Monday, April 15, 2024
Google search engine
Homeಜಸ್ಟ್ ನ್ಯೂಸ್ಒಂದೇ ಹುದ್ದೆಗೆ ನಾಲ್ವರನ್ನು ವರ್ಗಾವಣೆ ಮಾಡಿದ ಆರೋಗ್ಯ ಇಲಾಖೆ!!

ಒಂದೇ ಹುದ್ದೆಗೆ ನಾಲ್ವರನ್ನು ವರ್ಗಾವಣೆ ಮಾಡಿದ ಆರೋಗ್ಯ ಇಲಾಖೆ!!

Publicstory


ತುಮಕೂರು; ಜಿಲ್ಲೆಯ ಆರೋಗ್ಯ ಇಲಾಖೆಯ ಒಂದೇ ಹುದ್ದೆಗೆ ನಾಲ್ಕು ಮಂದಿಯನ್ನು ವರ್ಗಾವಣೆ ಮಾಡುವ ಮೂಲಕ ಆರೋಗ್ಯ ಇಲಾಖೆ ಎಡವಟ್ಟು ದಾಖಲೆ ಬರೆದಿದೆ.

ಒಂದೇ ಹುದ್ದೆಗೆ ಇಬ್ಬಿಬ್ಬರನ್ನು ವರ್ಗಾವಣೆ ಮಾಡಿ ಅಧಿಕಾರಿಗಳು ಅಧಿಕಾರ ವಹಿಸಿಕೊಳ್ಳುವುದಕ್ಕೆ ಕಿತ್ತಾಡುವುದನ್ನು ನೋಡಿ ಸಿಬ್ಬಂದಿ ಮಜಾ ತೆಗೆದುಕೊಳ್ಳುತ್ತಿದ್ದರು. ಆದರೆ ಈ ಸಲ ಆರೋಗ್ಯ ಸಚಿವ ಸುಧಾಕರ ಅವರು ನಾಲ್ಕು ಮಂದಿ ಅಧಿಕಾರಿಗಳನ್ನು ಒಂದೇ ಜಾಗಕ್ಕೆ ವರ್ಗಾವಣೆ ಮಾಡಿರುವುದು ನಗೆಪಾಟಲಿಗೆ ಮಾತ್ರವಲ್ಲ ಬೇರೆ ಬೇರೆ ರೀತಿಯ ಚರ್ಚೆಗೂ ಕಾರಣವಾಗುತ್ತಿದೆ.

ಕೊರಟಗೆರೆ ತಾಲ್ಲೂಕು ಅಧೀಕ್ಷಕರು ವಯೋನಿವೃತ್ತಿಗೊಳ್ಳುತ್ತಿದ್ದಾರೆ. ಆ ಜಾಗಕ್ಕೆ ಹಿರಿಯೂರು ತಾಲ್ಲೂಕು ಅಸ್ಪತ್ರೆಯ ಕಚೇರಿ ಅಧೀಕ್ಷಕ ಸಿ.ಕೆ. ಕುಮಾರಸ್ವಾಮಿ, ಹೊಸಕೋಟೆ ತಾಲ್ಲೂಕಿನ ಸಿ.ಕೆ.‌ಉಷಾ ಹಾಗೂ ಕಡೂರಿನ ಕಲ್ಪನಾ, ಕೂಡ್ಲಗಿಯ ಮಂಜಣ್ಣ ಅವರಿಗೂ ಭಾಗ್ಯ ಕಲ್ಪಿಸಲಾಗಿದೆ!!
ಹಿಂದುಳಿದ ತಾಲ್ಲೂಕು ಕೊರಟಗೆರೆ ಈ ತಾಲ್ಲೂಕು ಆಸ್ಪತ್ರೆಯ ಹುದ್ದೆಯಲ್ಲಿ ಇನ್ನೆಂಥ ಮಾಯಾದಂಡ ಅಡಗಿರಬಹುದು ಎಂದು ಇಲಾಖೆಯ ಸಿಬ್ಬಂದಿಯೇ ಜೋರು ಚರ್ಚೆಯಲ್ಲಿ ತೊಡಗಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?