Publicstory
ತುರುವೇಕೆರೆ: ಬೇಸಿಗೆ ಸಮೀಪಿಸುತ್ತಿದ್ದು ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದೆಂದು ಶಾಸಕ ಮಸಾಲಯರಾಂ ಹೇಳಿದರು.
ತಾಲ್ಲೂಕು ದಬ್ಬೇಘಟ್ಟ ಹೋಬಳಿಯ ಮಾವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಮಲ್ಲೇನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಎಸ್ ಟಿಪಿ ಟಿಎಸ್ಪಿ ಯೋಜನೆಯಡಿಯಲ್ಲಿ ಕಡೇಹಳ್ಳಿ-ಮದ್ದನಹಳ್ಳಿ ಮಾರ್ಗದ ಮಾವಿನಕೆರೆಗೆ ರಸ್ತೆ ಸರಪಳಿ 1.90 ಯಿಂದ 2.20 ಹಾಗೂ 3.10 ರಿಂದ 3.50 ಕಿ.ಮೀ.ವರೆಗೆ ರಸ್ತೆ ದುರಸ್ತಿಗೆ ಸುಮಾರು 75 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ 15 ವರ್ಷಗಳಿಂದ ತಾಲ್ಲೂಕಿನಲ್ಲಿ ಕೆರೆಕಟ್ಟೆಗಳಿಗೆ ಹೇಮಾವತಿ ನಾಲಾ ನೀರು ಹರಿಯದೆ ಅಂರ್ತಜಲದ ಸಮಸ್ಯೆ ಜನರನ್ನು ಬಾಧಿಸುತ್ಥಾ ಜನಜಾನುವಾರಗಳಿಗೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ಬಿಗಡಾಯಿಸಿತ್ತು.
ನಾನು ಶಾಸಕನಾದ ನಂತರ ಶೇ.90ರಷ್ಟು ತಾಲ್ಲೂಕಿನ ಎಲ್ಲ ಕೆರೆ, ಕಟ್ಟೆಗಳಿಗೆ ಹೇಮಾವತಿ ನಾಲಾ ನೀರನ್ನು ಹಂತ ಹಂತವಾಗಿ ತುಂಬಿಸಲಾಗಿದ್ದು ಇದರಿಂದ ಅಂರ್ತಜಲದ ಮಟ್ಟ ಸುಧಾರಣೆಯಾಗಿ ರೈತರ ಕೊಳವೆಬಾವಿಗಳಲ್ಲಿ ಉತ್ತಮ ನೀರು ಲಭ್ಯವಾಗಿದೆ. ತೆಂಗು, ಅಡಿಕೆ, ಬಾಳೆ ಸೇರಿದಂತೆ ಇನ್ನಿತರ ವಾಣಿಜ್ಯ ಬೆಳೆಗಳಿಗೆ ಅನುಕೂಲವಾಗಲಿದೆ ಮತ್ತು ಜಾನುವಾರಗಳ ಕುಡಿಯುವ ನೀರಿನ ಕೊರತೆಯ ಪ್ರಮಾಣವೂ ತಗ್ಗುವ ವಿಶ್ವಾಸವಿದೆ ಎಂದರು.
ಪಕ್ಷಾತೀತವಾಗಿ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಈ ಸಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್, ಎಪಿಎಂಸಿ ವಿ.ಟಿ.ವೆಂಕಟರಾಮು, ಚಂದ್ರಯ್ಯ, ತಾತಯ್ಯ, ಗಣೇಶ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.