Thursday, March 28, 2024
Google search engine
Homeಪುಸ್ತಕ ಬಿಡುಗಡೆಅನಕ್ಷರಸ್ಥ ತಾಯಿ ನೀಡಿದ ಅನರ್ಘ್ಯ ರತ್ನ

ಅನಕ್ಷರಸ್ಥ ತಾಯಿ ನೀಡಿದ ಅನರ್ಘ್ಯ ರತ್ನ

ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್,ತುಮಕೂರು, ಡಾ.ಸಿ.ಸೋಮಶೇಖರ ಅಭಿಮಾನಿ ಬಳಗ,ಬೆಂಗಳೂರು ಸಪ್ನ ಬುಕ್ ಹೌಸ್,ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಡಾ.ಸಿ.ಸೋಮಶೇಖರ ಆತ್ಮ ಕಥನ “ನೀ ನೊಲಿದ ಬದುಕು” ಕೃತಿ ಲೋಕರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ದಿವ್ಯ ಸಾನಿದ್ಯ ವಹಿಸಿದ್ದ ತುಮಕೂರಿನ ರಾಮಕೃಷ್ಣಾಶ್ರಮದ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಆಶಿವ೯ಚನ ನೀಡುತ್ತಾ ಅನಕ್ಷರಸ್ಥ ತಾಯಿ ನೀಡಿದ ಅನಘ್ಯ೯ ರತ್ನ ಸೋಮಶೇಖರ ಎಂದು ನುಡಿದರು.ಸೋಮಶೇಖರ ಹೊಸಕೋಟೆಯಿಂದ ಕೆಂಪುಕೋಟೆ ವರೆಗೆ ಹೋಗಲಿ ಎಂದು ಹಾರೈಸಿದರು.

ಕೃತಿ ಬಿಡುಗಡೆ ಮಾಡಿದ ಖ್ಯಾತ ಸಾಹಿತಿಗಳಾದ ಶ್ರೀ ದೊಡ್ಡ ರಂಗೆಗೌಡರು ಮಾತನಾಡುತ್ತಾ ಸೋಮಶೇಖರ ಅವರಂಥ ಹೃದಯವಂತರು ಸಾವ೯ಜನಿಕ ಜೀವನದಲ್ಲಿ ಇರಬೇಕು ಕಡತದಲ್ಲಿ ವ್ಯಕ್ತಿಯನ್ನು ಕಾಣುವ ವಿಶಿಷ್ಟ ಅಧಿಕಾರಿ ಅವರು ಎಂದರು. ಇಂತಹ ಅಧಿಕಾರಿಗಳು ಲೋಕ ಸಭೆಯ ಸದಸ್ಯರಾದರೇ ಉತ್ತಮ ಪಾಲಿ೯ಮೆಂಟೆರಿಯನ್ ಆಗುತ್ತಾರೆ ಎಂದರು.

ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀ ವೈ ಎಸ್ ಪಾಟೀಲ್ ಅವರು ಮಾತನಾಡುತ್ತಾ ಸರಸ್ವತಿ ಪುತ್ರ ಡಾ.ಸೋಮಶೇಖರ ಎನಗಿಂತ ಕಿರಿಯರಿಲ್ಲ ಎಂಬ ಬಸವಣ್ಣನವರ ವಚನದಂತೆ ಬದುಕುತ್ತಿರುವವರು ಎಂದು ನುಡಿದರು

ತುಮಕೂರು ನಗರದ ಶಾಸಕ ಶ್ರೀ ಜ್ಯೋತಿ ಗಣೇಶ ಅವರು ಮಾತನಾಡುತ್ತಾ ಡಾ.ಸೋಮಶೇಖರ ಅವರ ಬದುಕು ಒಂದು ದಂತ ಕಥೆ ಅವರ ನಿವಾಸಕ್ಕೆ ಯಾರೇ ಹೋದರು ಅವರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು ಎಂದು ಹೇಳಿದರು

ಸಮಾರಂಭವನ್ನು ಉದ್ದೇಶಿಸಿ ಕೃತಿಕಾರರಾದ ಡಾ.ಸಿ.ಸೋಮಶೇಖರ, ಐ ಎ ಎಸ್(ನಿ) ತಮ್ಮ ಆತ್ಮಕಥನದ ಬದುಕಿನ ನೋವು ನಲಿವಿನ ಮಜಲುಗಳನ್ನು ಮೆಲಕು ಹಾಕಿದರು.ತುಮಕೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವದಿ ಸಾಂಸ್ಕೃತಿಕ ಮಯವಾಗಿತ್ತು ಜನರೇ ನಮಗೆ ಸ್ಪೂರ್ತಿ ಎಂದು ನುಡಿದರು. ಈ ಆತ್ಮ ಕಥನದಿಂದ ಸಾರಸ್ವತ ಲೋಕಕ್ಕೆ ಕಿಂಚಿತ್ ಉಪಯೋಗವಾದರೆ ಅದು ನನ್ನ ಭಾಗ್ಯ ನಾನು ಕಾಯ೯ನಿವ೯ಹಿಸಿದ ನಾಡಿಗೆ ಸಂದ ಋಣ ಸಂದಾಯ ಎಂದು ಹೇಳಿದರು.

ಕೃತಿ ಕುರಿತು ವಿದ್ಯಾ ವಾಚಸ್ಪತಿ ಡಾ.ಕವಿತಾಕೃಷ್ಣ ಮಾತನಾಡಿದರು,ಕಾರ್ಯಕ್ರಮದಲ್ಲಿ ಪ್ರಜಾ ಪ್ರಗತಿ ಪತ್ರಿಕೆ ಸಂಪಾದಕ ಶ್ರೀ ಎಸ್ ನಾಗಣ್ಣ,ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಚಂದ್ರಶೇಖರ್,,ಶ್ರೀಮತಿ ಸವ೯ಮಂಗಳ ಸೋಮಶೇಖರ್,ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಕೆ ಎಸ್ ಸಿದ್ದಲಿಂಗಪ್ಪ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?