Tuesday, April 16, 2024
Google search engine
Homeತುಮಕೂರು ಲೈವ್ಸಿದ್ಧಾರ್ಥ ಸಂಪದ ಬಿಡುಗಡೆ

ಸಿದ್ಧಾರ್ಥ ಸಂಪದ ಬಿಡುಗಡೆ

ತುಮಕೂರು: ಮುದ್ರಣ ಮಾಧ್ಯಮದ ಬೆಳವಣಿಗೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಉತ್ತಮವಾದ ಜನಮನ್ನಣೆಯನ್ನು ಪಡೆಯುವಲ್ಲಿ ಪತ್ರಿಕೆಗಳು ವಿಶ್ವಾಸನಾರ್ಹ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಂಜಯ್ ಮಾಲಗತ್ತಿ ಅಭಿಪ್ರಾಯಪಟ್ಟರು.

ತುಮಕೂರಿನ ಎಸ್ಎಸ್ಐಟಿ ಕ್ಯಾಂಪಸ್ನಲ್ಲಿರುವ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಭಾಗದಿಂದ ಪ್ರಕಟಿಸುತ್ತಿರುವ ಸಿದ್ಧಾರ್ಥ ಸಂಪದ 42 ನೇ ಪ್ರಾಯೋಗಿಕ ಪತ್ರಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳ ಬದಲಾವಣೆಯಲ್ಲಿ ಮಾಧ್ಯಮಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲೂ ಮುದ್ರಣ ಮಾಧ್ಯಮದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗಿವೆ, ಆದರೆ ಸತ್ಯಾಸತ್ತತೆಯನ್ನು ಇನ್ನೂ ಉಳಿಸಿಕೊಂಡಿದೆ. ಜನರು ಇಂದಿನ ಪತ್ರಿಕೆಗಳನ್ನು ವಿಶ್ವಾಸನೀಯವಾಗಿ ಓದುತ್ತಿದ್ದಾರೆಂದು ತಿಳಿಸಿದರು.
ಕಂಪ್ಯೂಟರನ್ನು ಎಲ್ಲಾ ಕ್ಷೇತ್ರಗಳಲ್ಲು ಬಳಕೆಮಾಡುತ್ತಿದ್ದಾರೆ. ಇದು ಕೇವಲ ಪತ್ರಿಕಾ ಕಾರ್ಯಗಳನ್ನಲ್ಲದೆ ತಾಂತ್ರಿಕ ತಾಂತ್ರಿಕವನ್ನು ಉಂಟುಮಾಡಿದೆ. ಮಾಧ್ಯಮ ಕ್ಷೇತ್ರದಲ್ಲಿ ಇದರ ಸದುಪಯೋಗವನ್ನು ಧನಾತ್ಮಕವಾಗಿ ಬಳಸಿಕೊಳ್ಳುವುದನ್ನು ಬಿಟ್ಟು ನಕಲಿತನಕ್ಕೆ ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ವಿಷಾದಕರ ಸಂಗತಿ ಎಂದು ಹೇಳಿದರು.

ಸಿದ್ಧಾರ್ಥ ಸಂಪದ ಪತ್ರಿಕೆಯು ಪ್ರಾಯೋಗಿಕ ಪತ್ರಿಕೆಯಾಗಿದ್ದರೂ ಉತ್ತಮವಾದ ಅಭಿವೃದ್ಧಿ ಸುದ್ಧಿಗಳನ್ನು ಹೊರತರಬೇಕು. ಸಮಾಜಕ್ಕೆ ಬೇಕಾಗಿರುವ ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಿಕೆ ಕಾರ್ಯ ನಿರ್ವಹಿಸಬೇಕು. ನಿರಂತರವಾದ, ಚಲನಶೀಲವಾಗಿ, ನಿಖರವಾಗಿರಲಿ ಎಂದು ಮಾಧ್ಯಮ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಡಾ.ವೈ.ಎಂರೆಡ್ಡಿ ಮಾತನಾಡಿ ಪ್ರಾಯೋಗಿಕ ಪತ್ರಿಕೆಯಾದರೂ ಸಂಪಾದಕೀಯ ಹಾಗೂ ಇತರ ಲೇಖನಗಳು ಸಮಾಜದ ಪ್ರತಿಬಿಂಬತೆ ಇವೆ ಎಂದರು.

ಕಾರ್ಯಕ್ರಮದಲ್ಲಿ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವಿದ್ಯಾರ್ಥಿ ಸತೀಶ್ ವಂದಿಸಿದರು, ಉಪನ್ಯಾಸಕ ಎಂ.ಪಿ. ಶ್ವೇತ. ಸುಲೋಚನ, ವಿಜಯಕೃಷ್ಣ, ಮನೋಜ ಕುಮಾರಿ.ಬಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?