Friday, April 19, 2024
Google search engine
Homeತುಮಕೂರ್ ಲೈವ್ಚಿಕ್ಕದೇವರಾಯನ ದುರ್ಗ ಅಂದ್ರೆ ಯಾವುದು ಗೊತ್ತೆ?

ಚಿಕ್ಕದೇವರಾಯನ ದುರ್ಗ ಅಂದ್ರೆ ಯಾವುದು ಗೊತ್ತೆ?

ತುಮಕೂರು:: ಜಿಲ್ಲೆಯ ಇತಿಹಾಸ ಪ್ರಸಿದ್ಧ ದೇವರಾಯದುರ್ಗದ ಮೂಲ ಹೆಸರು ಚಿಕ್ಕದೇವರಾಯನದುರ್ಗ. ಮೈಸೂರು ಸಂಸ್ಥಾನದ ಚಿಕ್ಕದೇವರಾಜ ಒಡೆಯರು ಇಲ್ಲಿಗೆ ಬಂದು ದೇವಾಲಯಗಳನ್ನು ಕಟ್ಟಿಸಿದರೆಂಬುದು ಇತಿಹಾಸದಿಂದ ತಿಳಿಯುತ್ತದೆ. ಇದೇ ಕಾರಣಕ್ಕೆ ಚಿಕ್ಕದೇವರಾಯನದುರ್ಗ ಎಂದು ಕಯಲ್ಪಟ್ಟಿತೆಂದು ಕಾಲಾನಂತರದಲ್ಲಿ ಅದು ದುವರಾಯನದುರ್ಗವಾಗಿ ಮಾರ್ಪಟ್ಟಿದೆ ಎಂದು ಜಯಚಾಮರಾಜೇಂದ್ರ ಒಡೆಯರ್ ಅವರ ನಾಲ್ಕನೇ ಅಳಿಯ ಅರ್. ರಾಜಚಂದ್ರ ತಿಳಿಸಿದರು.

ತುಮಕೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಾಬ್ದಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಯಚಾಮರಾಜೇಂದ್ರ ಒಡೆಯರ್ ತುಮಕೂರು ಜಿಲ್ಲೆಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಬೆಳ್ಳಾರದ ಚಿನ್ನದ ಗಣಿಗೆ ವಿದ್ಯುಚ್ಛಕ್ತಿ ಸಂಪರ್ಕ ಕಲ್ಪಿಸಿದವರು ಜಯಚಾಮರಾಜೇಂದ್ರ ಒಡೆಯರ್. ಜಯಮಂಗಲಿ ನದಿಗೆ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ, ಪಾವಗಡ, ಸಿರಾ, ಮಧುಗಿರಿ ಮತ್ತು ತುರುವೇಕೆರೆಗಳಲ್ಲಿ ಪುರಸಭೆ ಶಾಲೆಗಳನ್ನು ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ವಿವರಿಸಿದರು.

ತುಮಕೂರು ಜಿಲ್ಲೆಯಲ್ಲಿ 1832ಕ್ಕೂ ಮೊದಲು ಎಂಟು ತಾಲೂಕುಗಳು ಮಾತ್ರ ಇದ್ದವು. ಅವುಗಳಲ್ಲಿ ಚಿಕ್ಕನಾಯನಹಳ್ಳಿ, ಮಧುಗಿರಿ, ಸಿರಾ, ಕುಣಿಗಲ್ ಸೇರಿವೆ. ತುಮಕೂರು ಹಿಂದೆ ಯುದ್ದಗಳ ಕೇಂದ್ರವಾಗಿತ್ತು ಎಂಬುದು ಇಲ್ಲಿನ ಕೋಟೆ ಕೊತ್ತಲಗಳನ್ನು ನೋಡಿದರೆ ತಿಳಿಯುತ್ತದೆ. ಗಂಗ, ನೊಳಂಬರು ವಿಜಯನಗರ, ಮೊಘಲರು ಸೇರಿದಂತೆ ಕರ್ನಾಟಕವನ್ನು ಆಳಿದ ಎಲ್ಲಾ ರಾಜರು ಆಳ್ವಿಕೆ ಮಾಡಿಹೋಗಿದ್ದರೂ ತುಮಕೂರು ಪ್ರಮುಖ ನಗರವಾಗಿರಲಿಲ್ಲ ಎಂದರು.

ರಣಧೀರ ಕಂಢೀರವ ತುರುವೇಕೆರೆಯನ್ನು ವಶಪಡಿಸಿಕೊಂಡರು. ನಂತರ ದೇವರಾಜ ಒಡೆಯರು ಚಿಕ್ಕನಾಯಕನಹಳ್ಳಿಯನ್ನು ಸ್ವಾಧೀನಪಡಿಸಿಕೊಂಡರು.1673ರಲ್ಲಿ ಚಿಕ್ಕನಾಯಕನಹಳ್ಳಿ ಅರಮನೆಯಲ್ಲಿ ಸತ್ತುಹೋದರು. ಅಲ್ಲಿಂದ ಅವರನ್ನು ಶ್ರೀರಂಗಪಟ್ಟಣಕ್ಕೆ ತೆಗೆದುಕೊಂಡು ಹೋದರು ಎಂದು ಒಂದು ವಾಕ್ಯದ ಉಲ್ಲೇಖವಿದೆ.
ಮಂಟೇಸ್ವಾಮಿ ಮಠದ ಎಂ.ಎಲ್. ವರ್ಚಸ್ವೀ ಶ್ರೀಕಂಠ ಸಇದ್ದಲಿಂಗರಾಜೇ ಅರಸ್ ಮಾತನಾಡಿ ಮೈಸೂರು ಸಂಸ್ಥಾನದ ಕೊನೆಯ ದೊರೆ ಜಯಚಾಮರಾಜೇಂದ್ರ ಒಡೆಯರ್ ರಾಜರಾಗಿದ್ದರೂ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಳ್ವಿಕೆ ನಡೆಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅತ್ಯಂತ ದೊಡ್ಡ ನಿರ್ಧಾರಗಳನ್ನು ಕೈಗೊಂಡರು.

ಇಡೀ ಇಂಡಿಯಾದಲ್ಲಿ ಮೊದಲ ಬಾರಿಗೆ ಸಂಸ್ಥಾನವನ್ನು ಭಾರತದೊಳಗೆ ಸೇರ್ಪಡೆ ಮಾಡಲು ಒಪ್ಪಿಗೆ ಕೊಟ್ಟವರು. 1947ರಲ್ಲಿ ಮೈಸೂರು ಸಂಸ್ಥಾನವನ್ನು ಒಪ್ಪಿಸಿ ದರೂ ಅವರು ರಾಜರಾಗಿಯೇ ಮುಂದುವರಿದಿದ್ದರು. ಯಾಕೆಂದರೆ ಅವರು ತುಮಕೂರು ಜಿಲ್ಲೆಗೆ ಬಂದು ಹಲವು ಅವಿವೃದ್ದಿ ಕಾಮಗಾರಿಗಳನ್ನು ಉದ್ಘಾಟಿಸಿರುವುದು ಕಂಡು ಬರುತ್ತದೆ ಎಂದು ಹೇಳಿದರು.

ಮೈಸೂರು ಮಹಾರಾಜರು ಅಂದ್ರೆ ಅರಮನೆ ಕೋಟೆಯೊಳಗಿದ್ದು ರಾಜ್ಯಭಾರ ಮಾಡಿದವರು ಎಂದು ಜನರು ತಿಳಿಯುತ್ತಾರೆ. ಇದು ತಪ್ಪು. ಮಹಾರಾಜರ ಬಗ್ಗೆ ಜನರಿಗೆ ತುಂಬ ಗೌರವವಿದೆ. ಸರ್ಕಾರ ಅವರ ಹೆಸರಿನಲ್ಲಿ ಸೂಕ್ತ ವೇದಿಕೆಯನ್ನು ನಿರ್ಮಾಣ ಮಾಡಿ ಅವರು ಶಿಕ್ಷಣ, ಕೃಷಿ, ಕೈಗಾರಿಕೆ, ರೈಲ್ವೆ, ನೀರಾವರಿ, ಸಂಗೀತ, ಕ್ರೀಡೆ ಹೀಗೆ ಹಲವು ಕ್ಷೇತ್ರಗಳಿಗೆ ಕೊಟ್ಟ ಕೊಡುಗೆಯನ್ನು ಗುರುತಿಸಿ ಒಡೆಯರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಕೊಡಬೇಕು. ಭಾರತ ಸರ್ಕಾರ ಒಡೆಯರ್ ಸೇವೆಯನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ಮಾತನಾಡಿ, ಜಯಚಾಮರಾಜೇಂದ್ರ ಒಡೆಯರ್ 20 ಸಾವಿರ ಸಂಗೀತ ಕೃತಿಗಳನ್ನು ಇಟ್ಟುಕೊಂಡಿದ್ದರು. ವ್ಯಕ್ತಿತ್ವವನ್ನು ಹೇಳಲು ಸಾಧ್ಯವಿಲ್ಲ. ಹೆಚ್ಚು ಒತ್ತು ಕೊಡಿದ್ದು ಸಮಾಜವನ್ನು ಸರಿಮಾಡಲು ಸಂಸ್ಥೆಗಳನ್ನೇ ರೂಪಿಸಿದ್ದರು.

ಜಯಚಾಮರಾಜೇಂದ್ರ ಒಡೆಯರ್ ಒಬ್ಬ ಮೇಧಾವಿಯಾಗಿದ್ದರು. ಎಲ್ಲಾ ಸ್ಥಾನದಲ್ಲೂ ನ್ಯಾಯವನ್ನು ಒದಗಿಸಿದವರು. ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆದುಕೊಂಡು ಎಲ್ಲರನ್ನು ಸಮಾನತೆಯಿಂದ ನೋಡಿದವರು. ನಿಜವಾದ ಸತ್ವಯುತ ಜೀವನ ಕ್ರಮವನ್ನು ಕಲಿಸಿದವರು ಜಯಚಾಮರಾಜೇಂದ್ರ ಒಡೆಯರ್ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಪ್ರಾಸ್ತಾವಿಕ ಮಾತನಾಡಿದರು. ಜಯಚಾಮರಾಜೇಂದ್ರ ಒಡೆಯರ್ ಕೃತಿಯ ಲೇಖಕ ಕೆ.ಪಿ.ಲಕ್ಷ್ಮೀಕಾಂತರಾಜೇ ಅರಸ್, ಕೃತಿ ಸಂಪಾದನೆಗೆ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು. ಕಸಾಪ ಕಾರ್ಯದರ್ಶಿ ರವಿಕುಮಾರ್ ಸ್ವಾಗತಿಸಿದರು. ರಾಣಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಎಚ್.ಗೋವಿಂದಯ್ಯ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?