ್ಳಿಯಲ್ಲಿ ಆಯೋಜಿಸಿದ್ದ ಟಿಡಿಸಿಸಿ ಬ್ಯಾಂಕ್‍ನ ನೂತನ 30ನೇ ಶಾಖೆಯ ಉದ್ಘಾಟನಾ ಸಮಾರಂಭವನ್ನು ಸಂಸದ ಜಿ.ಎಸ್.ಬಸವರಾಜು ಉದ್ಘಾಟಿಸಿದರು.

ಮಧುಗಿರಿ: ಸಿದ್ದರಾಮಯ್ಯನವರು ಯಾವ ಪಕ್ಷದಲ್ಲಿರುತ್ತಾರೋ ನಾನು ಅಲ್ಲಿಯೇ ಇರುತ್ತೇನೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು ನಾವು ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದರು.

ತಾಲ್ಲೂಕಿನ ಐ ಡಿ ಹಳ್ಳಿಯಲ್ಲಿ ಆಯೋಜಿಸಿದ್ದ ಟಿಡಿಸಿಸಿ ಬ್ಯಾಂಕ್‍ನ ನೂತನ 30ನೇ ಶಾಖೆಯ ಉದ್ಘಾಟನಾ ಸಮಾರಂಭಧ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ನಾನು ಇಂದಿರಾ ಗಾಂಧಿ ಹಾಗೂ ದೇವರಾಜ ಅರಸು ರವರ ಅನುಯಾಯಿ ಯಾಗಿದ್ದು ಅವರ ಆದರ್ಶಗಳನ್ನು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಲ್ಲಿ ಕಂಡಿದ್ದೇನೆ. ಬಡವರ ಪರ ಕಾಳಜಿ ಇದ್ದೂ ಅವರು ಮುಖ್ಯಮಂತ್ರಿ ಯಾಗಿದ್ದಾಗ ಅನೇಕ ಜನ ಪರವಾದಂತಹ ಭಾಗ್ಯಗಳನ್ನು ರಾಜ್ಯದ ಜನರಿಗೆ ನೀಡಿದ್ದಾರೆ.

ಕಳೆದ ವಿಧಾನ ಸಭೆ ಚುನಾವಣೆಯ ನಂತರ ನನ್ನದು ಕ್ಷೇತ್ರದಲ್ಲಿ ಮೊದಲ ಕಾರ್ಯಕ್ರಮವಾಗಿದೆ. ನಾನು ಈ ಹಿಂದೆ ಎರಡು ಬಾರಿ ಪರಾಜಿತಗೊಂಡಾಗಲು ಬೇಸರವಾಗಿರಲಿಲ್ಲ 2013ರಲ್ಲಿ ತಾಲ್ಲೂಕಿನ ಜನತೆ ನನ್ನನ್ನು ಮತ್ತೆ ಜಯಶೀಲರನ್ನಾಗಿಸಿದರು. ಆದರೆ ಕ್ಷೇತ್ರದ ಜನರು ನೀಡಿದ ಅಧಿಕಾರವಧಿಯಲ್ಲಿ ಸಾವಿರಾರು ಕೋಟಿ ಅನುದಾನದಲ್ಲಿ ಜನ ಪರವಾಗಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದ್ದೇನೆ.

ಯಾವುದೇ ಅಧಿಕಾರಿ ಯಿಂದ ಅಥವಾ ಗುತ್ತಿಗೆದಾರನಿಂದ ನಯಾ ಪೈಸೆಯನ್ನು ಮುಟ್ಟಿಲ್ಲ ಯಾರಾದರೂ ನಾನು ಲಂಚ ಪಡೆದದ್ದನ್ನು ಸಾಬೀತು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳತ್ತೆನೆಂದು ಮನ ನೊಂದು ನುಡಿದರು. ತಾಲ್ಲೂಕಿಗೆ ಸಹಕಾರ ಸಂಘಧ ದಿಂದ ರೈತರಿಗೆ ನೀಡಿದ 164 ಕೋಟಿ ರೂ ಸಾಲ ಮನ್ನಾ ವಾಗಿದೆ.

ಬರಗಾಲ ಪೀಡಿತ ಕ್ಷೇತ್ರದಲ್ಲಿ ಇಷ್ಟೂ ಅಭಿವೃದ್ಧಿಯಾದರೂ ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಅಭಿವೃಧ್ಧಿ ಕಾರ್ಯಗಳು ಮತವಾಗಿ ಪರಿವರ್ತನೆಯಾಗಲಿಲ್ಲ ನನ್ನ ಮನಸ್ಸಿಗೆ ಬೇಸರವಾಗಿ ಕ್ಷೇತ್ರಕ್ಕೆ ಬರಲು ಮನಸ್ಸಾಗಲಿಲ್ಲ ಆದರೆ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನನ್ನ ಮಾತಿಗೆ ಮನ್ನೆಣೆ ನೀಡಿ ಕುಟುಂಬ ರಾಜಕೀಯ ಮಾಡುವ ಮಾಜಿ ಪ್ರಧಾನಿಯನ್ನು ಮನೆಗೆ ಕಳುಹಿಸುವುದರ ಮೂಲಕ ಮತದಾರರು ಪರಿವರ್ತನೆಯಾಗಿದ್ದಾರೆಂದು ಮನಸ್ಸಿಗೆ ಸಮಧಾನವಾಯಿತು. ನಾನು ಈ ಭಾಗದ ಜನತೆಗೆ ನೀಡಿದ ಆಶ್ವಾಸನೆಯಂತೆ ನೂತ ಶಾಖೆ ಮಂಜೂರು ಮಾಡಿ ಕೊಟ್ಟಿದ್ದೇನೆ.

ಬ್ಯಾಂಕ್ ನಿಮ್ಮ ಆಸ್ತಿಯಾಗಿದ್ದು ಸಂರಕ್ಷಿಸುವುದರ ಜೊತೆಗೆ ಹೆಚ್ಚು ಹೆಚ್ಚಾಗಿ ಠೇವಣಿ ಜಮಾ ಮಾಡುವಂತೆ ರೈತರಲ್ಲಿ ಮನವಿ ಮಾಡಿದರು. ಕಳೆದ ಸಾರಿ ರಾಜ್ಯ ಸರಕಾರ ಮನ್ನಾ ಮಾಡಿದ ಹಣ ಇನ್ನೂ ಬಂದಿಲ್ಲ ಬಂದ ನಂತರ ಹಂತ ಹಂತವಾಗಿ ಮತ್ತೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಕುಟುಂಬ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಆಡ್ಡಿಪಡಿಸಿದ್ದರಿಂದ ಜಿಲ್ಲೆಯ ಜನರೇ ಅವರನ್ನು ಜಿಲ್ಲೆಯಿಂದ ಹೊರಹಾಕಿದರು. ಮಧುಗಿರಿ ಕ್ಷೇತ್ರದ ಮತದಾರರ ಆರ್ಶೀವಾದ ಕೆ.ಎನ್.ರಾಜಣ್ಣ ನವರ ಸಹಕಾರದಿಂದ ನಾನು ಸಂಸದನಾಗಿದ್ದೇನೆ.

ಕೆ.ಎನ್.ರಾಜಣ್ಣನವರು ಯಾವುದೇ ಪಕ್ಷದಲ್ಲಿದ್ದರು ಕೂಡ ನನ್ನ ಸಂಪೂರ್ಣ ಸಹಕಾರ ನೀಡುತ್ತೆನೆಂದರು. ಸಹಕಾರ ಕ್ಷೇತ್ರದಲ್ಲಿ ಧ್ರುವೀಕರಣ ಮಾಡಿದ್ದಾರೆ. ಹೋಬಳಿಗೊಂದು ಶಾಖೆಗಳನ್ನು ಆರಂಭಿಸಿದ್ದಾರೆ ಮಂಬರುವ ದಿನಗಳಲ್ಲಿ ಪಂಚಾಯಾತಿಗೊಂದರಂತೆ ಶಾಖೆಯನ್ನು ತೆರೆಯುವ ಮೂಲಕ ರೈತರಿಗೆ ಹೆಚ್ಚು ಅನೂಕೂಲ ಮಾಡಿಕೊಡಲಿ ಎಂದರು.

ರಾಜ್ಯ ಮಾರಾಟ ಮಹಾಮಂಡಲದ ನಿರ್ದೇಶಕ ಆರ್.ರಾಜೇಂದ್ರ ಮಾತನಾಡಿ ಐಡಿಹಳ್ಳಿಯ ರೈತರು ಹಾಗೂ ಸಹಕಾರಿಗಳು ಈ ಹಿಂದೆ ಹಣದ ವಹಿವಾಟಿಗೆ ಮಧುಗಿರಿಯ ಬ್ಯಾಂಕಿಗೆ ಬರಬೇಕಾಗಿತ್ತು ಅಲೆದಾಟ ತಪ್ಪಿಸುವ ದೃಷ್ಟಿಯಿಂದ ನೂತನ ಶಾಖೆಯನ್ನು ತೆರೆದು ಮಾಜಿ ಶಾಸಕರು ಅನೂಕೂಲ ಮಾಡಿಕೊಟ್ಟಿದ್ದಾರೆ. ಹಾಲಿ ಶಾಸಕ ಎಂ.ವೀರಭದ್ರಯ್ಯ ಚುನಾವಣೆಯಲ್ಲಿ ಕಳೆದ ಬಾರಿ ಶೇ.10ರಷ್ಟು ಹೆಚ್ಚು ಅಭಿವೃದ್ಧಿ ಕಾರ್ಯ ಮಾಡುತ್ತೆನೆಂದು ಭರವಸೆ ನೀಡಿದವರು ಈಗ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಶೇ.10 ರಿಂದ 15ರಷ್ಟು ಕಮೀಷನ್ ಪಡೆಯುತ್ತಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿಕೊಳ್ಳುತ್ತಿರುವುದು ಕೇಳಿ ಬರುತ್ತಿದೆ.

ರಾಜ್ಯ ಸಹಕಾರ ಮಹಾ ಮಂಡಲದ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ ಜಿಲ್ಲೆಯಲ್ಲಿ 800ಕೋಟಿ, ತಾಲ್ಲೂಕಿನಲ್ಲಿ 164ಕೋಟಿ ಸಾಲ ಪಕ್ಷಾತೀತವಾಗಿ ಜಾತ್ಯಾತೀತಾವಾಗಿ ಮನ್ನಾ ಆಗಿದೆ ಇದೂ ಸಹ ಕೆ.ಎನ್.ರಾಜಣ್ಣನವರ ಪರಿಶ್ರಮವಾಗಿದೆ ಮುಂದಿನ ದಿನಗಳಲ್ಲಿ ಅವರನ್ನು ಮತ್ತೆ ಚುನಾಯಿಸುವ ಜವಾಬ್ದಾರಿ ನಿಮ್ಮ ನಮ್ಮೆಲ್ಲಾರ ಮೇಲಿದೆ ಎಂದರು.

ಬಾಕ್ಸ್: ಮಧುಗಿರಿ ಗಡಿ ಪ್ರದೇಶದಿಂದ ತಾಲ್ಲೂಕಿನ ಗಡಿ ಭಾಗವಾದ ಐಡಿಹಳ್ಳಿ ಗ್ರಾಮದವರೆರೆವಿಗೂ ಕೆ.ಎನ್.ರಾಜಣ್ಣ ಹಾಗೂ ಸಂಸದರು ಬರುವ ದಾರಿಯೂದ್ದಕ್ಕೂ ಪತ್ರಿ ಗ್ರಾಮಗಳಲ್ಲೂ ಅಭಿಮಾನಿಗಳು, ಗ್ರಾಮಸ್ಥರು ತಳಿರು ತೋರಣಗಳಿಂದ ಸಿಂಗರಿಸಿ ಗಣ್ಯರನ್ನು ಹೂ ಮಾಲೆ ನೀಡುವುದರ ಮೂಲಕ ಸ್ವಾಗತಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಕಂಡು ಬಂತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ .ಕೆ.ಲಕ್ಕಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಸ್ .ಆರ್.ರಾಜಗೋಪಾಲ್, ಜಿ.ಪಂ ಸದಸ್ಯರಾದ ಜಿ.ಜೆ.ರಾಜಣ್ಣ, ಚೌಡಪ್ಪ, ಮಂಜುಳಾ ಆದಿನಾರಾಯಣ ರೆಡ್ಡಿ, ತಾ.ಪಂ ಅಧ್ಯಕ್ಷೆ. ಇಂದಿರಾ ದೇನನಾಯ್ಕ, ಸದಸ್ಯರಾದ.ಕೆ.ಎ.ರಾಜು, ಮಹಾದೇವಿ, ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ, ವಿ.ಎಸ್.ಎಸ್.ಎನ್.ಅಧ್ಯಕ್ಷ ಶಿವಶಂಕರ ರೆಡ್ಡಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಿಕ್ಕೋಬಳರೆಡ್ಡಿ, ಎಪಿಎಂಸಿ ಅಧ್ಯಕ್ಷ ಎಂ.ಬಿ.ಮರಿಯಣ್ಣ, ಟಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಕುಬೇಂದ್ರನಾಯ್ಕ, ನಿರ್ದೇಶಕರುಗಳಾದ ಎಸ್.ಹನುಮಾನ್, ಸಿಂಗದಹಳ್ಳಿ ರಾಜಕುಮಾರ್, ಲಕ್ಷ್ಮೀನಾರಾಯಣ್, ಹೆಚ್.ಟಿ.ತಿಮ್ಮರಾಜು, ಪುರಸಭೆ ಸದಸ್ಯರಾದ ಲಾಲಪೇಟೆ ಮಂಜುನಾಥ್, ತಿಮ್ಮರಾಯಪ್ಪ, ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ, ಆಯ್ಯೂಬ್, ತುಮುಲ್ ಮಾಜಿ ಅಧ್ಯಕ್ಷ ನಾಗೇಶ್ ಬಾಬು, ಮುಖಂಡರುಗಳಾದ ಎಸ್.ಡಿ.ಕೃಷ್ಣಪ್ಪ, ರಾಮದಾಸು, ಶನಿವಾರಂರೆಡ್ಡಿ. ಎಸ್.ಬಿ.ಟಿ.ರಾಮು, ಸದಾಶಿವರೆಡ್ಡಿ, ಬ್ಯಾಂಕ್ ನೌಕರರಾದ ಸೀತಾರಾಂ, ಪ್ರದೀಪ್, ಲೋಕೇಶ್, ರಾಮಕೃಷ್ಣ, ಸೇರಿದಂತೆ ಸಾವಿರಾರು ಗ್ರಾಮಸ್ಥರು ಹಾಗೂ ಸಹಕಾರಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?