ತುಮಕೂರು: ತುಮಕೂರು ವಕೀಲರ ಸಂಘದ ಚುನಾವಣೆಯ ಕಾವು ಜೋರಾಗಿದೆ.
![](https://publicstory.in/wp-content/uploads/2023/04/photo_15949187113083666459519309314769.png)
ಜೂನ್ 9ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಪತ್ರ ಸ್ವೀಕಾರ ಆರಂಭಗೊಂಡಿದ್ದು, ಈ ಸಲ ತುರುಸಿನ ಸ್ಪರ್ಧೆ ಕಂಡು ಬಂದಿದೆ.
![](https://publicstory.in/wp-content/uploads/2023/05/img-20230526-wa00067633744247413890226.jpg)
ಶುಕ್ರವಾರ ಕೇಂದ್ರೀಯ ಸಮಿತಿ ಸದಸ್ಯ ಸ್ಥಾನಕ್ಕಾಗಿ ಹಿರಿಯ ವಕೀಲ ಎಂ.ಬಿ.ನವೀನ್ ಕುಮಾರ್ ನಾಮಪತ್ರ ಸಲ್ಲಿಸಿದರು. ಈ ವೇಳೆ ವಕೀಲರಾದ ವಿರೂಪಾಕ್ಷ, ಅನಿತಾ, ರಮ್ಯಾ, ನೇತ್ರ, ಸಿದ್ದಣ್ಣ ಇತರರು ಇದ್ದರು. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮರು ಆಯ್ಕೆ ಬಯಸಿ ಹಿಮಾನಂದ್ ಅವರು ಪ್ರಚಾರ ನಡೆಸುತ್ತಿದ್ದಾರೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ತಮ್ಮದೇ ಸಿಂಡಿಕೇಟ್ ರಚಿಸಿಕೊಂಡು ಸ್ಪರ್ಧೆ ಮಾಡುವ ಬಗ್ಗೆಯೂ ವಕೀಲರ ನಡುವೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ತಮ್ಮದೇ ಬಣದ ನಾಯಕರನ್ನು ಕಣಕ್ಕಿಳಿಸುವ ಯತ್ನವನ್ನು ಕೆಲವು ವಕೀಲರ ತಂಡ ಮಾಡುತ್ತಿದೆ.
ಲ