Saturday, July 20, 2024
Google search engine
Homeತುಮಕೂರು ಲೈವ್ದಲಿತ ಕುಂದುಕೊರತೆ ಸಭೆ ಬಹಿಷ್ಕಾರ

ದಲಿತ ಕುಂದುಕೊರತೆ ಸಭೆ ಬಹಿಷ್ಕಾರ

Publicstory


ತುರುವೇಕೆರೆ : ದಲಿತರ ಸಮಸ್ಯೆಗಳನ್ನು ಆಲಿಸುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು ದಲಿತರ ಬಗ್ಗೆ ತಾತ್ಸಾರ ಧೋರಣೆ ಹೊಂದಿದ್ದಾರೆಂದು ತಾಲ್ಲೂಕು ದಲಿತ ಮುಖಂಡರು ಆರೋಪಿಸಿ ತಾಲ್ಲ್ಲೂಕು ಸಮಾಜ ಕಲ್ಯಾಣ ಇಲಾಖೆಯು ಗುರುವಾರ ಹಮ್ಮಿಕೊಂಡಿದ್ದ ದಲಿತರ ಕುಂದುಕೊರತೆ ಸಭೆಯನ್ನು ಬಹಿಷ್ಕರಿಸಿದರು.

ನಿಗಧಿತ ಸಮಯಕ್ಕೆ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯಲ್ಲಿ ದಲಿತರ ಕುಂದುಕೊರತೆ ಸಭೆ ಆರಂಭಗೊಂಡಿತ್ತು.
ದಲಿತರ ಕುಂದು ಕೊರತೆ ಸಭೆ ನಡೆಸಿ ಒಂದು ವರ್ಷವಾಗಿದೆ. 2017ರಲ್ಲಿ ನಡೆದಿದ್ದು ಸಭೆಯ ನಡಾವಳಿಗಳನ್ನೇ ಸದರಿ ಸಭೆಗೆ ನೀಡಿದಾಗ ಸಭೆಯಲ್ಲಿ ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.

ಕಳೆದ ವರ್ಷ ಸಭೆಯಲ್ಲಿ ಮಾಡಲಾದ ನಡಾವಳಿಗಳು ಏನಾದವು. ಸಭೆಯಲ್ಲಿ ಚರ್ಚಿತವಾದ ಯಾವ ಕೆಲಸಗಳೂ ಚಾಲನೆಯಾಗಿಲ್ಲ.

ಹಳೆಯ ನಡಾವಳಿಗಳನ್ನು ಈ ಸಭೆಯಲ್ಲಿ ಕೊಟ್ಟು ದಲಿತರನ್ನು ದಿಕ್ಕು ತಪ್ಪಿಸಲು ತಾಲ್ಲೂಕು ಆಡಳಿತ ಮುಂದಾಗಿದೆ. ಕಾಟಾಚಾರದ ಸಭೆ ನಡೆಸುವುದು ಬೇಡ. ಜಿಲ್ಲಾಧಿಕಾರಿ ಮತ್ತು ಎಸಿಯವರು ಬಂದಾಗ ಸಭೆಗೆ ಭಾಗವಹಿಸುತ್ತೇವೆ ಅಲ್ಲಿಯವರೆವಿಗೂ ಸಭೆಗೆ ಪಾಲ್ಗೊಳ್ಳುವುದಿಲ್ಲವೆಂದು ಎಲ್ಲ ದಲಿತ ಮುಖಂಡರು ಸಭೆ ಬಹಿಷ್ಕರಿಸಿ ಹೊರ ನಡೆದರು.

ಎಪಿಎಂಸಿ ಸದಸ್ಯ ವಿ.ಟಿ.ವೆಂಕಟರಾಂ ಮಾತನಾಡಿ, ಪ್ರತಿ ಸಭೆಯಲ್ಲಿ ಮಾಡುವ ಠರಾವು, ಕ್ರಮಗಳು ಕಡತಗಳಲ್ಲೇ ದೂಳು ಹಿಡಿಯುತ್ತವೆ. ಇದು ಅಧಿಕಾರಿಗಳು ದಲಿತರಿಗೆ ಮಾಡುವ ದ್ರೋಹವಾಗಿದೆ. ನಿಮ್ಮ ಮೇಲೆ ವಿಶ್ವಾಸ, ನಂಬಿಕೆಯಿಲ್ಲ.

ತಾಲ್ಲೂಕಿನಲ್ಲಿ ಅಂಬೇಡ್ಕರ್ ಭವನಗಳು ಮಂಜೂರಾಗಿ ಹಲವು ವರ್ಷಗಳೇ ಕಳೆದರೂ ಅದರ ಬಗ್ಗೆ ದಾಖಲೆಯಿಲ್ಲ. ಹೆಣ್ಣು ಮಕ್ಕಳ ಹಾಸ್ಟೆಲ್ಗೆ ಸುವ್ಯವಸ್ಥಿತ ಕಟ್ಟಡ ಹಾಗು ಮೂಲಸೌಕರ್ಯಗಳಿಲ್ಲ. ಇಲ್ಲಿನ ಅಕ್ರಮಗಳ ಬಗ್ಗೆ ದ್ವನಿ ಎತ್ತಿದರೆ ಕಟ್ಟಡ ಕಾಮಗಾರಿಯ ಕಡತಗಳೆ ಕಾಣೆಯಾಗುತ್ತವೆ‌ ಎಂದರು.

ದಲಿತರು ಹಾಗು ದಲಿತ ನೌಕರರ ಬಗ್ಗೆ ಅನ್ಯಾಯ ಮಾಡಿದವರ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಇಲ್ಲಿನ ಅಧಿಕಾರಿಗಳ ಬಗ್ಗೆ ದಲಿತರಲ್ಲಿ ವಿಶ್ವಾಸವಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಕಮಿಷನ್ ಅಥವಾ ಜಂಟಿಕಮಿಷನ್ ಬರಲಿ ಸಭೆಗೆ ಭಾಗವಹಿಸುವೆವು. ಇಲ್ಲವಾದರೆ ಇಂತಹ ಅವ್ಯವಸ್ಥೆಯ ಖಂಡಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು‌ ಎಂದರು.

ತಾಲ್ಲೂಕಿನ ಯಾವುದೇ ಇಲಾಖೆಯ ಅಧಿಕಾರಿಗಳು ದಲಿತರ ಸಮಸ್ಯೆಗಳಿಗೆ ಸ್ಪಂದಿಸದೆ ಶ್ರೀಮಂತರ, ಪ್ರಭಾವಿಗಳ ಪರ ಕೆಲಸ ಮಾಡುತ್ತಾರೆ. ಈ ಬಗ್ಗೆ ತಾಲ್ಲೂಕು ದಸಂಸ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡು ಅಧಿಕಾರಿಗಳ ಅಕ್ರಮ ಹಾಗು ದಲಿತ ವಿರೋಧಿ ಧರಣೆಯನ್ನು ಬಯಲಿಗೆಳೆಯಲಾಗುವುದು ಎಂದು ಎಚ್ಚರಿಸಿದರು.

ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ಎದುರು ದಲಿತ ವಿರೋಧಿ ಅಧಿಕಾರಿಗಳಿಗೆ ದಿಕ್ಕಾರ ಕೂಗಿ, ಅಂಬೇಡ್ಕರ್ ಪರ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ಎಪಿಎಂಸಿ ಸದಸ್ಯರುಗಳಾದ, ನರಸಿಂಹಣ್ಣ, ವಿ.ಟಿ.ವೆಂಕಟರಾಂ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನುಮಂತಯ್ಯ, ಮುಖಂಡರುಗಳಾದ ದಂಡಿನಶಿವರಕುಮಾರ್, ಬಾಬುಕೊಂಡಜ್ಜಿ, ಡಾ.ಚಂದ್ರಣ್ಣ, ತಿಮ್ಮೇಶ್, ಮಧುಸಿದ್ದಾಪುರ, ಜಗದೀಶ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?