Saturday, July 27, 2024
Google search engine
Homeಪೊಲಿಟಿಕಲ್ಸ್ಪರ್ಧೆಗೆ ಚಾಂಪಿಯನ್ ಶರಣ್ಯಾಳ ಪರದಾಟ:  ಶಾಸಕ ಡಾ.ಜಿ.ಪರಮೇಶ್ವರ್ ಪ್ರಾಯೋಜಕತ್ವದ ಭರವಸೆ

ಸ್ಪರ್ಧೆಗೆ ಚಾಂಪಿಯನ್ ಶರಣ್ಯಾಳ ಪರದಾಟ:  ಶಾಸಕ ಡಾ.ಜಿ.ಪರಮೇಶ್ವರ್ ಪ್ರಾಯೋಜಕತ್ವದ ಭರವಸೆ

Publicstory/prajayoga

ತುಮಕೂರು: ಪಶ್ಚಿಮ ಬಂಗಾಳದ ಸತ್ಯಜಿತ್ ರಾಯ್ ಇನ್‌ಡೊರ್ ಸ್ಟೆಡಿಯಂನಲ್ಲಿ ವ್ಯಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೇಷನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ವ್ಯಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ತುಮಕೂರಿನ ಸಿದ್ದಾರ್ಥ ನಗರದ 12ವರ್ಷದ ಕುಮಾರಿ ಶರಣ್ಯ ಅವರು ಎರಡನೇ ಸ್ಥಾನ ಪಡೆದು, ಬೆಳ್ಳಿ ಪದಕ ಪಡೆಯುವ ಮೂಲಕ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದರು.

ಆದರೆ, ಕುಮಾರಿ ಶರಣ್ಯ ಅವರ ಪೋಷಕರು ಕೃಷಿ ಕುಟುಂಬದವರಾಗಿದ್ದು, ಮಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಕಳುಹಿಸಲು ಪರದಾಡುತ್ತಿದ್ದ ಸಂದರ್ಭದಲ್ಲಿ ವಿಷಯ ತಿಳಿದ ಆದೇ ಗ್ರಾಮದ ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ,ಕರ್ನಾಟಕ ಅಮೆಚೂರ್ ಅಥ್ಲೇಟಿಕ್ ಸಂಸ್ಥೆಯ ಅಧ್ಯಕ್ಷರು ಮತ್ತು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಅವರು ಎರಡು ಸ್ಪರ್ಧೆಗಳ ಪ್ರಯೋಜಕತ್ವವನ್ನು ವಹಿಸಿಕೊಂಡು, ಇಡೀ ಖರ್ಚುನ್ನು ವಹಿಸಿಕೊಂಡಿದ್ದಾರೆ. ಮುಂಬರುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಪ್ರಯೋಜಕತ್ವ ನೀಡಿದ್ದಾರೆ.
ಕುಮಾರಿ ಶರಣ್ಯ ಅವರ ಕ್ರೀಡಾ ಸಾಧನೆಯನ್ನು ಮೆಚ್ಚಿ ಗೌರವಿಸಿರುವ ಡಾ.ಜಿ.ಪರಮೇಶ್ವರ್, ಈಕೆಯ ಸಾಧನೆಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿದ್ದಾರೆ.

ತುಮಕೂರು ತಾಲೂಕು ಸಿದ್ದಾರ್ಥ ನಗರ(ಗೊಲ್ಲಹಳ್ಳಿ)ಯ ಕೃಷಿಕ ದಂಪತಿಗಳಾದ ಆನಂದಕುಮಾರ್ ಮತ್ತು ಶ್ರೀಮತಿ ನಿರ್ಮಲ ಅವರ ಪುತ್ರಿ, ಊರುಕೆರೆಯ ಜೈನ್ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿರುವ ಶರಣ್ಯ ಕಲ್ಕತ್ತಾ ನಗರದಲ್ಲಿ ನಡೆದ ರಾಷ್ಟ್ರ ಮಟ್ಟದ ಕಿಕ್‌ಬಾಕ್ಸಿಂಗ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು 2022ರ ಸೆಪ್ಟಂಬರ್ 16-25 ರವರೆಗೆ ಐರ್ಲೆಂಡ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.

ಓದು ಮತ್ತು ಬಾಕ್ಸಿಂಗ್ ಎರಡರಲ್ಲಿಯೂ ಮುಂದಿರುವ ಕುಮಾರಿ ಶರಣ್ಯ, ಒಂದನೇ ತರಗತಿಯಿಂದಲೇ ಸ್ವಯಂರಕ್ಷಣೆ ಮತ್ತು ಕ್ರೀಡೆಯಾಗಿ ಕರಾಟೆಯನ್ನು ಆಯ್ಕೆ ಮಾಡಿಕೊಂಡಿದ್ದು, ಕರಾಟೆಯಲ್ಲಿಯೂ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಈಕೆಯ ಸಾಧನೆಯನ್ನು ಗಮನಿಸಿದ ಶರಣ್ಯ ಅವರ ತರಬೇತುದಾರರಾದ ರಂಗಸ್ವಾಮಿ ಅವರು, ಈಕೆಯನ್ನು ಕಿಕ್‌ಬಾಕ್ಸಿಂಗ್ ಕಲಿಯುವಂತೆ ಪ್ರೇರೆಪಿಸಿ, ಸ್ವತಃ ಅವರಿಗೆ ತರಬೇತಿಯನ್ನು ನೀಡಿದ್ದರು.

ವ್ಯಾಕೋ ಇಂಡಿಯಾ ಕಿಕ್‌ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಮೈಸೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಿಕ್‌ಬಾಕ್ಸಿಂಗ್ ಸ್ಪರ್ಧೆಯಲ್ಲಿ ಶರಣ್ಯ ಚಿನ್ನದ ಪದಕ ಹಾಗೂ ಬೆಳ್ಳಿ ಪದಕ ಪಡೆದಿದ್ದರು. 2022ರ ಜುಲೈ 16-23ರವರೆಗೆ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?