Thursday, March 28, 2024
Google search engine
HomeUncategorizedನಮ್ಗೂ ಲಸಿಕೆ ಕೊಡಿ; ಕೊಳೆಗೇರಿ ಜನರ ಹಕ್ಕೋತ್ತಾಯ ಪ್ರದೇಶಕ್ಕೆ ಲಸಿಕೆಗೆ ಆದ್ಯತೆ: ಸಮಿತಿ ಮನವಿ

ನಮ್ಗೂ ಲಸಿಕೆ ಕೊಡಿ; ಕೊಳೆಗೇರಿ ಜನರ ಹಕ್ಕೋತ್ತಾಯ ಪ್ರದೇಶಕ್ಕೆ ಲಸಿಕೆಗೆ ಆದ್ಯತೆ: ಸಮಿತಿ ಮನವಿ

Public story


ತುಮಕೂರು: ಕೊಳಚೆ ಪ್ರದೇಶಗಳಿಗೆ ಆದ್ಯತೆ ಮೇರೆಗೆ ಲಸಿಕೆಗಳ ಹಂಚಿಕೆ‌ ಮಾಡುವಂ ಸ್ಲಂ ಜನಾಂದೋಲನ ಸಮಿತಿಯಿಂದ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ತುಮಕೂರು ನಗರ ವ್ಯಾಪ್ತಿಯಲ್ಲಿ ಸುಮಾರು 20 ದಿನಗಳಿಂದ ಕೋವಿಡ್-19 ಲಸಿಕಾ ಅಭಿಯಾನ ನಡೆಯುತ್ತಿದ್ದು ನಗರದಲ್ಲಿ ಶ್ರೀಮಂತರು ಮತ್ತು ಮದ್ಯಮ ವರ್ಗದವರೇ ಹೆಚ್ಚು ಲಸಿಕೆಯ ಪಲಾನುಭವಿಗಳಾಗುತ್ತಿದ್ದಾರೆ, ಆದರೆ ಸ್ಲಂಗಳಲ್ಲಿ ಜಾಗೃತಿ ಮತ್ತು ಕೆಲವೊಂದು ಭಯ ಮತ್ತು ಮೂಡ ನಂಬಿಕೆಗಳಿಂದ ಲಸಿಕೆ ಪಡೆಯುವಲ್ಲಿ ಹಿಂದಾಗಿದ್ದರು. ಆದರೆ ನಮ್ಮ ಸತತ ಪ್ರಯತ್ನ ಮತ್ತು ವ್ಯಾಕ್ಸಿನ್ ಕುರಿತ ಅನುಕೂಲಗಳನ್ನು ಕೊಳಚೆ ಪ್ರದೇಶಗಳಲ್ಲಿರುವ ವಂಚಿತ ಸಮುದಾಯಗಳಿಗೆ ಅರಿವು ಮೂಡಿಸಿದ ಮೇಲೆ ಲಸಿಕೆಗಳನ್ನು ಪಡೆಯಲು ಮುಂದಾಗಿದ್ದು ಇದುವರೆಗೂ ಶೇ 5 ರಿಂದ 10% ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೆಲವೊಂದು ಕೊಳಚೆ ಪ್ರದೇಶಗಳಲ್ಲಿ 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದಿದ್ದಾರೆ. ಆದರೆ 18 ವರ್ಷದಿಂದ 44 ವರ್ಷದವರಗಿನ ವಯೋಮಾನದವರಿಗೆ ಕೋವ್ಯಾಕ್ಸಿನ್ ಲಸಿಕೆ ದೊರೆತಿರುವುದಿಲ್ಲ. ನಗರದ ಕೊಳೆಗೇರಿಗಳಿಗೆ ಲಸಿಕೆ ಹಂಚಿಕೆ ಮಾಟಿ ಸ್ಲಂಗಳಲ್ಲಿ ಲಸಿಕಾ ಅಭಿಯಾನಗಳು ಮತ್ತಷ್ಟು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೆಲವೊಂದು ಅಭಿಯಾನ ಕೈಗೊಂಡು ಲಸಿಕೆ ಕೊರತೆಯಿಂದ ಅರ್ಧಕ್ಕೆ ನಿಲ್ಲಿಸಲಾಗಿದ್ದು ನಿಧಾನ ಗತಿಯಲ್ಲಿ ಸ್ಲಂ ನಿವಾಸಿಗಳು ಲಸಿಕೆ ಪಡೆಯುತ್ತಿದ್ದಾರೆ. ಇದರ ವೇಗವನ್ನು ಹೆಚ್ಚಿಸಬೇಕು ಎಂದು ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಇಂದು ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ಮೋಹನ್, ಮಹಾನಗರ ಪಾಲಿಕೆ ವೈದ್ಯಾಧಿಕಾರಿಯಾದ ಡಾ.ರಕ್ಷಿತ್ ರವರಿಗೆ ಮನವಿ ಸಲ್ಲಿಸಿ 7 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿರುವ 32 ಕೊಳಚೆ ಪ್ರದೇಶಗಳಿಗೆ 2600 ಡೋಸ್ಗಳನ್ನು ಹಂಚಿಕೆ ಮಾಡಲು ಒತ್ತಾಯಿಸಿದರು.

ಶೆಟ್ಟಿಹಳ್ಳಿಯಲ್ಲಿರುವ ತೃತೀಯ ಲಿಂಗಿಗಳಿಗೆ ಪ್ರತ್ಯೇಕವಾಗಿ ಲಸಿಕೆಗಳನ್ನು ಹಾಕಲು ಆಗ್ರಹಿಸಲಾಯಿತು.

ಇದಕ್ಕೆ ಸ್ಪಂಧಿಸಿದ ವೈದ್ಯಾಧಿಕಾರಿಗಳು ಈಗಾಗಲೇ ಮೊದಲನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೊಳಚೆ ಪ್ರದೇಶಗಳಲ್ಲಿ ಲಸಿಕೆ ನೀಡಲಾಗಿದ್ದು ಲ, ಕೊಳೆಗೇರಿಯ ವ್ಯಾಪ್ತಿಯ ಆಸ್ಪತ್ರೆಗಳಿಗೆ ಲಸಿಕೆ ಹಂಚಿಕೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಗೌರವಧ್ಯಕ್ಷರಾದ ದೀಪಿಕಾ, ಕಾರ್ಯದರ್ಶಿ ಅರುಣ್, ಸಹಕಾರ್ಯದರ್ಶಿ ತಿರುಮಲಯ್ಯ, ಮೋಹನ್ ಟಿ.ಆರ್ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?