Friday, March 29, 2024
Google search engine
Homeಜನಮನಸುಂದರ ನಗರ: IAS ಅಧಿಕಾರಿ ಭೂಬಾಲನ್ ಏನ್ ಮಾಡ್ತಿದ್ದಾರೆ ಗೊತ್ತಾ?

ಸುಂದರ ನಗರ: IAS ಅಧಿಕಾರಿ ಭೂಬಾಲನ್ ಏನ್ ಮಾಡ್ತಿದ್ದಾರೆ ಗೊತ್ತಾ?

ವಿಶೇಷ ವರದಿ : ಇಮ್ರಾನ್ ಪಾಷ


ತುಮಕೂರು: ತುಮಕೂರು ನಗರ ಈಗ ಸ್ಮಾರ್ಟ್ ಸಿಟಿಯತ್ತ ಮುಖಮಾಡುತ್ತಿದೆ. ಸಾವಿರಾರು ಕೋಟಿ ಅನುದಾನದಲ್ಲಿ ನಗರ ಸ್ಮಾರ್ಟ್ ಸಿಟಿಯಾಗಿ ಬದಲಾಗುತ್ತಿದೆ.ಈ ಅನುದಾನವನ್ನು ಸಮರ್ಪಕವಾಗಿ ವಿನಿಯೋಗ ಮಾಡುವಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿ ಎನಿಸಿರುವ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಇವರ ಶ್ರಮ ಹೆಚ್ಚಿನದಾಗಿದೆ. ಇದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇಂತಹ ದಕ್ಷ ಅಧಿಕಾರಿಗೆ ತಂತ್ರ,ಕುತಂತ್ರದಿಂದ ವರ್ಗಾವಣೆ ಶಿಕ್ಷೆ ನೀಡಿದರು. ಆ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿಯ ಯೋಜನೆಗಳು ಹಳ್ಳ ಹಿಡಿಯಲು ಪ್ರಾರಂಭಿಸಿದವು. ಗುರುಗಳು ಇಲ್ಲದ ಮಕ್ಕಳು ಏನಾಗಬಲ್ಲರು ಎನ್ನುವ ವಾಕ್ಯ ಅನುಸಾರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿಯಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿ ಇಲ್ಲದ ಪರಿಣಾಮ ನಡೆಯುತ್ತಿದ್ದ ಎಲ್ಲಾ ಕಾಮಗಾರಿಗಳು ನಿಧಾನಗತಿಯಲ್ಲಿ ಹುಚ್ಚನ ಮದುವೆಯಲ್ಲಿ ಉಂಡೋನೆ ಜಾಣ ಎನ್ನುವಂತೆ ಆಗಿತ್ತು.

ಇದನ್ನು ಗಮನಿಸಿದ ನಗರದ ಸಾರ್ವಜನಿಕರು ದಕ್ಷ, ಪ್ರಾಮಾಣಿಕ ಅಧಿಕಾರಿಯಾದ ಟಿ‌.ಭೂಬಾಲನ್ ಐಎಎಸ್ ಇವರ ಸೇವೆ ತುಮಕೂರು ನಗರಕ್ಕೆ ಅವಶ್ಯಕತೆ ಇದೆ ಎಂದು ಮಾತನಾಡುವಂತಾಗಿತ್ತು.ಇದನ್ನು ಗಮನಿಸಿದ ಸಾಮಾಜಿಕ ಹೋರಾಟಗಾರರ ತಂಡ ಸಾರ್ವಜನಿಕರ ಪರವಾಗಿ ಬೀದಿಗಿಳಿದು ಹೋರಾಟ ಮಾಡಿದರು.ಇದರ ಪರಿಣಾಮವಾಗಿ ತುಮಕೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಒಂದು ಬಾರಿ ವರ್ಗಾವಣೆಯಾಗಿದ್ದ ಅಧಿಕಾರಿ ಮತ್ತೊಮ್ಮೆ ಅಧಿಕಾರ ಸ್ವೀಕಾರ ಮಾಡಿರುವುದು ಟಿ.ಭೂಬಾಲನ್ ಇವರು ಮಾತ್ರ.ಜನರ ಹಕ್ಕೋತ್ತಾಯಕ್ಕೆ ಶಾಸಕ ಜ್ಯೋತಿಗಣೇಶ್ ಸಹ ಮನ್ನಣೆ ನೀಡಿದರು.

ಶಾಸಕ ಜ್ಯೋತಿಗಣೇಶ್

ಭೂಬಾಲನ್ ಮರುನೇಮಕವಾಗಿ ಇಲ್ಲಿಗೆ ಒಂದು ತಿಂಗಳು ಕಳೆಯುತ್ತಿದೆ.ಸ್ಮಾರ್ಟ್ ಸಿಟಿಯಲ್ಲಿ ಆಗಿದ್ದ ಅವ್ಯವಸ್ಥೆಗಳನ್ನು ಸರಿಪಡಿಸುವ ಮೂಲಕ ಒಂದು ಹಂತದಲ್ಲಿ ಯಶಸ್ಸು ಕಂಡಿದ್ದಾರೆ‌.ಇನ್ನೂ ಹಲವು ಇತಿಹಾಸ ನಿರ್ಮಾಣ ಮಾಡುವ ಕಾರ್ಯಯೋಜನೆಗಳು ಇವರಲ್ಲಿ ಅಡಗಿವೆ ಎಂದರೆ ತಪ್ಪಾಗಲಾರದು.ಇಂತಹ ದಕ್ಷ ಅಧಿಕಾರಿ ಮರುನೇಮಕವಾಗಿ ಒಂದು ತಿಂಗಳ ಅವಧಿಯಲ್ಲಿ ಮತ್ತೊಂದು ಮಹತ್ತರ ನಿರ್ಧಾರವನ್ನು ಕೈಗೊಂಡಿದ್ದಾರೆ‌.

ಸ್ಮಾರ್ಟ್ ಸಿಟಿಯ ಜೊತೆಗೆ ಸುಂದರ ನಗರವನ್ನಾಗಿಸುವ ಪ್ರಯತ್ನ..!


ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬಂದಿರುವ ಅನುದಾನದಲ್ಲಿ ತುಮಕೂರು ನಗರವನ್ನು ಸ್ಮಾರ್ಟ್ ಸಿಟಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇದರ ಜೊತೆಯಲ್ಲಿ ತುಮಕೂರು ನಗರವನ್ನು ಸುಂದರ ನಗರವನ್ನಾಗಿಸುವ ಕಾರ್ಯಕ್ಕೆ ದಕ್ಷ, ಪ್ರಾಮಾಣಿಕ ಅಧಿಕಾರಿ ಉತ್ತಮವಾದ ನಿರ್ಧಾರವನ್ನು ಕೈಗೊಂಡಿದ್ದಾರೆ.

ಈಗಾಗಲೇ ತುಮಕೂರು ನಗರದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಿರುವ ಕೀರ್ತಿ ಈ ಅಧಿಕಾರಿಗೆ ಸಲ್ಲುತ್ತದೆ.ಅದೇ ರೀತಿ ನಗರವನ್ನು ಸ್ವಚ್ಛತೆಯಿಂದ ಕಾಪಾಡಲು ಮತ್ತು ಸುಂದರ ನಗರವನ್ನಾಗಿ ಮಾಡವ ಸಲುವಾಗಿ ಅನಧಿಕೃತವಾಗಿ ಜಾಹೀರಾತು ಮತ್ತು ಪೋಸ್ಟರ್ ಗಳನ್ನು ಹಾಕಿರುವವರಿಗೆ ದಂಡ ಹಾಕಿ ಕಾನೂನಿನ ಕ್ರಮ ಕೈಗೊಂಡಿದ್ದಾರೆ.

ಇದರಿಂದ ನಗರದಲ್ಲಿ ಇಲ್ಲಿಯವರೆಗೆ ಬೇಕಾಬಿಟ್ಟಿ ರೀತಿಯಲ್ಲಿ ಅನಧಿಕೃತವಾಗಿ ಎಲ್ಲೆಂದರಲ್ಲಿ ಜಾಹೀರಾತು ಮತ್ತು ಪೋಸ್ಟರ್ ಗಳನ್ನು ಹಾಕುವವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಮೋದಿಯ ಕನಸಿನ ಕೂಸಿಗೆ ಮಣ್ಣೆರಚುವವರ ವಿರುದ್ಧ ಕ್ರಮ..!


ಮಹಾತ್ಮ ಗಾಂಧಿಜೀ ಕಂಡಂತ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಚ್ಛ ಭಾರತ್ ಮಿಷನ್ ಎನ್ನುವ ಯೋಜನೆಯನ್ನು ಜಾರಿಗೆ ತಂದರು‌.ಈ ನಿಟ್ಟಿನಲ್ಲಿ ಈಗಾಗಲೇ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ.

ಮುಂದುವರಿದ ಭಾಗವಾಗಿ ಸುಂದರ ನಗರವನ್ನಾಗಿಸುವ ಕನಸನ್ನು ಈಡೇರಿಸುವ ಸಲುವಾಗಿ ತುಮಕೂರು ಮಹಾನಗರ ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ಎಂ.ಡಿಯೂ ಆಗಿರುವ ಟಿ.ಭೂಬಾಲನ್ ಮಹತ್ತರವಾದ ನಿರ್ಧಾರವನ್ನು ಕೈಗೊಂಡಿದ್ದಾರೆ.

ನಗರದ ವಿಶ್ವವಿದ್ಯಾಲಯದ ಬಳಿ ಹೊಸದಾಗಿ ನಿರ್ಮಾಣ ಮಾಡಿರುವ ಬಸ್ಸು ಶಲ್ಟರ್ ಮೇಲೆ ಮತ್ತು ಸಾರ್ವಜನಿಕರ ಸ್ಥಳಗಳಲ್ಲಿ,ಮರಗಳ ಮೇಲೆ ಅನಧಿಕೃತವಾಗಿ ಜಾಹೀರಾತಿನ ಪೋಸ್ಟರ್ ಹಾಕಲಾಯಿತು. ಇದನ್ನು ಗಮನಿಸಿದ ಪಾಲಿಕೆಯ ಅಧಿಕಾರಿಗಳು ಅನಧಿಕೃತವಾಗಿ ಜಾಹೀರಾತಿನ ಪೋಸ್ಟರ್ ಗಳನ್ನು ಪ್ರಕಟ ಮಾಡಿದ ಶ್ರೀ ಮಹಾಲಕ್ಷ್ಮಿ ಪಿ.ಜಿಗೆ ಕಾನೂನಿನ ಅನುಸಾರ ದಂಡ ವಿಧಿಸಲಾಯಿತು.

ತುಮಕೂರು ನಗರವನ್ನು ಸ್ಮಾರ್ಟ್ ಸಿಟಿ ಜೊತೆಗೆ ಸುಂದರ ನಗರವನ್ನಾಗಿ ಮಾಡಲು ಸಂಕಲ್ಪ ಮಾಡಿರುವ ದಕ್ಷ ಅಧಿಕಾರಿ ವಿರುದ್ಧ ಬಿಜೆಪಿಯ ಕೆಲವರು ವಿರೋಧ ವ್ಯಕ್ತಪಡಿಸಿರುವುದು ನಾಚಿಕೆಗೇಡಿನ ಸಂಗತಿ. ಸಾರ್ವಜನಿಕವಾಗಿ ಭಾಷಣ ಮಾಡುವಾಗ ದೇಶ ಮತ್ತು ನಿಮ್ಮ ನಗರಗಳನ್ನು ಸ್ವಚ್ಛಾವಾಗಿಡಿ, ಸುಂದರವಾಗಿಡಿ,ಪರಿಸರ ರಕ್ಷಣೆ ಮಾಡಿ ಎಂದು ದೊಡ್ಡ ದೊಡ್ಡದಾಗಿ ಭಾಷಣ ಮಾಡುತ್ತಾರೆ.ಆದರೆ ಮೋದಿಯವರ ಮಾತಿನ ಪ್ರಕಾರ ಕಾರ್ಯ ನಿರ್ವಹಿಸುವ ಅಧಿಕಾರಿಗಳನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ನಿಂದನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದಕ್ಕೆ ಈಗ ಆಡಳಿತ ಪಕ್ಷದವರೆ ಉತ್ತರ ನೀಡಬೇಕಿದೆ.

ಇವರ ಅನುಕೂಲದಂತೆ ಕೆಲಸ ಮಾಡಿದರೆ ಅಧಿಕಾರಿಗಳಂತ ಅಧಿಕಾರಿಗಳಿಲ್ಲ ಎನ್ನುವ ಮನಸ್ಥಿತಿಯಲ್ಲಿ ಇದ್ದಾರೆ ಎನ್ನುವುದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಇಂತಹ ನಡೆಗಳಿಗೆ ಶಾಸಕರು ಅವಕಾಶ ಮಾಡಿಕೊಡಬಾರದು ಎಂಬ ಮಾತುಗಳನ್ನು ನಗರದ ಜನರು ಆಡುತ್ತಿದ್ದಾರೆ

ಏನೆ ಇರಲಿ, ಒಟ್ಟಾರೆ ಮೋದಿಯವರು ತಂದ ಸ್ವಚ್ಛ ಭಾರತ್ ಮಿಷನ್ ಯೋಜನೆ ಯಶಸ್ವಿಯಾಗಲು ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಇಂತಹ ಕಿಡಿಗೇಡಿಗಳ ಕುತಂತ್ರಗಳಿಗೆ ಬಗ್ಗದೆ ತಮ್ಮ ಕಾನೂನಿನ ಅಡಿಯಲ್ಲಿ ಕೆಲಸ ನಿರ್ವಹಿಸಲಿ. ಆಗ ಇಡೀ ನಗರದ ಜನರು ದಕ್ಷತೆಯ ಆಡಳಿತವನ್ನು ಶ್ಲಾಘಿಸುವ ಸಮಯ ಬರಲಿದೆ ಎನ್ನುತ್ತಾರೆ ಭಾರತೀಯ ಕೃಷಿಕ್ ಸಮಾಜದ ಜಗದೀಶ್ ಕೋಡಿಹಳ್ಳಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?