Saturday, July 20, 2024
Google search engine
Homeಕೃಷಿಬೆಳೆ ಪರಿಹಾರ ಪಡೆಯಲು ಹೀಗೆ ಮಾಡಿ...

ಬೆಳೆ ಪರಿಹಾರ ಪಡೆಯಲು ಹೀಗೆ ಮಾಡಿ…

ತುರುವೇಕೆರೆ: ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತಬಾಂಧವರು ಪರಿಹಾರದ ಹಣವನ್ನು ಪಡೆಯಲು ಖಡ್ಡಾಯವಾಗಿ ಎಫ್.ಐ.ಡಿ ಮಾಡಿಸಬೇಕೆಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ತಿಳಿಸಿದರು.


ಪಟ್ಟಣದ ಕೃಷಿ ಇಲಾಖೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಒಟ್ಟು 223726 ತಾಕುಗಳಿದ್ದು ಇದುವರೆವಿಗೂ ಫ್ರೂಟ್ ತಂತ್ರಾಂಶದಲ್ಲಿ 128328 ತಾಕುಗಳನ್ನು ಮಾತ್ರ ಸೇರ್ಪಡೆಗೊಳಿಸಿ, ರೈತರುಗಳು ಎಫ್.ಐ.ಡಿಗಳನ್ನು ಸೃಜನೆ ಮಾಡಿಸಿದ್ದಾರೆ. ಇನ್ನೂ 95398 ತಾಕುಗಳನ್ನು ಫ್ರೂಟ್ ತಂತ್ರಾಂಶದ ಎಫ್.ಐ.ಡಿಗಳಿಗೆ ಜೋಡಣೆ ಮಾಡಬೇಕಿದೆ.


2023-24ನೇ ಸಾಲಿನ ಮುಂಗಾರು ಹಂಗಾಮಿನ ಬರಪರಿಹಾರದ ಹಣವನ್ನು ಪಡೆದುಕೊಳ್ಳಲು ರೈತರು ಈ ಕೂಡಲೇ ತಮ್ಮ ಜಮೀನಿನ ಸರ್ವೇ ನಂಬರ್ ಗಳನ್ನು ಎಫ್.ಐ.ಡಿ ಗಳಿಗೆ ಸೇರ್ಪಡೆಗೊಳಿಸಬೇಕು. ಹಾಗು ಇದುವರೆವಿಗೂ ಎಫ್.ಐ.ಡಿ ಮಾಡಿಸದ ರೈತರು ಪಹಣಿ, ಆಧಾರ್, ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ಗಳ ಜೆರಾಕ್ಸ್ ಪ್ರತಿಗಳೊಂದಿಗೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಎಫ್.ಐ.ಡಿಗಳನ್ನು ಸೃಜನೆ ಮಾಡಬೇಕಾಗಿ ಕೋರಿದರು.


ಸುದ್ದಿಗೋಷ್ಠಿಯಲ್ಲಿ ಕೃಷಿ ಹೋಬಳಿ ಕೇಂದ್ರದ ಅಧಿಕಾರಿ ಗಿರೀಶ್,ರುದ್ರಪ್ಪ ಮತ್ತು ಸಿಬ್ಬದಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?