Sunday, December 10, 2023
spot_img
Homeಸುದ್ದಿಗೋಷ್ಠಿಆ.26ಕ್ಕೆ ರಾಜ್ಯಮಟ್ಟದ ತಿಗಳ ಕ್ಷತ್ರಿಯ ಸಮಾವೇಶ : ನೆ.ಲ.ನರೇಂದ್ರಬಾಬು

ಆ.26ಕ್ಕೆ ರಾಜ್ಯಮಟ್ಟದ ತಿಗಳ ಕ್ಷತ್ರಿಯ ಸಮಾವೇಶ : ನೆ.ಲ.ನರೇಂದ್ರಬಾಬು

Publicstory/prajayoga

ತುರುವೇಕೆರೆ: ಆ. 26  ಬೆಳಿಗ್ಗೆ  10ಗಂಟೆಗೆ ತುಮಕೂರಿನ ಗಾಜಿನ ಮನೆಯಲ್ಲಿ ರಾಜ್ಯ ಮಟ್ಟದ ತಿಗಳ ಕ್ಷತ್ರಿಯರ ರ ಸಮಾವೇಶವನ್ನು  ಹಮ್ಮಿಕೊಳ್ಳಲಾಗಿದೆ ಎಂದು  ಕೆ.ಟಿ.ಎಸ್.ವಿ. ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ನೆ.ಲ.ನರೇಂದ್ರಬಾಬು ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದ್ಗುರು ಮಹಾಲಕ್ಷ್ಮಿಪೀಠದ  ಶ್ರೀ ಜ್ಞಾನಾನಂದಪುರಿ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಗುರುವಂದನೆ ಸಲ್ಲಿಸಲಾಗುವುದು,  ನಮ್ಮ ಹಕ್ಕುಗಳ ಬಗ್ಗೆ , ತಿಗಳ ಸಮುದಾಯವನ್ನು ಪ್ರವರ್ಗ- 1 ಕ್ಕೆ ಸೇರಿಸುವಂತೆ ಒತ್ತಡ ತರುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳುವುದು. ತಿಗಳ ಸಮುದಾಯವನ್ನು ಔದ್ಯೋಗಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಜಾಗೃತಿ  ಮೂಡಿಸುವ ಸಮಾವೇಶವಾಗಿ ಮಹತ್ವ ಪಡೆದುಕೊಳ್ಳಲಿದೆ ಎಂದರು.

ಸಮಾವೇಶಕ್ಕೆ ಪಾಂಡಿಚೆರಿಯ ಮುಖ್ಯಮಂತ್ರಿ ಪಿ.ಆರ್. ರಂಗಸ್ವಾಮಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಪಾಂಡಿಚೆರಿ  ಸಭಾಪತಿ  ಆರ್. ಸೆಲ್ವಂ, ಸಂಸದ ಬಸವರಾಜುರವರು, ಮಂತ್ರಿಗಳಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್ ಶಾಸಕ ಜ್ಯೋತಿ ಗಣೇಶ್, ಮಸಾಲಜಯರಾಮ್, ಸೇರಿದಂತೆ ಸಚಿವ ಸಂಪುಟದ ಮಂತ್ರಿ ಮಹೋದಯರು, ವಿರೋಧ ಪಕ್ಷದ ನಾಯಕರುಗಳು ಎಲ್ಲಾ ರಾಜಕೀಯ ಮುಖಂಡರುಗಳು, ಸಮುದಾಯದ ಹಿತ ಬಯಸುವ ಗಣ್ಯರು ಪಾಲ್ಗೊಳ್ಳಲಿದ್ದಾರೆ.  ತಿಗಳ ಸಮುದಾಯದ ಅಭಿವೃದ್ಧಿಗೆ ಪೂರಕವಾದ ಪತ್ಯೇಕ ನಿಗಮ ಸ್ಥಾಪಿಸುವಂತೆ ಒತ್ತಾಯ ಮಾಡುವ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು. ರಾಜಕೀಯವಾಗಿ ಹಿನ್ನಡೆ ಅನುಭವಿಸುತ್ತಿರುವ ಸಮುದಾಯದ ಮುಂದಿನ ನಡೆ ಬಗ್ಗೆ  ಬಹುಮುಖ್ಯವಾಗಿ ಚರ್ಚೆಯಾಗಲಿದೆ.  ಸುಮಾರು 10  ಸಾವಿರ ಮಂದಿ ಸಮುದಾಯ ಬಂದುಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ವೇಳೆ ವಿಶ್ವ ತಿಗಳ ಸಮಾಜದ ಅಧ್ಯಕ್ಷ  ಸೂರ್ಯಪ್ರಕಾಶ್, ಗ್ರಾ.ಪಂ. ಸದಸ್ಯ ಪಾಂಡುರಂಗಯ್ಯ, ವಿಎಸ್ಎಸ್ಎನ್ ಮಾಜಿ ಅದ್ಯಕ್ಷ ಕೋಳಿವೆಂಕಟೇಶ್, ಜಿಪಂ. ಮಾಜಿ ಸದಸ್ಯ ಅರ್ಜುನ್, ಮುಖಂಡರಾದ ರುದ್ರೇಗೌಡರು, ರೇವಣಸಿದ್ದಯ್ಯ, ಶಿವಣ್ಣ, ಹುಚ್ಚೇಗೌಡ, ಸೇರಿದಂತೆ ಅನೇಕರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು