Sunday, May 19, 2024
Google search engine
Homeಜನಮನಇವರೆಂದರೆ ಯಾಕಿಷ್ಟ?

ಇವರೆಂದರೆ ಯಾಕಿಷ್ಟ?

ಇವರೆಂದರೆ ಜನರಿಗೆ ಯಾಕಿಷ್ಟ? ಹೀಗೆ ಅನೇಕ ಪೊಲೀಸರು ಕೇಳುತ್ತಾರೆ. ಎಷ್ಟೋ ಜನರಿಗೆ ಇವರು ಒಡಹುಟ್ಟಿದ ಅಣ್ಣನೇ ಆಗಿ ಹೋಗಿದ್ದಾರೆ.

ಬಡವ, ಶ್ರೀಮಂತರು, ಆ ಜಾತಿ, ಈ ಜಾತಿ ಎಂಬುದಿಲ್ಲ. ಎಲ್ಲರಿಗೂ ಕೆ.ಆರ್. ಚಂದ್ರಶೇಖರ್ ಅವರನ್ನು ಕಂಡರೆ ಬಲು ಇಷ್ಟ.

ಪ್ರಾಣವನ್ನು ಲೆಕ್ಕಿಸದೇ ಜನರಿಗಾಗಿ ಏನು ಬೇಕಾದರೂ ಮಾಡಬಲ್ಲ ಪೊಲೀಸ್ ಅಧಿಕಾರಿ ಇವರು. ರಾಷ್ಟ್ರಪತಿ, ಮುಖ್ಯಮಂತ್ರಿ ಪದಕ ಯಾವತ್ತೋ ಬರಬೇಕಿತ್ತು. ಪೊಲೀಸ್ ಇಲಾಖೆಯಲ್ಲಿ ಒಬ್ಬನಿಂದ ಏನು ಮಾಡಲು ಸಾಧ್ಯವಿಲ್ಲ. ಪದಕ ಕೊಟ್ಟರೆ ನನ್ನ ಜತೆ ಕೆಲಸ ಮಾಡಿದ ತಂಡಕ್ಕೆ ಕೊಡಿ, ಇಲ್ಲವಾದರೆ ನನಗೂ ಬೇಡ ಎಂದು ಇಲಾಖೆಯಲ್ಲಿ ಹೇಳಿದ ಏಕೇಕ ಅಧಿಕಾರಿ ಇವರು.

ಆಗಿನ್ನೂ ಕೊರಟಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಬಂದಿದ್ದರು. ಏಕಾಏಕಿ ಚಿರತೆಯೊಂದು ಊರಿಗೆ ನುಗ್ಗಿತು. ಪತ್ರಕರ್ತರ ದಂಡು ಚಂದ್ರಶೇಖರ್ ಸರ್ ಜತೆಗೆ ಇತ್ತು. ಪತ್ರಕರ್ತರಿಗೆ ಸುದ್ದಿ ಮಾಡುವ ಹುಮ್ಮಸ್ಸು. ಇದೇ ಸಮಯದಲ್ಲಿ ಪತ್ರಕರ್ತರೊಬ್ಬರ ಮೇಲೆ ಹಾರಿಬಂದ ಚಿರತೆಯನ್ನು ಪ್ರಾಣ ಲೆಕ್ಕಿಸದೇ ಬರಿಗೈಲಿ ಹಿಡಿದವರು ಚಂದ್ರಶೇಖರ್. ಅವರ ಈ ಸಾಹಸ ಕಂಡು ಇಡೀ ತುಮಕೂರು ಜಿಲ್ಲೆ ಮೆಚ್ಚುಗೆ ಸೂಚಿಸಿತು. ಗೌರವದಿಂದ ಸೆಲ್ಯೂಟ್ ಮಾಡಿತು.

ಅಂಬೇಡ್ಕರ್, ಬಸವಣ್ಣ, ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಬೆಸಗರಹಳ್ಳಿ ರಾಮಣ್ಣ, ಶಿವರಾಮ ಕಾರಂತ ಹೀಗೆ ಅನೇಕ ಸಾಹಿತಿ ದಿಗ್ಗಜರನ್ನು ಓದಿಕೊಂಡಿರುವ ಬೆರಣಿಕೆಯ ಪೊಲೀಸ್ ಅಧಿಕಾರಿಗಳ ಸಾಲಿಗೆ ಇವರು ಸೇರುತ್ತಾರೆ.

ಠಾಣೆಗೆ ಬಂದ ಜನರಿಗೆ ನೋವಾಗದಂತೆ ವರ್ತಿಸುವ ಮಾನವೀಯ ಅಧಿಕಾರಿ ಎಂದೇ ಹೆಸರಾಗಿದ್ದಾರೆ. ಎಂತದೇ ಕೇಸಾದರೂ ಅಪರಾಧಿಗಳನ್ನು ಹುಡುಕುವಲ್ಲೂ ನಿಸ್ಸೀಮರು. ಅಪರಾಧದ ವಿಚಾರದಲ್ಲಿ ರಾಜೀ ಇಲ್ಲವೇ ಇಲ್ಲ.

ಕೊರಟಗೆರೆಯ ಜನಪ್ರಿಯ ಪೊಲೀಸ್ ಅಧಿಕಾರಿಯೆಂಬ ಹೆಗ್ಗಳಿಕೆ ಇವರಿಗೆ. ಚಂದ್ರಶೇಖರ್ ಸರ್ ಬಂದಿದ್ದಾರೆ ಎಂದರೆ ನೂರಾರು ಜನರು ಈಗಲೂ ಅಲ್ಲಿ ಸೇರುತ್ತಾರೆ.

ರೈತರನ್ನು ಕಂಡರೆ ಇನ್ನಿಲ್ಲದ ಪ್ರೀತಿ ಅವರಿಗೆ. ಸ್ವತಹ ಕೃಷಿಯನ್ನು ಮಾಡುತ್ತಾರೆ. ಹೊಲ ಉಳುಮೆ ಮಾಡುತ್ತಾ ಮಣ್ಣಿನ ಮಗನಾಗಿಯೂ ಗುರುತಿಸಿಕೊಳ್ಳುತ್ತಾರೆ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಮಂಡ್ಯದ ಮಣ್ಣಿನ ಘಮಲು ಬಿಟ್ಟಿಲ್ಲ.

ನಾಚಿ ನೀರಾಗುವ, ಹೊಸ ಕೃಷಿಕರನ್ನು ಕಂಡರೆ ನಾವೆಲ್ಲ IAS ಎನ್ನುತ್ತಾರೆ. ಅಂದರೆ ಇಂಡಿಯನ್ ಅಗ್ರಿಕಲ್ಚರ್ ಸರ್ವೀಸ್. ಮಣ್ಣಿನ ಮಕ್ಕಳೆಲ್ಲ IAS ಆಫೀಸರ್ ಗಳು ಎಂದೇ ಅವರ ಭಾವನೆ. ಹೀಗಾಗಿಯೇ ರೈತರಿಗೆ ಮೊದಲ ಗೌರವ ನೀಡುತ್ತಾರೆ.

ಜನರ ಕಷ್ಟ, ಸುಖದ ಜತೆ ಭಾಗಿಯಾಗುವ ತಾಯಿ ಹೃದಯದ ಅಧಿಕಾರಿ ಎಂದೇ ಜನಜನಿತ. ಪೊಲೀಸ್ ಇಲಾಖೆಯಲ್ಲಿ ಜನಸ್ನೇಹಿ ಅಧಿಕಾರಿಯ ಪಟ್ಟ ಸಿಗುವುದು ಸುಲಭ ಸಾಧ್ಯವಲ್ಲ. ಸದ್ಯ, ಸಿಐಡಿಯಲ್ಲಿ ಬೆಂಗಳೂರಿನಲ್ಲಿ ಡಿವೈ ಎಸ್ಪಿ ಆಗಿರುವ ಚಂದ್ರಶೇಖರ್ ಸರ್ ಅವರ ಹುಟ್ಟುಹಬ್ಬ ಈ ದಿನ. (ಜೂನ್ 28). ಇಂತಹ ಅಧಿಕಾರಿಗಳ ಸಂಖ್ಯೆ, ನೂರು ಸಾವಿರವಾದರೆ ಕನ್ನಡ ನಾಡು ಧನ್ಯೋಸ್ಮಿ ಆಗುವುದರಲ್ಲಿ ಸಂದೇಹಪಡಬೇಕಾಗಿಲ್ಲ.

ಪೊಲೀಸ್ ಅಧಿಕಾರಿ ಯಾಕಾಗಬೇಕು? ಹೇಗಿರಬೇಕು ಎಂಬುದಕ್ಕೆ ಚಂದ್ರಶೇಖರ್ ಅವರು ಇಲಾಖೆಯಲ್ಲಿ ಇಡುತ್ತಿರುವ ಹೆಜ್ಜೆ ಗುರುತುಗಳೇ ಆದರ್ಶವಾಗಬೇಕಾಗಿದೆ.

ಅವರ ಹುಟ್ಟು ಹಬ್ಬದ ಆಚರಣೆಯ ಸಂಭ್ರಮದಲ್ಲಿ ಮಿಂದೆದ್ದ ಎಲ್ಲ ಜನರಿಗೂ ಅವರೇ ಆದರ್ಶ, ಒಡಹುಟ್ಟಿದ ಅಣ್ಣ. ಒಬ್ಬ ಅಧಿಕಾರಿಯನ್ನು ಜನರು ಹೀಗೆ ತಮ್ಮ ಹೃದಯದಲ್ಲಿಟ್ಟು ಪೂಜಿಸಿ, ಆದರ್ಶ ವ್ಯಕ್ತಿಯಾಗಿಸಿಕೊಂಡಿದ್ದಾರೆ ಎಂದರೆ ಸುಖಾಸುಮ್ಮನೆಯ ಮಾತಲ್ಲ. ಎಲ್ಲ ಅಧಿಕಾರಿಗಳು ಚಂದ್ರಶೇಖರ್ ಸರ್ ಆಗಿಬಿಟ್ಟರೆ ಎಷ್ಟೊಂದು ಚೆಂದ ಅಲ್ಲವೇ?


ಸಿ.ಕೆ.ಮಹೇಂದ್ರ


RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?