Saturday, July 27, 2024
Google search engine
HomeUncategorizedಕಷ್ಟ ಕಂಡು ಕಣ್ಣೀರಾದ ಶಾಸಕ ಕೃಷ್ಣಪ್ಪ

ಕಷ್ಟ ಕಂಡು ಕಣ್ಣೀರಾದ ಶಾಸಕ ಕೃಷ್ಣಪ್ಪ

ತುರುವೇಕೆರೆ: ಸ್ಥಳೀಯ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ತುಮಕೂರು ಜಿಲ್ಲಾ ಬರ ಅಧ್ಯಯನ ತಂಡವು ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಭೂಮಿಗಳಿಗೆ ಗುರುವಾರ ಭೇಟಿ ನೀಡಿ ಮುಂಗಾರು ಹಂಗಾಮು ಬೆಳೆ ಹಾನಿಯ ವೀಕ್ಷಣೆ ಮಾಡಿ, ರೈತರ ಹಲವು ಸಮಸ್ಯೆಗಳನ್ನು ಆಲಿಸಿ, ನಷ್ಟ ಹೊಂದಿರುವ ರೈತರಿಗೆ ಸಕರ್ಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

ನಂತರ ಪತ್ರರ್ಕರೊಂದಿಗೆ ಮಾತನಾಡಿದ ಅವರು ಬೆಳಗ್ಗೆ ಗುಬ್ಬಿಗೆ ಹೋಗಿ ಅಲ್ಲಿ ರೈತರು ಬೆಳೆದ ಬೆಳೆಗಳ ವೀಕ್ಷಣೆ ಮಾಡಿದೆವು. ಕಳೆದ ಎರಡು ದಿನಗಳಿಂದ ಸೋನೆ ಮಳೆ ಬಂದು ರಾಗಿ ಸೇರಿದಂತೆ ಮಂಗಾರು ಬೆಳೆಗಳು ಸ್ವಲ್ಪ ಹಸಿರು ಕಾಣುತ್ತವೆ ಆದರೆ ಈಗಾಗಲೇ ಬಹುಪಾಲು ಬೆಳೆಗಳು ಸಂಪೂರ್ಣ ಬಾಡಿ ಹೋಗಿವೆ.

ರಾಗಿ ಬೆಳೆ ರೈತರ ಕೈಗೆ ಸಿಗೋಲ್ಲ ಚಿಕ್ಕನಾಯಕನಹಳ್ಳಿ ತೀವ್ರ ಬರ ಇದೆ. ತುರುವೇಕೆರೆ, ತಿಪಟೂರೂ ಅದೇ ಕತೆ. ರೈತನ ಕಷ್ಟ ನೋಡಿದರೆ ಬಹಳ ನೋವಾಗುತ್ತದೆ. ಒಂದು ಎಕರೆ ಬೇಸಾಯ ಮಾಡಲು ರೈತರ ಕಷ್ಟ ನೋಡೋದಿಕ್ಕೆ ಆಗಲ್ಲ.

ರೈತ ದೈಹಿಕ ಹಾಗು ಆಥರ್ಿಕ ಸಂಪತ್ತನ್ನು ಆಕಾಶ ನೋಡಿ ಭೂಮಿಗೆ ಬೀಜ ಹಾಕಿದ್ದಾನೆ ಆರಂಭದಲ್ಲಿ ಒಂಚೂರು ಮಳೆ ಬಂದು ಈಗ ಸಂಪೂರ್ಣ ಮಳೆಹೋಗಿ ಬೆಳೆಯಲ್ಲಾ ಕಮರಿ ಹೋಗಿದೆ.

ಹಾಗಾಗಿ ನಾನು ಸಕರ್ಾರ ಒತ್ತಾಯ ಮಾಡುವುದು ಇಷ್ಟೇ ನೀವು ಕೇಂದ್ರದ ಕಡೆ ಕೈ ತೋರಿಸಿ ಕಾಲಹರಣ ಮಾಡದೆ ರೈತರ ಸಂಕಷ್ಟ ಆಲಿಸಿ. ಅಂದು ಎಚ್.ಡಿ.ಕುಮಾರ್ ಸ್ವಾಮಿಯವರು ಕೇಂದ್ರ ಸಕರ್ಾರವನ್ನು ಕೇಳದೆ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು.

ನಮ್ಮ ಪಕ್ಷ ರೈತರ ಪರವಾಗಿದ್ದು ರಾಜ್ಯದ ಎಲ್ಲ ಭಾಗಗಳಲ್ಲೂ ಭೇಟಿ ನೀಡಿ ರೈತರ ಕಷ್ಟ ಕೇಳುತ್ತಿದ್ದೇವೆ. ಶೀಘ್ರವೇ ಜೆಡಿಎಸ್ ವರಿಷ್ಠರಾದ ದೇವೇಗೌಡರೊಂದಿಗೆ ನಾವೆಲ್ಲ ಪ್ರಧಾನಿಗಳ ಹತ್ತಿರ ನಿಯೋಗ ಹೋಗಿ ರೈತರು ಅತೀವ ಸಂಕಷ್ಟದಲ್ಲಿದ್ದಾನೆ ನೀವು ಪರಿಹಾರದ ಹಣ ಕೊಡಬೇಕೆಂದು ಕೇಳುತ್ತೇವೆ. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಸಚಿವರು ಜಿಲ್ಲೆಯಲ್ಲಿ ಬರ ಅಧ್ಯಯನ ಮಾಡಿ ಪರಿಹಾರ ಕೊಡಲಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಇಒ ಶಿವರಾಜಯ್ಯ, ತಾಲ್ಲೂಕು ಕೃಷಿ ಅಧಿಕಾರಿ ಪೂಜಾ.ಬಿ, ತಿಪಟೂರು ಮುಖಂಡರಾದ ಶಾಂತಕುಮಾರ್, ಗುಬ್ಬಿ ನಾಗರಾಜು, ಕುಣಿಗಲ್ ಎನ್.ಜಗದೀಶ್, ಜೆಡಿ ಎಸ್ ವಕ್ತಾರ ವೆಂಕಟಾಪುರ ಯೋಗೀಶ್,
ಸ್ಥಳೀಯ ಮುಖಂಡರಾದ ವಿಜಯೇಂದ್ರ, ತ್ಯಾಗರಾಜು ಜಗದೀಶ್, ವಿಜಯಕುಮಾರ್, ಜಯಗಿರಿಶಂಕರ್, ಬೋರೇಗೌಡ ಮಾಯಸಂದ್ರ ಬಾಬು, ಸೋಮಣ್ಣ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?