Wednesday, April 24, 2024
Google search engine
Homeತುಮಕೂರು ಲೈವ್ಸಿಬ್ಬಂದಿ ಗೈರು, ಲಸಿಕೆಗಾಗಿ ಕಾದ ಜನತೆ

ಸಿಬ್ಬಂದಿ ಗೈರು, ಲಸಿಕೆಗಾಗಿ ಕಾದ ಜನತೆ

ಪಾವಗಡ:  ಆಧಾರ್ ಮಾಹಿತಿ ಅಪ್ ಲೋಡ್ ಮಾಡುವ  ಸಿಬ್ಬಂದಿ ಆಗಮಿಸದ ಕಾರಣ ಭಾನುವಾರ ಪಟ್ಟಣದ ಅಂಬೇಡ್ಕರ್ ಭವನದ ಬಳಿ ಲಸಿಕೆ ಹಾಕಿಸಿಕೊಳ್ಳಲು ಜನತೆ ಗಂಟೆ ಗಟ್ಟಲೆ ಕಾಯಬೇಕಾಯಿತು.   .

ಕೋವಿ ಶೀಲ್ಡ್  ಮೊದಲ ಡೋಸ್,  ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಬೆಳಿಗ್ಗೆ ಅಂಬೇ್ಡ್ಕರ್ ಭವನಕ್ಕೆ ಜನತೆ ಬಂದು ಗಂಟೆಗಳ ಕಾಲ ಸರದಿಯಲ್ಲಿ ನಿಂತರು. ಮಾಹಿತಿ ಅಪ್ ಲೋಡ್ ಮಾಡುವ ನೌಕರ ಬಾರದ ಕಾರಣ  ಮಧ್ಯಾಹ್ನದ ವರೆಗೂ ಸರದಿಯಲ್ಲಿ ನಿಂತ ಸಾರ್ವಜನಿಕರು ಬೇಸತ್ತು ಆಕ್ರೋಶ ವ್ಯಕ್ತಪಡಿಸಿದರು.

ಹಲವೆಡೆಯಿಂದ ಲಸಿಕೆಗಾಗಿ ಬಂದಿದ್ದ  ಕೆಲವರು ಲಸಿಕೆ ಪಡೆಯದೆ ಹಿಂತಿರುಗಿದರು.

ತಾಲ್ಲೂಕು ವೈದ್ಯಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿಗಳಿಗೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸಬೂಬು ಹೇಳಿ ಸುಮ್ಮನಾಗಿದ್ದಾರೆ.

ಮಧ್ಯಾಹ್ನ 12. 20 ಕ್ಕೆ ಸಿಬ್ಬಂದಿಯನ್ನು ಕಳುಹಿಸಿ ಲಸಿಕೆ ಹಾಕಿಸಲು ಆರಂಭಿಸಲಾಯಿತು.

ಅಧಿಕಾರಿಗಳ ಬೇಜವಬ್ಧಾರಿತನದಿಂದ ಲಸಿಕೆಗಾಗಿ ಆಗಮಿಸಿದ ಜನತೆ ಗಂಟೆಗಟ್ಟಲೆ ಕಾಯಬೇಕಿದೆ. ಸಮಸ್ಯೆ ಬಗ್ಗೆ ಹೇಳಿದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಜವಬ್ಧಾರಿ ವರ್ಗಾಯಿಸಿ ನುಣುಚಿಕೊಳ್ಳುತ್ತಾರೆ. ಇನ್ನಾದರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ಸುಬ್ರಹ್ಮಣಿ, ಅನಿಲ್, ಹನುಮಂತರಾಯ, ರಾಜು, ಕಿರಣ್ ಇತರರು ಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?