Saturday, July 27, 2024
Google search engine
Homeತುಮಕೂರು ಲೈವ್ಪರಮಾನಂದವೇ ಸಂಸ್ಕಾರದ‌ ಗುರಿಯಾಗಿರಲಿ

ಪರಮಾನಂದವೇ ಸಂಸ್ಕಾರದ‌ ಗುರಿಯಾಗಿರಲಿ

ತುರುವೇಕೆರೆ; ಒಳ್ಳೆಯ ಕೆಲಸಗಳ ಮೂಲಕ ಪರಮಾನಂದ ಕಡೆಗೆ ಹೋಗುವುದೇ ಸಂಸ್ಕಾರ. ಸಂಸ್ಕಾರ ನಮ್ಮ ವ್ಯಕ್ತಿತ್ವದ ದೋಷ ನಿವಾರಣೆ ಮಾಡಿ ಗುಣದಾನ ದೊಂದಿಗೆ ಶಕ್ತಿವರ್ಧನೆ ಮಾಡುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಚಿಂತಕ ಡಾ. ಸಂತೋಷ್ ಹಾನಗಲ್ ತಿಳಿಸಿದರು.

ಪಟ್ಟಣದ ಚಿದಂಬರೇಶ್ವರ ಗ್ರಂಥಾಲಯದಲ್ಲಿ ಶತವಧಾನಿ ಆರ್. ಗಣೇಶ್ ಅವರು ರಚಿಸಿದ ‘ಸಂಸ್ಕಾರಗಳು’ ಕೃತಿಯ ವಿಶ್ಲೇಷಣೆ ಮಾಡಿ ಅವರು ಮಾತನಾಡಿದರು.

ಸಂಸ್ಕಾರದಿಂದ ಸಮಾಜದ ಸದಸ್ಯರು ಸಂಘಟಿತರಾಗುತ್ತಾರೆ. ಹೃದಯದ ಶ್ರದ್ಧೆ ಮತ್ತು ವಿಶ್ವಾಸ ಬಲಿಯುತ್ತದೆ. ಕಲೆ, ಸಾಹಿತ್ಯದ ಸಂವೇದನೆ ಅರಳು ತ್ತದೆ.ವೈವಿಧ್ಯಮಯ ಆಚರಣೆ ಗಳನ್ನು ಸಮಾನ ದೃಷ್ಟಿಯಿಂದ ನೋಡುವ ಮೂಲಕ ಪ್ರಜ್ಞಾವಂತಿಕೆ ಬೆಳೆಯುತ್ತದೆ.ಸಂಸ್ಕಾರವುಳ್ಳ ವ್ಯಕ್ತಿಗಳು ಒಂದು ಸುಸಂಸ್ಕೃತ ಸಮುದಾಯವನ್ನು ನಿರ್ಮಿಸುತ್ತಾರೆ ಎಂದರು.

ಕೃತಿಯಲ್ಲಿನ ಹಲವು ಸಂಕೀರ್ಣ ವಿಷಯಗಳನ್ನು ಅರ್ಥೈಸಿದ ಅವರು ವರ್ಣ ವ್ಯವಸ್ಥೆ ಎಂದರೆ ಚರ್ಮದ ಬಣ್ಣ, ಕಸುಬಿನ ಮೂಲಕ ಮನುಷ್ಯನನ್ನು ಪ್ರತ್ಯೇಕಿಸುವುದಲ್ಲ. ಸ್ವಧರ್ಮ ಗುರುತಿಸಿಕೊಂಡು ವ್ಯಕ್ತಿತ್ವ ಗಟ್ಟಿಮಾಡಿಕೊಳ್ಳುವುದೇ ವರ್ಣ ವ್ಯವಸ್ಥೆ ಎನಿಸಿಕೊಳ್ಳುತ್ತದೆ. ಅಂತೆಯೇ ಆತ್ಮಗುಣಗಳಿಗೂ, ಮಾನವ ಮೌಲ್ಯಗಳಿಗೂ ನೇರ ಸಂಬಂಧವಿಲ್ಲ. ಅದು ಮತಕೋಲಾಹಲ ಎಂದು ಆಕ್ಷೇಪಿಸಲ್ಪಟ್ಟಿದೆ ಎಂದು ಹಲವು ಧರ್ಮಸೂಕ್ಷö್ಮ ಸಂಗತಿಗಳನ್ನು ವಿವರಿಸಿದರು.

ಶ್ರಿ ಸಂತೋಷ್ ಹಾನಗಲ್ ಅವರಿಗೆ ಗ್ರಂಥಾಲಯದ ವತಿಯಿಂದ ಹಾಗೂ ವಿವಿಧ ನಾಗರಿಕ ಸಂಘ, ಸಂಸ್ಥೆಗಳ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಡಾ.ನಾಗರಾಜ್, ಸಂಸ್ಕಾರ ಭಾರತೀ ತಾಲ್ಲೂಕು ಘಟಕದ ಅಧ್ಯಕ್ಷೆ ಉಷಾ ಶ್ರೀನಿವಾಸ್, ಸುರಭಿ ಸಂಗಮದ ಟ್ರಸ್ಟೀ ನಾಗರತ್ನಮ್ಮ, ಶಾಂತಾ. ಎನ್.ಸ್ವಾಮಿ, ಆನಂದರಾಜ್, ಮಂಜುನಾಥ್, ರೊಟೇರಿಯನ್‌ಗಳಾದ ಟಿ.ಎಸ್.ಪ್ರಕಾಶ್‌ಗುಪ್ತಾ, ಅರಳೀಕರೆ ಲೋಕೇಶ್, ಪ್ರಭುಸ್ವಾಮಿ, ಶಿವರಾಜ್, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಗೀತಾ ಸುರೇಶ್, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಕುವೆಂಪು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್, ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥಾಪಕ ಟಿ.ರಾಮಚಂದ್ರ ಸ್ವಾಗತಿಸಿದರು. ಕೃಷ್ಣಚೈತನ್ಯ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?