Friday, March 29, 2024
Google search engine
Homeತುಮಕೂರ್ ಲೈವ್ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಗುಣಮಟ್ಟದ ಸಂಸ್ಥೆ; ಪರಮೇಶ್ವರ್

ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಗುಣಮಟ್ಟದ ಸಂಸ್ಥೆ; ಪರಮೇಶ್ವರ್

ತುಮಕೂರು: ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಸಂಸ್ಥೆಯನ್ನು ಮತ್ತಷ್ಟು ಬೆಳೆಸುವ ಕನಸು ಕಂಡಿದ್ದೇನೆ.ಉನ್ನತ ಮಟ್ಟದ ಕಲಿಕೆಯಲ್ಲಿ ಗುಣಮಟ್ಟವು ಮುಖ್ಯವಾಗಿರುವುದರಿಂದ ಆ ನಿಟ್ಟಿನಲ್ಲಿ ಗುಣಮಟ್ಟದ ಸಂಸ್ಥೆಯನ್ನು ರೂಪಿಸಲು ಬಯಸಿರುವುದಾಗಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮಾಜಿಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.

ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ‘ಸೇತುಬಂಧ’ ಹಳೆ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, ತಂದೆ ಡಾ.ಎಚ್.ಎಂ.ಗಂಗಾಧರಯ್ಯನವರು ನನ್ನನ್ನು ಎಸ್ಎಸ್ಐಟಿ ಸಂಸ್ಥೆಯ ಆಡಳಿತಾತ್ಮಕ ಭಾಗಕ್ಕೆ ಪರಿಚಯಿಸಿದಾಗ ವಿದ್ಯಾರ್ಥಿ ಸ್ನೇಹಿತರೊಂದಿಗೆ ಉತ್ತಮ ಸ್ಮರಣೆಯನ್ನು ಹೊಂದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಸಂಸ್ಥೆ ತುಂಬಾ ದೊಡ್ಡ ಮಟ್ಟದಲ್ಲಿಲ್ಲದಿದ್ದರೂ, ಕನಿಷ್ಠ ಉಪಯುಕ್ತವಾದ ಸಂಸ್ಥೆಯಾಗಿದ್ದು, ಈಗ ಅದರ ವ್ಯಾಪ್ತಿ ವಿಶ್ವದಲ್ಲೆಡೆ ಹರಡಿದ್ದು, ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಪ್ರಪಂಚದೆಲ್ಲೆಡೆ ವೃತ್ತಿಪರ ಜೀವನವನ್ನು ಸಾಗಿಸುತ್ತಿದ್ದಾರೆ ಎಂದು ಪರಮೇಶ್ವ ಹೇಳಿದರು.

ವಿದ್ಯಾರ್ಥಿಗಳ ಕರಿಯರ್ಗೆ ಹಿಂತಿರುಗಲು ಮಾತ್ರವಲ್ಲದೆ ಅವರ ಭಾಗವಹಿಸುವ ವಿಷಯದಲ್ಲಿ ಹಳೆವಿದ್ಯಾರ್ಥಿಗಳು ಸಹಕರಿಸುತ್ತೀರಿ, ಇದರಿಂದ ನನ್ನಲ್ಲಿ ಮತ್ತಷ್ಟು ಕನಸನ್ನು ಚಿಗುರಲು ಹಿಂಬುನೀಡಿದೆ. ಸಂಸ್ಥೆಯನ್ನು ಇನ್ನೂ ಬೆಳೆಸುವ ಕನಸುಕಂಡಿದ್ದೇನೆ.ಕಲಿಕೆಯಲ್ಲಿ ಗುಣಮಟ್ಟವು ಮುಖ್ಯವಾಗಿರುವುದರಿಂದ ನಾನು ಗುಣಮಟ್ಟದ ಸಂಸ್ಥೆಯನ್ನು ನಿರ್ಮಿಸಲು ಬಯಸಿರುವುದಾಗಿ ಅವರು ತಮ್ಮಆಶಯ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಡಿಆರ್ರ್ಡಿಓ ವಿಜ್ಞಾನಿ ಹಾಗೂ ಕಾಲೇಜಿನ ಹಳೆ ರಾಜೇಶ್ ಕುಮಾರ್ ಮಾತನಾಡಿ, ಸಿದ್ಧಾರ್ಥ ಇಂಜಿನಿಯರಿಂಗ್ ರಾಷ್ಟ್ರದ ಪ್ರಧಾನ ಸಂಸ್ಥೆಗಳಲ್ಲಿ ಒಂದಾಗಿದೆ ನಮಗೆ ವೃತ್ತಿಪರ ಗುರುತನ್ನು ಸಂಸ್ಥೆ ನೀಡಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ನಮ್ಮ ಭವಿಷ್ಯ ನಿರ್ಮಿಸಿದ ಕ್ಯಾಂಪಸ್ ಗೆ ಬಂದಾಗಲೆಲ್ಲಾ ಭಾವಾನಾತ್ಮಕ ಸಂಬಂಧ, ಹಳೆಯ ಶಿಕ್ಷಕರೊಂದಿಗೆ ಕಳೆದ ಉತ್ತಮ ಸಮಯ ಹಾಗೂ ಸ್ನೇಹಿತರು ಜೊತೆಜೊತೆಗಿನ ಸಂಪರ್ಕ ಮರುಕಳಿಸುತ್ತದೆ ಎಂದು ನೆನಪುಗಳ ಬುತ್ತಿಯನ್ನುಬಿಚ್ಚಿಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?