Friday, March 29, 2024
Google search engine
Homeತುಮಕೂರ್ ಲೈವ್4ನೇ ಶನಿವಾರದ ರಜೆ ರದ್ದತಿ ವಿರುದ್ಧ ವಕೀಲರ ಪ್ರತಿಭಟನೆ

4ನೇ ಶನಿವಾರದ ರಜೆ ರದ್ದತಿ ವಿರುದ್ಧ ವಕೀಲರ ಪ್ರತಿಭಟನೆ

ಪಾವಗಡ:
ರಾಜ್ಯ ಸರ್ಕಾರ ನ್ಯಾಯಾಲಯಗಳಿಗೆ ತಿಂಗಳ 4ನೇ ಶನಿವಾರದ ರಕೆಯನ್ನು ರದ್ದು ಪಡಿಸಿರುವುದನ್ನು ಖಂಡಿಸಿ ಇಲ್ಲಿನ ವಕೀಲರು ಪ್ರತಿಭಟನೆ ನಡೆಸಿದರು.
ನ್ಯಾಯಾಲಯದ ಮುಂಭಾದ ಸಮಾವೇಶಗೊಂಡ ವಕೀಲರು ಎಲ್ಲಾ ಇಲಾಖೆಗಳಿಗೆ ನಾಲ್ಕನೇ ಶನಿವಾರದ ರಜೆಯನ್ನು ರದ್ದು ಪಡಿಸಿಲ್ಲ. ಆದರೆ ನ್ಯಾಯಾಲಯದ ಸಿಬ್ಬಂಧಿಗೆ ಮಾತ್ರ 4ನೇ ಶನಿವಾರದ ರಜೆಯನ್ನು ರದ್ದು ಪಡಿಸಿದೆ. ಕೆಲವೊಮ್ಮೆ ತಾಲ್ಲೂಕು ಕಚೇರಿ ಸೇರಿದಂತೆ ಇತರೆ ಇಲಾಖೆಗಳು 4ನೇ ಶನಿವಾರ ರಜೆ ಇದ್ದಾಗ ವಕೀಲರ ಕಚೇರಿ ಕೆಲಸಗಳಿಗೆ ತೊಂದರೆ ಉಂಟಾಗಲಿದೆ. ಆದ ಕಾರಣದಿಂದಾಗಿ ಸರ್ಕಾರ ಇತರೆ ಇಲಾಖೆಗಳಿಗೆ ರಜೆ ನೀಡುವಂತೆ ನ್ಯಾಯಾಲಗಳಿಗೂ 4ನೇ ಶನಿವಾರದ ರಜೆಯನ್ನು ಈ ಹಿಂದಿನಂತೆ ಮುಂದುವರೆಸಬೇಕೆಂದು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಐ.ಎಸ್. ಅಕ್ಕಲಪ್ಪ, ಉಪಾರ್ಧಯಕ್ಷ ಬಿ.ಎಂ.ರಾಜಶೇಖರ್, ಕಾರ್ಯದರ್ಶಿ ಪಿ.ರಮೇಶ, ವಕೀಲರಾದ ಶಶಿಕಿರಣ್, ಎಸ್.ಎಣ್.ಮುರಳೀಧರ್, ಎನ್.ರವೀಂದ್ರ, ಉಗ್ರಮೂರ್ತಿ, ಡಿ.ಪಾಂಡುರಂಗಪ್ಪ, ಆರ್.ರಂಗನಾಥಪ್ಪ, ರಘುನಂದನ್, ಆರ್.ಹನುಮಂತರಾಯ, ಸಿ.ಎಚ್.ಹನುಮಂತರಾಐ, ಪಿ.ವಿ.ಯಜುನಾರಾಯಣ, ಎನ್.ನಾಗೇಂದ್ರರೆಡ್ಡಿ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?