Wednesday, July 24, 2024
Google search engine
HomeUncategorizedಜನರ ಕಣ್ಮಣಿಯಾದ ಅರಣ್ಯಾಧಿಕಾರಿ

ಜನರ ಕಣ್ಮಣಿಯಾದ ಅರಣ್ಯಾಧಿಕಾರಿ

ಲೇಖನ: ರವಿಗೌಡ, ವಕೀಲರು, ತುಮಕೂರು


ತುಮಕೂರು: ತಾಲೂಕಿನ ಅರಣ್ಯ ಇಲಾಖೆಯ RFO ಪವಿತ್ರ ಅವರ ಕಾರ್ಯವೈಖರಿಗೆ ಜನತೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಅರಣ್ಯ ಇಲಾಖೆಯೆಂದರೆ ಮೂಗುಮುರಿಯುವ ಕಾಲಘಟ್ಟದಲ್ಲಿ ಜನಸ್ನೇಹಿ ಅಧಿಕಾರಿಯಾಗಿ ಅರಣ್ಯ ಇಲಾಖೆಗೊಂದು ಮೆರುಗುತಂದಿದ್ದಾರೆ.

ಇತ್ತೀಚಿಗಷ್ಟೇ ತುಮಕೂರು ತಾಲೂಕಿನ ಮಂಚಕಲ್ ಕುಪ್ಪೆಯಲ್ಲಿ ಚಿರತೆ ಕಾಣಿಸಿಕೊಂಡು ಮೇಕೆಗಳನ್ನು ತಿಂದು ಹಾಕಿತ್ತು. ಆ ಭಾಗದ ಜನತೆಯಲ್ಲಿ ಆತಂಕ ಮನೆ ಮಾಡಿತ್ತು. RFO ಪವಿತ್ರ ರವರು ತುರ್ತು ಕ್ರಮ ಕೈಗೊಂಡು ಕಾರ್ಯಪ್ರವೃತ್ತರಾಗಿ ಆದಷ್ಟು ಬೇಗ ಚಿರತೆಯನ್ನು ಬೋನಿಗೆ ಬೀಳಿಸಲಾಯಿತು.

ಪ್ರಕರಣ ಮಾಸುವ ಮುನ್ನವೇ ಎರಡು ಮೂರು ದಿನಗಳ ಹಿಂದೆ ಬೆಳ್ಳಾವಿಯಲ್ಲಿ ಬಾಲಕಿಯ ಮೇಲೆ ಚಿರತೆ ದಾಳಿ ಮಾಡಿತ್ತು ಈ ಸುದ್ದಿ ಎಲ್ಲೆಡೆ ಗಾಳಿಯಂತೆ ಹಬ್ಬಿ ಅರಣ್ಯ ಇಲಾಖೆಯವರನ್ನು ಜನತೆ ದೂಷಿಸುವಂತಯಿತು. ಆದರೂ ಛಲ ಬಿಡದೆ ಕ್ಷಿಪ್ರವಾಗಿ ಕಾರ್ಯಚರಣೆ ಕೈಗೊಂಡು ಪವಿತ್ರ ರವರ ನೇತೃತ್ವದಲ್ಲಿ ಚಿರತೆಯನ್ನು ಬೋನಿಗೆ ಬೀಳಸಲಾಯಿತು.

ಈಗ ಆ ಭಾಗದ ಜನತೆಯಲ್ಲಿ ಮಂದಹಾಸ ಮೂಡಿದೆ. ಅರಣ್ಯ ಇಲಾಖೆಯ ಬಗ್ಗೆ ನಂಬಿಕೆ ಮೂಡಿದೆ.. ಇಲ್ಲಿ ನಾವು ಹೇಳುತ್ತಿರುವುದು ಇಷ್ಟೇ ಒಬ್ಬ ಮಹಿಳಾ ಅಧಿಕಾರಿ ಹಗಲು ರಾತ್ರಿ ಎನ್ನದೆ ತನ್ನ ಜೀವದ ಹಂಗು ತೊರೆದು, ಇಲಾಖೆ ವಹಿಸಿರುವ ಜವಾಬ್ದಾರಿಯನ್ನ ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದ್ದಾರೆ.

ಮಕ್ಕಳಲ್ಲಿ ಅರಣ್ಯದ ಬಗ್ಗೆ ಹಾಗೂ ಪರಿಸರದ ಬಗ್ಗೆ ಅಸಕ್ತಿಯಾಗೋ ಜ್ಞಾನಾರ್ಜನೆ ಮೂಡಿಸಲು ಅವರುಗಳಿಗೆ ಅರಣ್ಯದ ಬಗ್ಗೆ ಹಾಗೂ ಪರಿಸರದ ಬಗ್ಗೆ ವರ್ಣ ಚಿತ್ರಗಳ ಸ್ಪರ್ಧೆಯನ್ನು ಆಯೋಜಿಸುತ್ತಿದ್ದಾರೆ.

ತಾಲೂಕಿನ ಹಳ್ಳಿಗಳಿಗೆ ತೆರಳಿ ಜನರಲ್ಲಿ ಅರಣ್ಯದ ಬಗ್ಗೆ ಕಾಡುಪ್ರಾಣಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಅರಣ್ಯ ಭಾಗದ ಜನರುಗಳಿಗೆ ಕಾಡು ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವುದು ಹಸಿರು ಚಿರತೆ, ಆನೆ, ಕರಡಿ, ಹಾವುಗಳು ದಾಳಿ ಮಾಡಿದಾಗ ಅವರಿಗೆ ಅವ ರೀತಿಯಾಗಿ ರಕ್ಷಣೆ ಪಡೆಯಬೇಕೆಂಬ ಮಾಹಿತಿಯನ್ನು ನೀಡುತ್ತಿದ್ದಾರೆ.

ತುಮಕೂರು ತಾಲೂಕಿನ ವಿಶೇಷವಾಗಿ ತುಮಕೂರು ನಗರದ ಹಸಿರೀರಣಕ್ಕಾಗಿ ವಿಶೇಷವಾದ ಒತ್ತನ್ನು ನೀಡಿದ್ದಾರೆ.

ರಸ್ತೆಯ ಬದಿಗಳಲ್ಲಿ ಸಸಿಗಳನ್ನು ನೆಡುವ ಮೂಲಕ, ಎನ್ಎಸ್ಎಸ್ ಸಹಯೋಗದೊಂದಿಗೆ NSS ವಿದ್ಯಾರ್ಥಿಗಳಿಗೂ ಸಹ ಅರಣ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇವರ ಹಸಿರು ಕನ್ನಡದ ಭಾಗವಾಗಿ ಮರಳೂರಿನ ಸಿದ್ದಾರ್ಥ ಕಾಲೇಜು ಒಳಗಡೆ ಕ್ರೀಡಾಂಗಣದ ಸುತ್ತಲೂ ನೆಟ್ಟಿರುವ ಗಿಡಗಳು ಇಂದು ಮರಗಳಾಗಿ ರಾರಾಜಿಸುತ್ತಿವೆ.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ BE ಗ್ರಾಜುಯೇಟ್ ಆಗಿ ನಂತರ Mtech ಮುಗಿಸಿಕೊಂಡು.

ಅದೆಷ್ಟೋ ಖಾಸಗಿ ಕಂಪನಿ ಗಳಿಂದ ಇವರಿಗೆ ಕೆಲಸದ ಆಫರ್ ಗಳು ಬಂದರೂ ಸಹ ಗ್ರಾಮೀಣ ಭಾಗದ ರೈತ ಕುಟುಂಬದಿಂದ ಬಂದಿರುವ ಪವಿತ್ರರವರು ತಾವು ಬಂದಿರುವ ಗ್ರಾಮೀಣ ಭಾಗದ ರೈತ ಕುಟುಂಬಗಳಿಗೆ ತನ್ನಿಂದ ಏನಾದರೂ ಒಂದು ವಿಶೇಷವಾದ ಕಾರ್ಯವನ್ನು ಮಾಡಬೇಕೆಂಬ ಪಣತೊಟ್ಟು ಕಷ್ಟಪಟ್ಟು ಓದಿ ಅರಣ್ಯ ಇಲಾಖೆಗೆ ಸೇರಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎರಡು ಮಕ್ಕಳ ತಾಯಿಯಾಗಿ ಇವರ ಪತಿ ರವಿ ಅವರು ತುಮಕೂರು ಪಿಡಬ್ಲ್ಯೂಡಿ ಎಲ್ಲಿ AEE ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಇವರ ಮಾವನವರು ನಿಟ್ಟೂರು ಕೃಷ್ಣಮೂರ್ತಿ ರವರು ಇವರು ಸಹ ನಿವತ್ತ ಇಂಜಿನಿಯರ್ ಆಗಿ ಇವರ ಕುಟುಂಬ ಇವರ ಜೊತೆಗೆ ನಿಂತು ಮಾರ್ಗದರ್ಶನ ನೀಡುತ್ತಿದ್ದಾರೆ. ನಮ್ಮ ತುಮಕೂರು ತಾಲೂಕಿನವರೇ ಆದ ಪವಿತ್ರರವರು ಅರಣ್ಯ ಇಲಾಖೆಯ ಇನ್ನು ಉನ್ನತ ಹುದ್ದೆಗೆ ಏರಲಿ ಎಂದು ತುಮಕೂರು ನಾಗರೀಕರ ಅಭಿಲಾಷೆ ಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?