Saturday, April 20, 2024
Google search engine
Homeಜಸ್ಟ್ ನ್ಯೂಸ್ಕಚೇರಿ ಅಲೆದು ಬೇಸತ್ತು, ತಹಶೀಲ್ದಾರ್ ಗೆ ಬೆಂಕಿ ಇಟ್ಟ ಘಾತುಕ! ಮುಂದೇನಾಯಿತು?

ಕಚೇರಿ ಅಲೆದು ಬೇಸತ್ತು, ತಹಶೀಲ್ದಾರ್ ಗೆ ಬೆಂಕಿ ಇಟ್ಟ ಘಾತುಕ! ಮುಂದೇನಾಯಿತು?

ತೆಲಾಂಗಣ: ತಹಶೀಲ್ದಾರ್ ಮೇಲೆ ಪೆಟ್ರೋಲ್ ಸುರಿದು ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರಮೆಟ್​​ ನಲ್ಲಿ ಸೋಮವಾರ (ನ.4)ದಂದು ನಡೆದಿದೆ.

ಅಬ್ದುಲ್ಲಾಪುರಮೆಟ್​​ ಈಚೆಗೆ ಮಂಡಲ್ ಆಗಿ ಪರಿವರ್ತೆನೆಯಾದ ನಂತರ ವಿಜಯಾರೆಡ್ಡಿ ಮೊದಲ ತಹಶೀಲ್ದಾರ್ ಆಗಿ ಅಧಿಕಾರಿ ಸ್ವೀಕರಿಸಿದ್ದರು. ವ್ಯಕ್ತಿಯೋರ್ವ ಬ್ಯಾಗ್ ಹಿಡಿದು ಕಚೇರಿ ಒಳಗೆ ಪ್ರವೇಶಿಸಿದ್ದ. ನಂತರ ತಹಶೀಲ್ದಾರ್ ಕೋಣೆಗೆ ಏಕಾ ಏಕಿ ಪ್ರವೇಶಿಸಿ ಪೆಟ್ರೋಲ್ ಎಣ್ಣೆ ಸುರಿದು ಬೆಂಕಿ ಹೊತ್ತಿಸಿ, ತಾನೂ ಬೆಂಕಿ ಇಟ್ಟುಕೊಂಡಿದ್ದ.  ತಹಶೀಲ್ದಾರ್ ವಿಜಯರೆಡ್ಡಿ ಸ್ಥಳದಲ್ಲಿಯೇ ಮತಪಟ್ಟಿದ್ದಾರೆ.

https://youtu.be/SrRs5A3w14A

ತಹಶೀಲ್ದಾರ್ ವಿಜಯರೆಡ್ಡಿ ಅವರನ್ನು ಕಾಪಾಡಲು ಹೋದ ಇಬ್ಬರು ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ.  ಬೆಂಕಿ ಹೊತ್ತಿಸಿಕೊಂಡ ಆರೋಪಿ ಕಚೇರಿಯಿಂದ ಚೀರಾಡಿಕೊಂಡು ಹೊರಹೋದನು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ವಿಜಯ ರೆಡ್ಡಿ ಅವರ ಶವವನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದಾರೆ. ನಂತರ ಆರೋಪಿ ಸುರೇಶ್‌ ಅವರನ್ನು ಬಂಧಿಸಲಾಗಿದೆ.

ಸುರೇಶ್ ಭೂ ವಿವಾದ ಬಗೆಹರಿಸುವಂತೆ ಹಲ ದಿನಗಳಿಂದ ತಹಶೀಲ್ದಾರ್ ಕಚೇರಿ ಅಲೆಯುತ್ತಿದ್ದ. ಿದೇ ವಿಚಾರಕ್ಕೆ ತಹಶೀಲ್ದಾರ್ ಬಳಿ ಮಾತನಾಡಬೇಕು ಎಂದು ಅನುಮತಿ ಪಡೆದು ತಹಶೀಲ್ದಾರ್ ಕೊಠಡಿ ಒಳ ಹೋಗಿದ್ದ. ಊಟಕ್ಕೆ ಹೊರಟಿದ್ದ ತಹಶೀಲ್ದಾರ್ ಈತನ ಜೊತೆ ಸುಮಾರು ಅರ್ಧ ಗಂಟೆ ಕಾಲ ಚರ್ಚಿಸಿದ್ದರು. ನಂತರ ಆರೋಪಿ ಸುರೇಶ್ ಕೊಠಡಿ ಬಾಗಿಲು ಮುಚ್ಚಿ ಹಲ್ಲೆ ನಡೆಸಿದ್ದಾನೆ. ತಹಶೀಲ್ದಾರ್ ಚಾಲಕ ಬಾಗಿಲು ತೆಗೆಯಲು ಯತ್ನಿಸಿ ವಿಫಲರಾಗಿದ್ದಾರೆ.

ಕಡೆಗೆ ಸುರೇಶ್ ತಹಶೀಲ್ದಾರ್ ಕೊಠಡಿ ಬಾಗಿಲು ತೆಗೆದು ಬೆಂಕಿ ಹೊತ್ತಿದ್ದ ಷರ್ಟ್ ಬಿಸಾಕಿ ಷಾರ್ಟ್ ಸರ್ಕ್ಯುಟ್ ನಿಂದ ಕೊಠಡಿಗೆ ಬೆಂಕಿ ವ್ಯಾಪಿಸಿದೆ ಎಂದು ಚೀರುತ್ತಾ ಓಡಿ ಹೋಗಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ನಂತರ ಸಂಪೂರ್ಣ ತಹಶೀಲ್ದಾರ್ ಕಚೇರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಂದಾಯ ಇಲಾಖೆಯ ಸಿಬ್ಬಂದಿ, ನೌಕರರು ತಹಶೀಲ್ದಾರ್ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?