Saturday, April 13, 2024
Google search engine
Homeತುಮಕೂರು ಲೈವ್ನನ್ನೊಳಗಿನ ಜೀವವೇ...... 

ನನ್ನೊಳಗಿನ ಜೀವವೇ…… 

ಮಮತಾ ಗೌಡ

ಕಳೆದು ಹೋಗುವ ಮುನ್ನವೇ ಈ ಜೀವನ ಸೇರಿದ ಪ್ರೀತಿ. ನಿನಗೆ ಹೇಳಬೇಕೆಂದು ಕೊಂಡ ಯಾವುದೋ ಒಂದು ತುಡಿತ ನನ್ನೆದೆಯೂಳಗೆ ಹಾಗೆ ನೆಲೆಯೂರಿದೆ. ಹೇಳಲಾಗದೆ ಚಡಪಡಿಸುತ್ತಿರುವೆ.

ನಿನ್ನ ಪ್ರೀತಿಯಲ್ಲಿ ಸಿಲುಕಿದಾಗಿನಿಂದ ನಾನು ನಾನಾಗಿಲ್ಲ. ನನ್ನ ಯೋಚನೆಗಳು, ದಾರಿ ಬೇರೆಯಾಗಿದೆ. ಮನಸ್ಸು ಮಾತೇ ಕೇಳುತ್ತಿಲ್ಲ ಕಣೋ ಕನಸೆಲ್ಲಾ ನಿನ್ನದಾಗಿದೆ ನನಗೇಕೋ ಹೀಗೆಲ್ಲ ಎಂದು ಪ್ರಶ್ನಿಸಿದರು ಉತ್ತರವಿಲ್ಲ.

ಹೌದು ನನಗೇಕೆ ಹೀಗೆ? ನಿನ್ನೊಟ್ಟಿಗೆ ಆಡುವ ಆ ತುಂಟ ಜಗಳಕ್ಕೆ ಮನಸ್ಸು ಅದೆಷ್ಟೋ ಸಂತೋಷಿಸಿದೆ ನಾ ವಿವರಿಸಲಾರೆ. ನಿನ್ನೊಟ್ಟಿಗೆ ಕುಳಿತು ಕಳೆದ ನಿಮಿಷಗಳು ತಾಯಿಯ ಮಡಿಲಿಂದ ಮಗು ಜನ್ಮವ ಪಡೆದು ಹೊರ ಜಗತ್ತು ಕಾಣುವ ಹಾಗೆ ನಿನ್ನಲ್ಲಿ ನಾ ಆ ಹೊಸ ಜಗವ ಕಾಣುತಿಹೆನು….

ನನ್ನೊಳಗಿರುವ ನಿನ್ನನ್ನು ಪ್ರತಿ ಗಳಿಗೆಯೂ ನೆನೆಯುತ್ತಿರುತ್ತೆನೆ ಕಳೆದೋಗುವ ಮುನ್ನವೇ ಈ ಮನದಲ್ಲಿನ ಪ್ರೀತಿಯ ಪ್ರತಿಕ್ರಿಯೆಗೆ ಜೀವ ನೀಡು.

ಇಳಿ ಸಂಜೆ ತಂಪಾದ ಗಾಳಿಯಲ್ಲಿ ಕುಳಿತು ನಿನ್ನ ನೆನೆದಾಗ ದುಂಬಿಯ ಸ್ಪರ್ಶಕ್ಕೆ ಹೂವು ಹೇಗೆ ಅರಳುವುದೋ ಹಾಗೆ ನೀ ಕೊಟ್ಟ ಮುತ್ತು ನೆನಪಾಗಿ ಮನವು ಅರಳಿ ಹಕ್ಕಿಯಂತೆ ಹಾರಲಾರಂಬಿಸುತ್ತದೆ. ಕೆಲವೊಮ್ಮೆ ಈ ನೋವಿನ ಮನಕ್ಕೆ ನೀ ಕೊಟ್ಟ ಸಾಂತ್ವನ ಎಲ್ಲ ನೋವನ್ನು ಮರೆಸಿ ಸದಾ ಹಸನ್ಮುಖಿಯಾಗಿರುವಂತೆ ಮಾಡಿದೆ ನನ್ನನ್ನು. ಈ ಸಮಯ ನೀ ದೂರವಿದ್ದರೇನು?

ನೀ ನನ್ನಲ್ಲಿ ಕಟ್ಟಿದ ಆ ಸವಿನೆನಪುಗಳಲ್ಲೆ ನಾ ನಿನ್ನ ಕಾಣುತಿಹೆನು. ಈ ಹೃದಯಕ್ಕೆ ನಿನ್ನ ಪ್ರೀತಿಯ ರಾಯಭಾರಿ ನೀಡಿಯೇನು? ನನ್ನೆದೆಗೆ ಒಡೆಯನಾಗಿರುವ ನಿನಗೆ ನೋಟದಲ್ಲೆ ನನ್ನ ಬಂದಿಯಾಗಿಸಿದ ಆ ನಿನ್ನ ಎರಡು ಕಣ್ಗಳಿಗೆ ಚುಂಬಿಸಿ, ನಿನ್ನೆದೆಗೆ ಒಮ್ಮೆ ತಬ್ಬಿ, ತೋಳಬಂದಿಯಲ್ಲಿ ಬಂದಿಯಾಗಿರುವ ಬಯಕೆ ನನ್ನ ಕನಸಿನ ದೋಣಿಗೆ ನಾವಿಕ ನೀನೇ…… ನನ್ನ ಪ್ರತಿ ಹೆಜ್ಜೆಗೆ ಮರು ಹೆಜ್ಜೆ ನೀನದೆ ಹಾಗಿರಲಿ…….


ಮಮತಾ ಗೌಡ ಅವರು ಬೆಂಗಳೂರಿನವರು. ಬಿಕಾಂ ಓದಿರುವ ಅವರೀಗ ಭಾರತೀಯ ಆಡಳಿತ ಸೇವೆ ( IAS) ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಾರೆ.

ಹಿಂದೂಸ್ತಾನಿ ಗಾಯಕಿಯೂ ಆಗಿರುವ ಅವರಿಗೆ ಸಂಗೀತದಲ್ಲೇ ಹೆಚ್ಚು ಆಸಕ್ತಿ. ಬರವಣಿಗೆ ಅವರ ಇಷ್ಟದ ಕೆಲಸ. ಹಲವು ಪತ್ರಿಕೆಗಳಲ್ಲಿ ಅವರ ಬರಹಗಳು ಪ್ರಕಟವಾಗಿವೆ.

RELATED ARTICLES

1 COMMENT

  1. Nimmanna tumba Eshta padorna yavattu kalkobedi, tale Elo kelsa madbedi nim hrudaya elo kelsa maadi, yavattu negative mind nalli erbedi.

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?