Friday, July 26, 2024
Google search engine
Homeತುಮಕೂರು ಲೈವ್Gubbi PU COllege: ರಾಷ್ಟ್ರ ಧ್ವಜ ಕ್ಕೆ ಅಪಮಾನ ?

Gubbi PU COllege: ರಾಷ್ಟ್ರ ಧ್ವಜ ಕ್ಕೆ ಅಪಮಾನ ?

ಲಕ್ಷ್ಮೀಕಾಂತರಾಜು ಎಂ.ಜಿ


Gubbi: “ಏರುತಿಹುದು ತೋರುತಿಹುದು ನೋಡು ನಮ್ಮ ಬಾವುಟ. ಧ್ವಜದ ಶಕ್ತಿ ನಮ್ಮ‌‌ ಶಕ್ತಿ ನೋಡಿರಣ್ಣ ಹೇಗಿದೆ. ಸತ್ಯ ಶಾಂತಿ ತ್ಯಾಗಮೂರ್ತಿ ಗಾಂಧಿ ಹಿಡಿದ ಚರಕವು…” ಹೀಗೆ ನಮ್ಮ ಭಾರತ ದೇಶದ ಧ್ವಜವನ್ನ ನಾವು ಹೊಗಳಿ ಗೌರವಿಸುವ ಪದ್ಯವೊಂದನ್ನ ನಮ್ಮ‌ ಶಾಲಾ‌ದಿನಗಳಲ್ಲಿ ನಾವೆಲ್ಲಾ ಹಾಡಿದ್ದೇವೆ.

ರಾಷ್ಟ್ರಭಕ್ತಿ,ರಾಷ್ಟ್ರ ಲಾಂಚನ,ರಾಷ್ಟ್ರಧ್ವಜ ಇವುಗಳಿಗೆ ಭಾರತೀಯರಾದ ನಾವು ನಮ್ಮ ದೇಶದ ಲಾಂಚನಗಳಿಗೆ ನಾವು ನಾವು ಪೂಜಿಸುವ ದೇವರುಗಳಷ್ಟೆ ಗೌರವ ಕೊಡಬೇಕಿದೆ.

ಇಂಥಹ ಗೌರವಯುತವಾಗಿ ನಡೆಸಿಕೊಳ್ಳುವ ಭಾರತದ ಧ್ವಜವನ್ನ ಗುಬ್ಬಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಗೌರವವಾಗಿ ನಡೆಸಿಕೊಳ್ಳಲಾಗಿದೆ.

ಹೌದು. ಕಳೆದ ಡಿಸೆಂಬರ್ ನ ಹನ್ನೆರಡರಂದು ಗುಬ್ಬಿ ಮಾಧ್ಯಮದವರಿಗೆ ಒಂದು ಕರೆ ಬರುತ್ತದೆ. ಪಟ್ಟಣದ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ರಾಷ್ಟ್ರಧ್ವಜವನ್ನ ಕಸದ ರೀತಿ ಎಸೆದಿದ್ದಾರೆಂದು ಬರುವ ಮಾಹಿತಿಗನುಸಾರವಾಗಿ ಮಾಧ್ಯಮದ ವರದಿಗಾರರು ಬಾವುಟದ ಸ್ಥಿತಿಯನ್ನ ಚಿತ್ರಿಕರಿಸಿ ಸುದ್ದಿಯನ್ನ ಮಾಡಿದ್ದಾರೆ.

ರಾಷ್ಟ್ರ ಧ್ವಜದ ಸ್ಥಿತಿ

ಕಾಲೇಜಿನ ಸಿಬ್ಬಂದಿ ಬೇಜವಬ್ದಾರಿಯಿಂದ ಭಾರತದ ಧ್ವಜಕ್ಕೆ ಆಗಿರುವ ಅಪಚಾರವನ್ನ ಪ್ರಶ್ನಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದರೂ ಇದುವರೆಗೆ ಪ್ರಯೋಜನವಾಗಿಲ್ಲವೆಂದು ದೂರುತ್ತಾರೆ ಗುಬ್ಬಿಯ ಪತ್ರಕರ್ತ ರಮೇಶ್ ಗೌಡ.

ಶಾಲಾ ದಿನಗಳಲ್ಲಿ ರಾಷ್ಟ್ರಹಬ್ಬಗಳ ಆಚರಣೆಯಿಂದ ಮತ್ತು ಪಠ್ಯಗಳಲ್ಲಿರುವ ದೇಶದ ಅಭಿಮಾನದ ವಿಷಯಗಳಿಂದ ದೇಶಾಭಿಮಾನ ರೂಢಿಸುವ ಶಾಲೆಗಳಲ್ಲಿಯೇ ಮಕ್ಕಳೆದುರಲ್ಲಿ ಧ್ವಜಕ್ಕೆ ಅಪಮಾನವಾಗಿರುವುದು ತುಂಬಾ ನೋವಿನ ಸಂಗತಿ ಎನ್ನುತ್ತಾರೆ ಗುಬ್ಬಿಯ ಹಲವು ನಾಗರಿಕರು.

ಈ ಘಟನೆ ನಡೆದು ಒಂದು ತಿಂಗಳು ಕಳೆದರು ತಪ್ಪಿತಸ್ಥ ಶಾಲಾ ಸಿಬ್ಬಂದಿಯ ಮೇಲೆ ಶಿಸ್ತುಕ್ರಮವನ್ನ ಜರುಗಿಸಿಲ್ಲ. ಬರಲಿರುವ ಜನವರಿ ಇಪ್ಪತ್ತಾರರ ಗಣರಾಜ್ಯೋತ್ಸವದ ದಿನಕ್ಕೆ ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಗುಬ್ಬಿಯ ಪತ್ರಕರ್ತರು ಹಾಗೂ ವಿವಿಧ ಸಂಘಟನೆಗಳು ತಹಸೀಲ್ದಾರ್ ಅವರಿಗೆ ಮನವಿಯನ್ನೂ ಸಲ್ಲಿಸಿವೆ.

ಭಾರತ ದೇಶದ ಧ್ವಜ ,ಲಾಂಚನಕ್ಕೆ ಅಪಚಾರವಾಗಿರುವುದು ವಿಡೀಯೋ ಹಾಗೂ ಫೋಟೋಗಳಿಂದ ನಮಗೆ ತಿಳಿದುಬರುತ್ತದೆ. ಇದರಿಂದ ದೇಶಾಭಿಮಾನಿಗಳು ಪಕ್ಷ,ಜಾತಿ,ಧರ್ಮ ಪಕ್ಕಕ್ಕಿಟ್ಟು ಪಕ್ಷಾತೀತವಾಗಿ ಹೋರಾಟ ನಡೆಸಿ ಧ್ವಜಕ್ಕೆ ಅಗೌರವ ತೋರಿರುವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಹೋರಾಟ ಮಾಡಬೇಕಿದೆ.


ನಾವು ದೇಶಾಭಿಮಾನಿಗಳು. ರಾಷ್ಟ್ರ ಧ್ವಜಕ್ಕೆ ಆಗಿರುವ ಅಪಮಾನವನ್ನ ನಾವು ಖಂಡಿಸುತ್ತೇವೆ. ಅಪಮಾನ ಮಾಡಿರುವವರ ವಿರುದ್ಧ ಇಲಾಖೆ ಶಿಸ್ತುಕ್ರಮ ಕೈಗೊಳ್ಳದಿದ್ದರೆ ನಾವು ಹೋರಾಟ ಮಾಡುತ್ತೇವೆ.

ರಮೇಶ್ ಗೌಡ,ಪತ್ರಕರ್ತ.ಗುಬ್ಬಿ


ಶಾಸಕರು ಏನ್ ಹೇಳ್ತಾರೆ ಇಲ್ಲಿದೆ ನೋಡಿ


ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ದುರುದ್ದೇಶದ ಕಾರಣಕ್ಕೆ ಬೇರೆ ಯಾರೋ ಈ ಕೆಲಸ ಮಾಡಿದ್ದಾರೆ ಅಂತ ಅನಿಸ್ತಿದೆ. ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಎಸ್ ಆರ್ ಶ್ರೀನಿವಾಸ್,ಶಾಸಕರು ಗುಬ್ಬಿ


ತನಿಖೆ ನಡೆಸಿದ್ದೇವೆ

ಗುಬ್ಬಿ ತಹಸೀಲ್ದಾರ್ ಹಾಗೂ ನಾನು ಪ್ರಕರಣವನ್ನ ಜಂಟಿಯಾಗಿ ತನಿಖೆ ನಡೆಸಿ ತನಿಖಾ ವರದಿಯನ್ನ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಮುಂದಿನಕ್ರಮ ಜಿಲ್ಲಾಧಿಕಾರಿಗಳ ಸೂಚನೆಯಂತೆ ನಡೆಯಲಿದೆ.


ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ,ಗುಬ್ಬಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?