Publicstory
ಈ ಬಾರಿಯು ಯುಪಿ ಎಸ್ ಸಿ ( ಕೇಂದ್ರ ಲೋಕ ಸೇವಾ ಆಯೋಗದ) ಪರೀಕ್ಷೆಯಲ್ಲಿ ತುಮಕೂರು ಜಿಲ್ಲೆಯ ಮೂವರು ತೇರ್ಗಡೆಯಾಗಿದ್ದು, ಕೀರ್ತಿ ತಂದಿದ್ದಾರೆ.
ಈ ಮೂವರು ಶಿರಾ ತಾಲ್ಲೂಕಿನವರಾಗಿರುವುದು ವಿಶೇಷ.
ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿ ತಡಕಲ್ಲೂರು ಗ್ರಾಮದ ಮಹಾಲಿಂಗಪ್ಪ ವಿಶಾಲಾಕ್ಷ್ಮ್ಮ ದಂಪತಿ ಮಗಳಾದ ಅರಣ್ ಅವರು 308ನೇ ರ್ಯಾಂಕ್ ಪಡೆದಿದ್ದಾರೆ.
ಅಭಿನಂದನೆ
ಶಿರಾದ ಮೂವರು ವಿದ್ಯಾರ್ಥಿಗಳ ಈ ಸಾಧನೆ ಜಿಲ್ಲೆಗೆ ಮಾದರಿಯಾಗಿದೆ. ಇದರಿಂದ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಯುಪಿಎಸ್ ಸಿ ಪರೀಕ್ಷೆ ತೆಗೆದುಕೊಳ್ಳಲು ಪ್ರೇರಣೆ ಸಿಗಲಿದೆ. ಜಿಲ್ಲೆಯ ಜನರ ಪರವಾಗಿ ಮೂವರನ್ನು ಅಭಿನಂದಿಸುವೆ ಎಂದು ಅಮ್ ಆದ್ಮಿ ಪಕ್ಷದ ಮುಖಂಡ, ವಕೀಲರಾದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಬೆಳಗುಳಿ ಬಿ.ಜೆ.ಮಹಾವೀರ್ ತಿಳಿಸಿದ್ದಾರೆ
ಹತ್ತನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿ ಈ ಸಾಧನೆ ಮಾಡಿದ್ದಾರೆ.
ಕಲ್ಪಶ್ರೀ ಅವರು 291 ನೇ ರಾಂಕ್ ಪಡೆದಿದ್ದಾರೆ.
ಕಲ್ಪಶ್ರೀ ತಮ್ಮ ಐದನೇ ಯತ್ನದಲ್ಲಿ ಈ ಸಾಧನೆ ಮರೆದಿದ್ದಾರೆ. ಇವರು ಗೌಡಗೆರೆ ಹೋಬಳಿಯಲ್ಲಿ ಕಂದಾಯ ನಿರೀಕ್ಷರಾಗಿದ್ದ ಕಾಂತಪ್ಪ ಅವರು ಮಗಳು. ಯರಗುಂಟೆ ಇವರು ಊರು.
ಯಂಜಲಗೆರೆ ಗ್ರಾಮದ ದಿವಂಗತ ಧರ್ಮೇಶ್ ಅವರ ಪುತ್ರ ಸಹ ಶ್ರೀಕಾಂತ್ ಸಹ ತೇರ್ಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಐಎಎಸ್, ಐಪಿಎಸ್ ಆಕಾಂಕ್ಷಿಗಳಿಗೆ ಇವರ ಸಾಧನೆ ಪ್ರೇರಣೆಯಾಗಿದೆ.
ಈ ಸಾಲಿನ ಪರೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಅಂಗನವಾಡಿ ಕಾರ್ಯಕರ್ತೆಯೊಬ್ಬರ ಮಗ ದೀಪಕ್ ರಾಮಚಂದ್ರ ಶೇಟ್ ಉತ್ತೀರ್ಣರಾಗಿರುವುದು ಬಡವರ ಮಕ್ಕಳ ಸಾಧನೆಗೆ ಇಂಬು ನೀಡಿದಂತಿದೆ.