Friday, April 19, 2024
Google search engine
Homeತುಮಕೂರು ಲೈವ್ಹೆಬ್ಬೂರಿನಲ್ಲಿವೆ 3 ಚಿರತೆಗಳು, ಇದರಲ್ಲಿ ಯಾವುದು ನರಭಕ್ಷಕ ಚಿರತೆ

ಹೆಬ್ಬೂರಿನಲ್ಲಿವೆ 3 ಚಿರತೆಗಳು, ಇದರಲ್ಲಿ ಯಾವುದು ನರಭಕ್ಷಕ ಚಿರತೆ

Publicstory.in


Tumkuru:

ತುಮಕೂರು ತಾಲ್ಲೂಕಿನ ಹೆಬ್ಬೂರು ಸುತ್ತಮುತ್ತಲ ಇಬ್ಬರು ಮಕ್ಕಳನ್ನು ಕೊಂದಿರುವ ನರ ಭಕ್ಷಕ ಚಿರತೆ ಹಿಡಿಯಲು ಅರಣ್ಯ ಇಲಾಖೆ ಇಟ್ಟಿರುವ ಕ್ಯಾಮರಾ ಗೆ ಬಗೆಬಗೆಯ ಪ್ರಾಣಿಗಳು ಗೋಚರಿಸಿವೆ.

ಒಟ್ಟು ಮೂರು ಚಿರತೆಗಳು ಕಂಡು ಬಂದಿದ್ದು ಇದರಲ್ಲಿ ನರಭಕ್ಷಕ ಚಿರತೆ ಯಾವುದು ಎಂಬುದೀಗ ಅರಣ್ಯ ಇಲಾಖೆಗೆ ತಲೆನೋವಾಗಿದೆ.

ನರಭಕ್ಷಕ ಚಿರತೆ ಗುಂಡಿಕ್ಕಿ ಕೊಲ್ಲಲು ಆದೇಶ ಮಾಡುವುದಾಗಿ ಅರಣ್ಯ ಸಚಿವರು ಈಗಾಗಲೇ ಹೇಳಿದ್ದಾರೆ.

ತಾಲೂಕು ಹೆಬ್ಬೂರು ಹೋಬಳಿ ವ್ಯಾಪ್ತಿಯ ಅರಣ್ಯದಲ್ಲಿ ಎರಡು ಮೂರು ಚಿರತೆಗಳು ಓಡಾಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೆಬ್ಬೂರು ಹೋಬಳಿಯ ವ್ಯಾಪ್ತಿಯಲ್ಲಿ ಚಿರತೆಗಳ ರಾತ್ರಿಯ ವೇಳೆ ನಿರಂತರವಾಗಿ ಆಹಾರವನ್ನು ಹುಡುಕುತ್ತ ಓಡಾಡುತ್ತಿವೆ ಎಂಬುದನ್ನು ಈ ದೃಶ್ಯಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕಂಡುಕೊಂಡಿದ್ದಾರೆ.

ಚಿರತೆಗಳ ಬಗೆಬಗೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕೆಲವೊಮ್ಮೆ ಇನ್ನೊಂದು ಪ್ರಾಣಿಯನ್ನು ಬೇಟೆಯಾಡುವಾಗ ದಾಳಿ ಮಾಡುತ್ತಿರುವಂತೆ ಕಂಡುಬಂದಿದ್ದರೆ, ಹಲವು ದೃಶ್ಯಗಳಲ್ಲಿ ಚಿರತೆಗಳು ಕ್ಯಾಮೆರಾಗಳತ್ತ ನೋಡಿರುವುದು ಕಂಡುಬಂದಿದೆ.

ಚಿರತೆಗಳ ಚಲನವಲನಗಳ ಮೇಲೆ ನಿಗಾ ಇಡಲು ಅಳವಡಿಸಿದ್ದ ಸಿಸಿ ಕ್ಯಾಮೆರಾಗಳಲ್ಲಿ ಹಲವು ವೈವಿಧ್ಯಮಯ ಪ್ರಾಣಿಗಳ ದೃಶ್ಯಗಳೂ ಕೂಡ ಸೆರೆಯಾಗಿರುವುದು ಕುತೂಹಲವನ್ನು ಮೂಡಿಸಿದೆ.

ಕೇವಲ ನರಭಕ್ಷಕ ಚಿರತೆಗಳ ಹುಡುಕಾಟದ ವೇಳೆ ಮುಳ್ಳು ಹಂದಿ, ನವಿಲು, ಕಾಡುಬೆಕ್ಕುಗಳು ಮತ್ತು ಮೊಲಗಳು ಓಡಾಟ ನಡೆಸಿರುವುದು ಕಂಡುಬಂದಿದೆ. ಕ್ಯಾಮೆರಾ ಜೊತೆ ಲೈಟ್ ಗಳನ್ನು ಅಳವಡಿಸಿರುವುದರಿಂದ ನಿಶಾಚರಗಳು ಆ ಬೆಳಕಿನತ್ತ ವಿಶೇಷವಾಗಿ ನೋಡಿರುವುದು ದೃಶ್ಯಗಳಿಂದ ತಿಳಿದುಬರುತ್ತದೆ.

ಕ್ಯಾಮೆರಾದಲ್ಲಿ ಚಿರತೆಗಳ ದೃಶ್ಯಗಳು ಸೆರೆಯಾಗಿದ್ದರೂ ಯಾವುದು ನರಭಕ್ಷಕ ಎಂಬುದನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುತಿಸುವಲ್ಲಿ ವಿಫಲವಾಗಿದೆ. ಆದರೆ ಚಿರತೆಗಳ ಇರುವನ್ನು ದೃಢಪಡಿಸಿರುವುದು ಶ್ಲಾಘನೀಯವಾಗಿದೆ.

ಚಿರತೆ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳನ್ನು ಕೊಲ್ಲಲು ಸಾಧ್ಯವಿಲ್ಲ. ಜನರೇ ಸಂಜೆಯ ವೇಳೆ ಮನೆ ಒಳಗೆ ಸೇರಿಕೊಳ್ಳುವುದು ಉತ್ತಮ ಎಂದು ಸ್ಪಷ್ಟಪಡಿಸಿದ್ದಾರೆ.

ಚಿರತೆಗಳ ದಾಳಿ ನಡೆಸುವುದು ಸಾಮಾನ್ಯ. ಹೀಗಾಗಿ ಜನರೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಸಲಹೆಯನ್ನು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?