Thursday, April 25, 2024
Google search engine
Homeಜಸ್ಟ್ ನ್ಯೂಸ್ಬರುತ್ತಿದೆ ಮಾವಿಗೆ ರೋಗ: ಇಲ್ಲಿದೆ ಪರಿಹಾರ

ಬರುತ್ತಿದೆ ಮಾವಿಗೆ ರೋಗ: ಇಲ್ಲಿದೆ ಪರಿಹಾರ

Publicstory


ಗುಬ್ಬಿ: ಮಾವು ಬೆಳೆಯಲ್ಲಿ ಕಾಂಡ ಕೊರಕ, ಓಟೆ ಕೊರಕಹುಳು, ಥ್ರಿಪ್ಸ್ ಮತ್ತು ಹಣ್ಣಿನ ನೊಣ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಹೂ ಬಿಡುವ ಪೂರ್ವದಲ್ಲಿ ಮತ್ತು ನಂತರದಲ್ಲಿ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು ಎಂದು ಐಡಿಎಫ್ ಸಂಸ್ಥೆಯ ಸಹಾಯಕ ಯೋಜನಾ ನಿರ್ದೇಶಕ ಕೆ.ಎನ್.ಗುರುದತ್ ತಿಳಿಸಿದರು.

ತಾಲ್ಲೂಕಿನ ಸಿಎಸ್ ಪುರ ಹೋಬಳಿ ಅಡಿಕೆಕೆರೆಯಲ್ಲಿ ಸಿಎಸ್ ಪುರ ರೈತ ಉತ್ಪಾದಕರ ಕಂಪನಿ, ಐಡಿಎಫ್ ಸಂಸ್ಥೆ ಬೆಂಗಳೂರು ಹಾಗೂ ಸುಜೀವನ ಒಕ್ಕೂಟ ಗುಬ್ಬಿ ಇವರ ಅಶ್ರಯದಲ್ಲಿ ಏರ್ಪಡಿಸಿದ್ದ ಮಾವು ಬೆಳೆಗಾರರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ಸಾವಯವ ಪದಾರ್ಥಗಳನ್ನು ಬಳಸಿ ಮಾವಿನಲ್ಲಿ ಕೀಟ ಮತ್ತು ರೋಗಗಳನ್ನು ನಿಯಂತ್ರಣ ಮಾಡುವುದರಿಂದ ಹಣ್ಣುಗಳನ್ನು ಹೆಚ್ಚು ದಿನಗಳ ಕಾಲ ಸಂರಕ್ಷಿಸಲು ಪೂರಕವಾಗುತ್ತದೆ. ರೈತರಿಗೆ ಉತಮ್ಮ ಬೆಲೆಯು ಸಹ ದೊರೆಯುತ್ತದೆ. ಬೂದಿ ರೋಗ ಮತ್ತು ಜಿಗಿ ಹುಳುಗಳ ಬಾಧೆ ಕಂಡುಬಂದರೆ ಕಾಯಿ ಕಚ್ಚುವಿಕೆ ಕಡಿಮೆಯಾಗಿ ಮಿಡಿಗಾತ್ರದ ಕಾಯಿಗಳು ಉದುರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಸಾವಯವ ವಸ್ತುಗಳನ್ನು ಸಿಂಪಡಣೆ ಮಾಡಿ ಎಂದು ತಿಳಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ ಸಿಇಒ ಲೋಕೇಶ.ಡಿ, ಜಿವನೋಪಾಯ ಉತ್ತೇಜನಾಧಿಕಾರಿ ವಿನೋದಮ್ಮ, ಬಿಸಿಎ ನಳಿನ, ಲಕ್ಷ್ಮೀಕಾಂತ್, ಪ್ರಗತಿಪರ ರೈತರಾದ ದಿನೇಶ್, ನರಸೇಗೌಡ, ಬೀರಮಾರನಹಳ್ಳಿ ಶ್ರೀನಿವಾಸ್, ಕಂಚಿವರದ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?