Saturday, July 20, 2024
Google search engine
Homeಪೊಲಿಟಿಕಲ್ಪಾವಗಡಕ್ಕೆ ಬೇಕು ಡಬ್ಬಲ್ ಎಂಜಿನ್ ಸರ್ಕಾರ

ಪಾವಗಡಕ್ಕೆ ಬೇಕು ಡಬ್ಬಲ್ ಎಂಜಿನ್ ಸರ್ಕಾರ

ಪಾವಗಡ: ಡಬ್ಬಲ್ ಇಂಜಿನ್ ಸರ್ಕಾರ ರಚಿಸಲು ಈ ಭಾಗದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕೃಷ್ಣ ನಾಯ್ಕ್ ಗೆ ಮತವನ್ನು ಕೊಟ್ಟು ಗೆಲ್ಲಿಸಿ ಎಂದು ಕ್ಷೇತ್ರದ ಜನತೆಗೆ ಮನವಿ ಮಾಡಿದ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯದರ್ಶಿ ಸತ್ಯ ಕುಮಾರ್ ಯಾದವ್ ಮನವಿ ಮಾಡಿದರು.

ಬುದುವಾರ ಪಟ್ಟಣದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಹಾಗೂ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಡಬಲ್ ಇಂಜಿನ್ ಇದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯಕ್ ರವರಿಗೆ ಮತ ಕೊಟ್ಟು ಗೆಲ್ಲಿಸಿದರೆ ತ್ರಿಬಲ್ ಇಂಜಿನ್ ಸರ್ಕಾರ ರಚಿಸಬಹುದು ನೀವು ಮತ ಕೊಟ್ಟು ಗೆಲ್ಲಿಸಿ ಎಂದು ಕೇಳಿದರು.

ಮೋದಿ ಸರ್ಕಾರ ಬಂದ ನಂತರ ಪ್ರಪಂಚದಲ್ಲಿ ಅತ್ಯಂತ ಶ್ರೀಮಂತರ ರಾಷ್ಟ್ರಗಳಲ್ಲಿ ನಮ್ಮ ಭಾರತ 5ನೇ ಸ್ಥಾನ ಪಡೆದಿದೆ ಈ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಬಡವರ ವಸತಿ ಯೋಜನೆಗೋಸ್ಕರ 3 ಕೋಟಿ 55 ಲಕ್ಷ ರೂ ನಿರ್ಮಾಣ ಮಾಡಿದೆ. ಅದಕ್ಕೋಸ್ಕರ 8 ಲಕ್ಷ ಕೋಟಿ ರೂ ಖರ್ಚು ಮಾಡಿದೆ.ಕರ್ನಾಟಕದಲ್ಲಿ 7,ಲಕ್ಷ 10 ಸಾವಿರರೂ ಬಡವರ ವಸತಿ ಯೋಜನೆ ನಿರ್ಮಾಣಕ್ಕೆ ಮುಂದಾಗಿದೆ.

ಮುದ್ರಾ ಯೋಜನೆ ಮುಖಾಂತರ ಒಂದು ಕೋಟಿ ಆರು ಲಕ್ಷ ಮಂದಿ ಯುವ ಜನತೆಗೆ ಮುದ್ರಾ ಸಾಲ ನೀಡಿ 76,000 ಸಾವಿರ ಕೋಟಿ ರೂ ಮಂಜೂರು ಮಾಡಿದೆ. ಒಂದು ಕೋಟಿ ಆರು ಲಕ್ಷ ಯುವಜನತೆ ಮುದ್ರಾ ಯೋಜನೆಯಲ್ಲಿ ಸಾಲ ಪಡೆದವರು ಸ್ವಯಾರ್ಜಿತವಾಗಿ ಜೀವನ ನಡೆಸುತ್ತಿದ್ದಾರೆ.

ಸೌಭಾಗ್ಯ ಯೋಜನೆ ಮುಖಾಂತರ ಪ್ರತಿ ಮನೆಗೆ ವಿದ್ಯುತ್ ನೀಡಿದ್ದು ನಮ್ಮ ಮೋದಿ ಸರ್ಕಾರ ಅದನ್ನು ಅರಿಯಬೇಕು ಬಡ ಜನತೆ ಎಂದು ವಿದ್ಯುತ್ ಯೋಜನೆ ಬಗ್ಗೆ ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಇದ್ದಂತಹ ಕಾಲದಲ್ಲಿ ರೈಲ್ವೆ ಯೋಜನೆಗೆ ಒಂದು ವರ್ಷಕ್ಕೆ ಕೇವಲ ಎಂಟುನೂರ 34 ಕೋಟಿ ರೂ ಖರ್ಚು ಮಾಡುತ್ತಿದ್ದ ಅಂತಹ ಸಮಯದಲ್ಲಿ ಮೋದಿ ಸರ್ಕಾರ ಬಂದ ನಂತರ ಪ್ರತಿ ವರ್ಷ ಮೂರು ಸಾವಿರದ ನಾಲ್ಕು ನೂರ 64 ಕೋಟಿ ರೂಗಳು ರೈಲ್ವೆ ನಿರ್ಮಾಣಕ್ಕಾಗಿ ಖರ್ಚು ಮಾಡುತ್ತಿದೆ. ರೈಲ್ವೆ ಯೋಜನೆಗಳಿಗೆ ಖರ್ಚು ಮಾಡಿದ ವಿವರಗಳನ್ನು ಹೇಳಿದರು.

ಹಾಗಾಗಿ ಈ ತಾಲೂಕು ಹಿಂದುಳಿದಿದೆ ಅಭಿವೃದ್ಧಿಗೋಸ್ಕರ ಈ ಕ್ಷೇತ್ರದ ಬಿಜೆಪಿ ಎಂಎಲ್ಎ ಇದ್ರೆ ಇನ್ನಷ್ಟು ಅಭಿವೃದ್ಧಿಯ ನಡೆಯುತ್ತದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯಕರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸುವ ಮುಖಾಂತರ ಅಭಿವೃದ್ಧಿ ಆಗಲು ಸಾಧ್ಯ ಇಲ್ಲದಿದ್ದರೆ ಇನ್ನೂ ಹಿಂದೆ ಉಳಿಯುತ್ತದೆ ಎಂದು ಸತ್ಯಕುಮಾರ ಯಾದವ್ ಕ್ಷೇತ್ರದ ಜನತೆಗೆ ವಿವರಿಸಿದರು .

ಈ ಸಂದರ್ಭದಲ್ಲಿ ಗಜೇಂದ್ರ. ರವಿ ಶಂಕರ್ ನಾಯ್ಕ್. .ಸತ್ಯ ಸಾಯಿ ಜಿಲ್ಲಾ ಅಧ್ಯಕ್ಷರು ವಜ್ರ ಭಾಸ್ಕರ್ ರೆಡ್ಡಿ. ಕೃಷ್ಣಮೂರ್ತಿ. ಮುಖಂಡರಾದ ಕಡಪಲಕೆರೆ ನವೀನ್. ಸೇರಿದಂತೆ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?