Saturday, July 27, 2024
Google search engine
Homeಪೊಲಿಟಿಕಲ್ತುಮಕೂರು: ಸಿದ್ದರಾಮಯ್ಯ ಬಗ್ಗೆ ಸ್ಥಳೀಯ ನಾಯಕರು ಹೇಳಿದ್ದೇನು?

ತುಮಕೂರು: ಸಿದ್ದರಾಮಯ್ಯ ಬಗ್ಗೆ ಸ್ಥಳೀಯ ನಾಯಕರು ಹೇಳಿದ್ದೇನು?

Publicstory/prajayoga

ಡಾ. ರಫೀಕ್ ಅಹ್ಮದ್,
ಮಾಜಿ ಶಾಸಕರು ಕಾಂಗ್ರೆಸ್

ಸಿದ್ದರಾಮಯ್ಯ ಧೀಮಂತ ನಾಯಕ. ದೇವರಾಜು ಅರಸು ನಂತರ ಅತ್ಯತ್ತಮ ಆಡಳಿತ ನೀಡಿದ ಆಡಳಿತಗಾರ. ಯಾರಿಗೂ ತಾರತಮ್ಯ ಮಾಡದೆ ಎಲ್ಲರನ್ನೂ ಸಮಾನವಾಗಿ ಕಂಡವರು. ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ವರ್ಗದವಗೆ ಅನುಕೂಲಕ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಸಮ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.

__________________________________________

ಮುರಳೀಧರ ಹಾಲಪ್ಪ, ಕಾಂಗ್ರೆಸ್, ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು

ಸಿದ್ದರಾಮಯ್ಯ ಇಡೀ ದೇಶಕ್ಕೆ ಮಾದರಿಯಾಗಿರುವ ಅತ್ಯತ್ತಮ ಆಡಳಿತ ಕೊಟ್ಟವರು. ಅವರು ಜಾರಿಗೊಳಿಸಿರುವ ಜನಪರ ಯೋಜನೆ, ಕಾರ್ಯಕ್ರಮಗಳು ಚಿರಸ್ಮರಣೀಯ.

___________________________________________

ಕೊಂಡವಾಡಿ ಚಂದ್ರಶೇಖರ್,
ಮಾಜಿ ಅಧ್ಯಕ್ಷ, ತುಮುಲ್

ಎಲ್ಲರೂ ಒಪ್ಪಿಕೊಂಡ ಜನ ನಾಯಕ ಸಿದ್ದರಾಮಯ್ಯ. ಅವರು ಜಾರಿಗೊಳಿಸಿರುವ ಕಾರ್ಯಕ್ರಮಗಳು ದಮನಿತರಿಗೆ ಹೊಸ ಶಕ್ತಿ ನೀಡಿವೆ. ಜೊತೆಗೆ ರೈತರ ಬದುಕಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ. ಕ್ಷೀರ ಭಾಗ್ಯ ಯೋಜನೆ ರೈತರಿಗೆ ನೇರ ಪ್ರಯೋಜನ ನೀಡಿದ್ದಲ್ಲದೆ, ಬಡ ಮಕ್ಕಳ ಅಪೌಷ್ಠಿಕತೆ ನೀಗಿಸಲು ಕಾರಣೀಭೂತವಾಗಿದೆ.

___________________________________________

ಲಂಕೆಪ್ಪ ಪುಲಮಘಟ್ಟ
ಕಾಂಗ್ರೆಸ್ ಮುಖಂಡರು, ಮಧುಗಿರಿ

ನಾಡಿನ ಜನಪ್ರಿಯ ನಾಯಕ. ಮನೆ ಮನೆಗೆ ಅನ್ನ ನೀಡಿದ ಅನ್ನದಾತ, ಸರ್ವ ಜನಾಂಗದ ನಾಯಕ. ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಸಿದ್ದರಾಮಯ್ಯ ನೀಡಿದ್ದಾರೆ. ಅವರ ಅವಧಿಯಲ್ಲಿ ಪ್ರತಿ ಕುಂಟುಂಬದವರಿಗೂ ಯೋಜನೆಗಳು ತಲುಪಿವೆ. ಈ ನಾಡಿಗೆ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ.

___________________________________________

ಮೈಲಪ್ಪ, ಅಧ್ಯಕ್ಷರು
ಕಾಳಿದಾಸ ವಿದ್ಯಾವರ್ಧಕ ಸಂಘ

ಎಲ್ಲಾ ಸಮುದಾಯಗಳಿಗೆ ಧ್ವನಿಯಾದ ನಾಯಕ. ರಾಜ್ಯದ ಜನರು ಬಡತನ ಹಾಗೂ ಹಸಿವಿನಿಂದ ಇರಬಾರದು ಎನ್ನುವ ಕಾರಣಕ್ಕೆ ಅನ್ನಭಾಗ್ಯದ ಜೊತೆಗೆ ಜನಪರ ಯೋಜನೆಗಳನ್ನು ಜಾರಿಗೆ ತಂದರು. ಅವರು ನುಡೆದಂತೆ ನಡೆಯುವ ನಾಯಕ.

___________________________________________

ಲಕ್ಷ್ಮೀ ನಾರಾಯಣ್
ಗ್ರಾಪಂ ಸದಸ್ಯರು, ಚಂದ್ರಗಿರಿ

ಜಾತ್ಯಾತೀತ ಮತ್ತು ಪಕ್ಷಾತೀತ ರಾಜಕಾರಣಿ ಸಿದ್ದರಾಮಯ್ಯ.  ಅವರು ನೀಡಿರುವ ಐದು ವರ್ಷದ ಆಡಳಿತ ಪ್ರಶ್ನಾತೀತವಾಗಿದೆ. ಎಲ್ಲ ವರ್ಗಗಗಳು ಸಮಾನ ಸೌಲಭ್ಯಗಳನ್ನು ಪಡೆದುಕೊಂಡಿವೆ. ಬಡವರಿಗಾಗಿ ಸದಾ ಮಿಡಿಯುವ ಹೃದಯ ಅವರದ್ದು, ಬಡವರಿಗಾಗಿ ನೀಡಿರುವ ಅವರ ಕೊಡುಗೆಗಳು ಅಪಾರ.

___________________________________________

ಕೃಷ್ಣಮೂರ್ತಿ ಜಿ.ಕೆ,
ಬಿಜೆಪಿ ಮುಖಂಡರು, ಗೂಳೂರು

ದಕ್ಷ, ಪ್ರಾಮಾಣಿಕ ಹಾಗೂ ಸಾಮಾಜಿಕ ಕಳಕಳಿ ಬದ್ಧತೆಗೆ ಇರುವ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಹಿಂದುಳಿದ ವರ್ಗಗಳ ಪರವಾಗಿ ನಿಂತವರು. ಗಟ್ಟಿ ಧ್ವಿನಿಯಲ್ಲಿ ನ್ಯಾಯ ಕೇಳುವ ನಾಯಕ. ನಮ್ಮ ಸಮಾಜದಲ್ಲಿ ಅಂತವೊಬ್ಬ ನಾಯಕನಿರುವುದಕ್ಕೆ ಹೆಮ್ಮೆ ಇದೆ. ಆದರೆ, ಒಂದು ಜನಾಂಗಕ್ಕೆ ಸೀಮಿತವಾಗದೆ ಅವರು ಸರ್ವ ಜನರ ನಾಯಕರಾಗಿದ್ದಾರೆ.

___________________________________________

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?