Saturday, July 20, 2024
Google search engine
Homeಪೊಲಿಟಿಕಲ್ಷಡಕ್ಷರಿಗೆ ಸಚಿವ ಸ್ಥಾನ: ಲಿಂಗಾಯತರ ಒತ್ತಾಯ

ಷಡಕ್ಷರಿಗೆ ಸಚಿವ ಸ್ಥಾನ: ಲಿಂಗಾಯತರ ಒತ್ತಾಯ

ತುರುವೇಕೆರೆ: ಜಿಲ್ಲೆಯ ಏಕೈಕ ವೀರಶೈವ ಲಿಂಗಾಯಿತ, ತಿಪಟೂರಿನ ಶಾಸಕ ಕೆ.ಷಡಕ್ಷರಿ ಅವರನ್ನು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ಕುಮಾರ್ ಸ್ವಾಮಿ ಒತ್ತಾಯಿಸಿದರು.


ಪಟ್ಟಣದ ಕೆರೆಕೋಡಿಯಲ್ಲಿರುವ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ತಾಲ್ಲೂಕು ಸಮಾಜ ಬುಧವಾರ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು,
ನಮ್ಮ ಸಮುದಾಂದು ಶಾಸಕ ಕೆ.ಷಡಕ್ಷರಿಯವರು ಮೂರು ಬಾರಿ ಶಾಸಕರಾಗಿ ತಿಪಟೂರುಕ್ಷೇತ್ರವನ್ನು ಪ್ರತಿನಿಧಿಸಿ ಪಕ್ಷದ ನಿಷ್ಠಾವಂತ ನಾಯಕರಾಗಿ ದುಡಿದವರು ಇವರು ಎರಡು ಬಾರಿ ಭೂ ಅಭಿವೃದ್ಧಿ ಬ್ಯಾಂಕ್ ಹಾಗು ರಾಜ್ಯ ಸಹಕಾರಿ ಇಲಾಖೆಯಲ್ಲಿ ಕೆಲಸ ಮಾಡಿರುವ ಅನುಭವಿದ್ದು ಇವರನ್ನು ಸಹಕಾರಿ ಮಂತ್ರಿಯನ್ನಾಗಿ ಮಾಡಬೇಕು ಎಂಬುದು ಸಮುದಾಯದ ಒಕ್ಕೊರಲಿನ ಒತ್ತಾಯವಾಗಿದೆ.


ವಿರೇಂದ್ರ ಪಾಟೀಲ್ ಅವರು 1989ರಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದರು, ಆದರೆ ನಂತರದ ರಾಜಕೀಯ ಬೆಳವಣಿಗೆಯಿಂದ ಅವರನ್ನು ಮೂಲೆಗುಂಪು ಮಾಡಿದ್ದರಿಂದ ಕಾಂಗ್ರೆಸ್ ಮೇಲೆ ವೀರಶೈವ ಲಿಂಗಾಯಿತರು ಅಸಮಧಾನ ಹೊಂದಿದ್ದರು.
ಈಗ ಕಾಂಗ್ರೆಸ್ನಿಂದ 39 ವೀರಶೈವ ಲಿಂಗಾಯಿತ ನಾಯಕರು ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜ್ಯದಲ್ಲಿ ಹೆಚ್ಚು ಬಹುಮತ ನೀಡಿದ ಸಮುದಾಯವಾಗಿದೆ. ಈಗ ನಮ್ಮ ಸಮುದಾಯದ ಶಕ್ತಿ ಕಾಂಗ್ರೆಸ್ ನಾಯಕರಿಗೆ ಅರಿವಾಗಿದೆ ಎಂದರು.


ಶ್ಯಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್ ನಂತಹ ಹಲವು ವೀರಶೈವ ನಾಯಕರಿದ್ದು ಅವರಲ್ಲಿ ಪ್ರಮುಖರನ್ನು ಸಿ.ಎಂ ಮಾಡಿ ಅಥವಾ ಒಳ್ಳೆಯ ಸಚಿವ ಸ್ಥಾನ ನೀಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶೇ50 ರಷ್ಟು ಸಮುದಾಯ ಕಾಂಗ್ರೆಸ್ ಕೈ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಸುದ್ದಿ ಗೋಷ್ಠಿಯಲ್ಲಿ ಶಿವಾನಂದಯ್ಯ ಕಳ್ಳನಕೆರೆ, ಡಿ.ಎಂ.ಸುರೇಶ್ದುಂಡಾ, ಆರ್.ಎಂ ತ್ರೈಲೋಕ್ಯನಾಥ್, ಯಜಮಾನ್ ಮಹೇಶ್, ಯಡಗಿಹಳ್ಳಿ ವಿಶ್ವನಾಥ್, ಅರಳೀಕೆರೆ ಲೋಕೇಶ್, ರುದ್ರೇಶ್, ಎಂ.ಪಿ.ಸುರೇಶ್, ಸುನಿಲ್ ಬಾಬು, ಶಂಕರ್, ಕಾಂತರಾಜು, ಮಂಜುನಾಥ್ ಇನ್ನಿತರರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?